Advertisement
MIRROR FOCUS

ಕೀಟ ಜಗತ್ತಿನ ಅಗಾಧ ಅನಾವರಣ | ವಿಸ್ಮಯಕಾರಿ ಕೀಟ ಜಗತ್ತಿನಲ್ಲೊಂದು ಸುತ್ತು | ಕೀಟಗಳ ಪ್ರಯೋಜನ ಕುರಿತ ಕಾರ್ಯಗಾರ

Share

ಮನುಷ್ಯ(Human being) ತಾನೇ ಶ್ರೇಷ್ಠ. ಎಲ್ಲವೂ ತನ್ನಿಂದಲೇ, ತನಗೆ ಬೇಕಂತೆ ಎಲ್ಲವೂ ನಡೆಯುತ್ತದೆ ಎಂದು ಭಾವಿಸುತ್ತಾನೆ. ಆದರೆ ಈ ಮನುಜ ಒಂದು ಕ್ರಿಮಿ ಕೀಟಗಳಿಗೂ ಸಮಾನವಲ್ಲ. ಪ್ರಕೃತಿ(Nature)ಯಲ್ಲಿ ಮಾನವ ಬಿಟ್ಟು ಉಳಿದೆಲ್ಲಾ ಪ್ರಾಣಿ, ಪಕ್ಷಿ, ಕೀಟಗಳು ಇದ್ರೆನೇ ಈ ಮಾನವ ಹಾರಾಟ ಚೀರಾಟ ಅನ್ನೋದನ್ನು ಅರ್ಥನೇ ಮಾಡಿಕೊಂಡಿಲ್ಲ. ಅವುಗಳು ಇಲ್ಲದಿದ್ರೆ ನಮ್ಮ ಬದುಕು ನಶ್ವರ. ವಾಸ್ತವದಲ್ಲಿ ನಮ್ಮ ಬದುಕು ಜೇನ್ನೊಣ, ಇರುವೆ, ಗೆದ್ದಲು, ಜೇಡ, ಚಿಟ್ಟೆ, ದುಂಬಿಗಳ ರೆಕ್ಕೆ ಬಡಿತದ ಋಣದಲ್ಲಿದೆ.

118 ಕೆ.ಜಿ. ಹಸಿ ಕಾಫಿ ಹಣ್ಣುಗಳಿಂದ 50 ಕೆ.ಜಿ. ಚೆರ್ರಿ ಸಿಗುತ್ತೆ. ಅದನ್ನ ಹಲ್ಲಿಂಗ್ ಮಾಡಿದ್ರೆ 27 ಕೆ.ಜಿ ಕಾಫಿ ಬೀಜ ಸಿಗುತ್ತೆ.
ಅದನ್ನ ಹುರಿದು ಪುಡಿ ಮಾಡಿದ್ರೆ 20 ಕೆ.ಜಿ. ಕಾಫಿಪುಡಿ ಸಿಗುತ್ತೆ. 1 ಕೆ.ಜಿ. ಹಸಿ ಹಣ್ಣು ಅಂದ್ರೆ ಸುಮಾರು 800 ಹಣ್ಣುಗಳು ಬೇಕು.
118 ಕೆ.ಜಿ. ಅಂದ್ರೆ 94400 ಹಣ್ಣುಗಳು ಅಷ್ಟು ಹಣ್ಣಾಗಲು ಕನಿಷ್ಟ 1 ಲಕ್ಷ ಹೂ ಅರಳಬೇಕು. ಅಂದರೆ ಅಷ್ಟು ಹೂಗಳನ್ನು ಜೇನುಗಳು ಮತ್ತು ಇನ್ನಿತರ ಕೀಟಗಳು ಪರಾಗಸ್ಪರ್ಶ ಮಾಡಬೇಕು. ಒಂದು ಕಪ್ ಕಾಫಿ ಮಾಡಲು 5 ಗ್ರಾಂ ಕಾಫಿ ಪುಡಿ ಬೇಕು.
20 ಕೆ. ಜಿ. ಕಾಫಿ ಪುಡಿಗೆ 1 ಲಕ್ಷ ಹೂ ಅರಳಬೇಕು. 1 ಕೆ.ಜಿ.ಪುಡಿಗೆ 5000 ಹೂ ಬೇಕು. ಅಂದರೆ ಒಂದು ಕಪ್‌ ಕಾಫಿಯಾಗಲು 250 ಹೂಗಳನ್ನು ಕೀಟಗಳು ಪರಾಗಸ್ಪರ್ಶ ಮಾಡಬೇಕು.

