ಹವಾಮಾನ ವೈಪರೀತ್ಯದಿಂದ ಇಂಗ್ಲೆಂಡ್ ತೀವ್ರ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಆಹಾರ ಕೊರತೆ ಮತ್ತು ಕಾಡ್ಗಿಚ್ಚಿನ ಅಪಾಯ ಕುರಿತು ರೈತ ಸಂಘಟನೆಗಳು ಹಾಗೂ ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಿರಂತರ ಬರ, ತೀವ್ರ ಉಷ್ಣಾಂಶ ಮತ್ತು ಅತೀ ಕಡಿಮೆ ಮಳೆಯ ಪರಿಣಾಮವಾಗಿ ಕೃಷಿ ಉತ್ಪಾದನೆ ಕುಸಿದಿದ್ದು, ಧಾನ್ಯ ಬೆಳೆಗಳಿಗೆ ಭಾರಿ ಹಾನಿಯಾಗಿದೆ.
ವರದಿಗಳ ಪ್ರಕಾರ, 2026ರ ಜುಲೈ ತಿಂಗಳು ಇಂಗ್ಲೆಂಡ್ನ ಇತಿಹಾಸದಲ್ಲೇ ಅತ್ಯಂತ ಒಣ ತಿಂಗಳುಗಳಲ್ಲಿ ಒಂದಾಗಿದೆ. ಗೋಧಿ, ಬಾರ್ಲಿ ಮತ್ತು ಓಟ್ಸ್ ಸೇರಿದಂತೆ ಪ್ರಮುಖ ಧಾನ್ಯ ಬೆಳೆಗಳ ಇಳುವರಿ ಗಣನೀಯವಾಗಿ ಕುಸಿದಿದ್ದು, ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ ಧಾನ್ಯ ಉತ್ಪಾದನೆ ದಾಖಲಾಗುವ ಸಾಧ್ಯತೆ ಇದೆ.
ರಾಷ್ಟ್ರೀಯ ರೈತ ಸಂಘಟನೆ (NFU) ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಇದೇ ಪರಿಸ್ಥಿತಿ ಮುಂದುವರಿದರೆ ಕೆಲವು ಆಹಾರ ಪದಾರ್ಥಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ರೈತರು ನೀರಾವರಿ ನಿರ್ಬಂಧ, ನೀರಿನ ಕೊರತೆ ಮತ್ತು ಉತ್ಪಾದನಾ ವೆಚ್ಚದ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ. ನೀರು ಸಂಗ್ರಹಣೆ ಮೂಲಸೌಕರ್ಯಕ್ಕೆ ಹೆಚ್ಚಿನ ಹೂಡಿಕೆ ಹಾಗೂ ಸರ್ಕಾರದಿಂದ ತುರ್ತು ನೆರವು ನೀಡುವಂತೆ ಸಂಘಟನೆ ಒತ್ತಾಯಿಸಿದೆ.
ಕಾಡ್ಗಿಚ್ಚಿನ ಅಪಾಯ ಹೆಚ್ಚಳ : ಬರ ಮತ್ತು ಉಷ್ಣಾಂಶದ ಪರಿಣಾಮ ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚಿದೆ. ರೈತ ಸಂಘಟನೆಗಳು ಮತ್ತು ಅಗ್ನಿಶಾಮಕ ಅಧಿಕಾರಿಗಳು ಸಾರ್ವಜನಿಕರು ಹೊರಾಂಗಣದಲ್ಲಿ ಬೆಂಕಿ ಬಳಸುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಕೆಲವು ಸಂಘಟನೆಗಳು ಒಮ್ಮೆ ಬಳಕೆಯ ಬಾರ್ಬಿಕ್ಯೂ ಸಾಧನಗಳಿಗೆ ತಾತ್ಕಾಲಿಕ ನಿಷೇಧ ಹೇರಬೇಕೆಂದು ಆಗ್ರಹಿಸಿವೆ.
ಹವಾಮಾನ ಬದಲಾವಣೆಯ ಪರಿಣಾಮ ಸ್ಪಷ್ಟ : ತಜ್ಞರ ಅಭಿಪ್ರಾಯದಲ್ಲಿ, ತೀವ್ರ ಬರ, ಅಸಹಜ ಉಷ್ಣಾಂಶ ಮತ್ತು ಕಾಡ್ಗಿಚ್ಚಿನ ಪ್ರಮಾಣ ಹೆಚ್ಚುತ್ತಿರುವುದು ಹವಾಮಾನ ಬದಲಾವಣೆಯ ನೇರ ಪರಿಣಾಮವಾಗಿದೆ. ಕೃಷಿ ಕ್ಷೇತ್ರವನ್ನು ಹವಾಮಾನಕ್ಕೆ ಹೊಂದಿಕೊಳ್ಳುವಂತೆ ರೂಪಿಸುವುದು, ನೀರಿನ ಸಮರ್ಥ ನಿರ್ವಹಣೆ ಹಾಗೂ ಹವಾಮಾನ ಸಹಿಷ್ಣು ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಈಗ ಅತ್ಯಗತ್ಯವಾಗಿದೆ.
ಬ್ರಿಟನ್ನಲ್ಲಿ 25 ಲಕ್ಷ ಟನ್ ಧಾನ್ಯ ಮತ್ತು ಎಣ್ಣೆಬೀಜ ಉತ್ಪಾದನೆ ನಷ್ಟ : ಎನರ್ಜಿ ಅಂಡ್ ಕ್ಲೈಮೇಟ್ ಇಂಟೆಲಿಜೆನ್ಸ್ ಯುನಿಟ್ (ECIU) ಅಂದಾಜಿನ ಪ್ರಕಾರ, ಈ ವರ್ಷದ ಹವಾಮಾನ ವೈಪರೀತ್ಯದಿಂದ ಬ್ರಿಟನ್ನಲ್ಲಿ ಸುಮಾರು 25 ಲಕ್ಷ ಟನ್ ಧಾನ್ಯ ಮತ್ತು ಎಣ್ಣೆಬೀಜ ಉತ್ಪಾದನೆ ನಷ್ಟವಾಗಬಹುದು. ಇದರಿಂದ ರೈತರಿಗೆ ಸುಮಾರು 390 ಮಿಲಿಯನ್ ಪೌಂಡ್ (ಸುಮಾರು ₹4,400 ಕೋಟಿ) ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ.
England is facing severe drought, raising concerns over food shortages and increasing wildfire risk. Crop yields have dropped sharply due to extreme heat and low rainfall, prompting farmers to seek urgent government support for water management and climate resilience.
ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್ನಿಂದ 2025-26ರಲ್ಲಿ…
ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…
ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ತಮಿಳುನಾಡು ಮೂರು ಹೊಸ ಆನೆ…
ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿ ಭಾಗದಲ್ಲಿ ಮಧ್ಯಮ ಸ್ತರದ ತಿರುವಿಕೆ ಉಂಟಾಗಿದ್ದು, ಇದರ ಪ್ರಭಾವದಿಂದ…
ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ…
ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 89 ತೀವ್ರ ಹಾಗೂ 12…