ನಮ್ಮ ಬದುಕು ನಾವು ಪಡೆದುಕೊಂಡಿರುವ ಶಿಕ್ಷಣದ ಮೇಲೆ, ಸಂಬಳದ ಮೇಲೆ, ಕೂಡಿಟ್ಟ ಆಸ್ತಿ ಮೇಲೆ ಅವಲಂಬಿತವಾಗಿದೆ ಎಂದೇ ಯೋಚಿಸುತ್ತೇವೆ. ವಾಸ್ತವದಲ್ಲಿ ಬದುಕು ಜೇನ್ನೊಣ, ಇರುವೆ, ಗೆದ್ದಲು, ಜೇಡ, ಚಿಟ್ಟೆ, ದುಂಬಿಗಳ ರೆಕ್ಕೆ ಬಡಿತದ ಋಣದಲ್ಲಿದೆ. ಇದು ಒಂದು ಚಿಕ್ಕ ಉದಾಹರಣೆ ಅಷ್ಟೇ. ಪ್ರತೀ ಸಸ್ಯದ ಬದುಕಿನಲಿ ಒಂದಲ್ಲ ಒಂದು ಕೀಟವಿದೆ. ಪ್ರತೀ ಜೀವಿಯ ಬದುಕಿಗೆ ಆಧಾರವಾಗಿ ಒಂದಲ್ಲ ನೂರಾರು ಸಸ್ಯಗಳಿವೆ. ಈ ಜಗತ್ತನ್ನು ನಡೆಸುತ್ತಿರುವುದು ಅಪೂರ್ವ ಸಾಮರ್ಥ್ಯದ, ಅನನ್ಯ ಲಕ್ಷಣದ ಅಜೇಯ ಕೀಟಗಳು.

ಆದ್ದರಿಂದ Don’t use Pesticides / Insecticide Germicide / Fungicide & weedicides Seriously. ಸಿಕ್ಕಷ್ಟು ಸಿಕ್ಕಲಿ ಏನೀಗ? ಎಲ್ಲವನ್ನೂ ನಾವೇ ಅನುಭವಿಸಬೇಕಿಲ್ಲ. ನಾವು ಇವತ್ತೇ ಸಾಯದಿಲ್ವಲ್ಲ. ಇನ್ನೂ ಹಲವು ದಿನ ಬದುಕಿರುತ್ತೇವಲ್ಲ. ಅವತ್ತಿಗೂ ಬೇಕಲ್ಲ. ನಮಗೇ ಅಲ್ಲದಿದ್ದರೂ ನಮ್ಮಂಥ ಕೋಟ್ಯಾಂತರ ಜೀವಿಗಳು ಈ ಭೂಮಿಯಲಿ ಬದುಕಬೇಕಲ್ಲ. ಇನ್ನೂ ನೂರಾರು ವರ್ಷ.

ಕೀಟ ಜಗತ್ತಿನ ಅಗಾಧ ಅನಾವರಣ(Insect worl) ಇದೇ ನವಂಬರ್ 1ರಿಂದ 3ರ ವರೆಗೆ ಹಾಸನದ ಗೋಮತಿ ಕಲ್ಯಾಣ ಮಂಟಪದಲಿ ನಡೆಯುತ್ತಿದೆ. ಬನ್ನಿ, ವಿಸ್ಮಯಕಾರಿ ಕೀಟ ಜಗತ್ತಿನಲ್ಲೊಂದು ಸುತ್ತು ಹಾಕಿ.

– ಧನಂಜಯ ಜೀವಾಳ ಮಾಹಿತಿ, 98451 81409

The grand unveiling of the insect world is going on from November 1st to 3rd at Hassan's Gomati Kalyana Mantapada. Come, take a tour of the amazing insect world.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

4 hours ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

11 hours ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

1 day ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

1 day ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

1 day ago

ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…

1 day ago