ಸುದ್ದಿಗಳು

ರೈತರ ಭರವಸೆ ಹೆಚ್ಚಿಸಿದ ಕೃಷಿ ಉತ್ಪನ್ನಗಳ ರಫ್ತು | ಶೇ.12 ರಷ್ಟು ಬೆಳವಣಿಗೆ ಹೆಚ್ಚಳ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರಸಕ್ತ ಹಣಕಾಸು ವರ್ಷ 2022ರ  ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಅಂದರೆ ಇನ್ನು ನಾಲ್ಕು ತಿಂಗಳು ಬಾಕಿ ಇರುವ ಈ ಅವಧಿಯಲ್ಲಿ, ದೇಶದ ಕೃಷಿ ಮತ್ತು ಸಂಸ್ಕರಿಸಿದ ಆಹಾರಗಳ ರಫ್ತು $19.69 ಶತಕೋಟಿಗೆ ಏರಿದೆ. ಇದೇ ಒಂದು ವರ್ಷದ ಹಿಂದೆ ರಫ್ತು ಪ್ರಮಾಣ $17.51 ಶತಕೋಟಿಯಷ್ಟಿತ್ತು.  ಈ ಬಾರಿ ರಫ್ತಿನಲ್ಲಿ 12 ರಷ್ಟು ಬೆಳವಣಿಗೆ ದಾಖಲಾಗಿದೆ.

Advertisement
Advertisement

ಅಪೆಡಾ ಅಧ್ಯಕ್ಷ ಅಂಗುಮುತ್ತು ಪ್ರಕಾರ, ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಯುಎಸ್ಎ, ಸೌದಿ ಅರೇಬಿಯಾ, ಇಂಡೋನೇಷ್ಯಾ ಭಾರತೀಯ ಕೃಷಿ ಉತ್ಪನ್ನಗಳ ಪ್ರಮುಖ ಖರೀದಿದಾರರಾಗಿ ಉಳಿದಿವೆ. ಕೇಂದ್ರ ಸರ್ಕಾರವು 2022-23ರ ಹಣಕಾಸು ವರ್ಷದಲ್ಲಿ 23.56 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಹೊಂದಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಬಾಸ್ಮತಿ ಅಕ್ಕಿ ರಫ್ತು $2.38 ಶತಕೋಟಿಯಿಂದ $3.34 ಶತಕೋಟಿಗೆ 40.26 ಶೇಕಡಾ ಏರಿಕೆಯಾಗಿದೆ. ಹಾಗೆ ಇನ್ನಿತರ ಅಕ್ಕಿ ರಫ್ತು ಶೇಕಡಾ 3.35 ರಷ್ಟು ಏರಿಕೆಯಾಗಿ $4.66 ಶತಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶವು $4.51 ಬಿಲಿಯನ್ ಮೌಲ್ಯದ ಬಾಸ್ಮತಿ ಅಲ್ಲದ ಅಕ್ಕಿಯನ್ನು ರಫ್ತು ಮಾಡಿದೆ.

ತಾಜಾ ತರಕಾರಿಗಳ ರಫ್ತು $616 ಮಿಲಿಯನ್‌ನಿಂದ $662 ಮಿಲಿಯನ್‌ಗೆ 7.5 ಶೇಕಡಾ ಏರಿಕೆಯಾಗಿದೆ, ತಾಜಾ ಹಣ್ಣುಗಳ ರಫ್ತು $462 ಮಿಲಿಯನ್‌ನಿಂದ $459 ಮಿಲಿಯನ್‌ಗೆ ಇಳಿದಿದೆ. ಬೇಳೆಕಾಳುಗಳ ರಫ್ತು ಶೇಕಡಾ 80.38 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ $242 ಮಿಲಿಯನ್‌ಗೆ ಹೋಲಿಸಿದರೆ $436 ಮಿಲಿಯನ್‌ಗೆ ತಲುಪಿದೆ.

Advertisement

ಕೋಳಿ ಉತ್ಪನ್ನಗಳ ರಫ್ತು $50 ಮಿಲಿಯನ್‌ನಿಂದ $95 ಮಿಲಿಯನ್‌ಗೆ ಶೇಕಡಾ 91.7 ರಷ್ಟು ಹೆಚ್ಚಾಗಿದೆ, ಮೆಕ್ಕೆಜೋಳ ಸೇರಿದಂತೆ ಇತರ ಧಾನ್ಯಗಳ ರಫ್ತು $869 ಮಿಲಿಯನ್ ತಲುಪಿದೆ. ಧಾನ್ಯ ರಫ್ತು ಕಳೆದ ವರ್ಷದ ಇದೇ ಅವಧಿಯಲ್ಲಿ $764 ಮಿಲಿಯನ್‌ಗೆ ಹೋಲಿಸಿದರೆ 13.6 ಶೇಕಡಾ ಹೆಚ್ಚಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ

ರಾಮನಗರ ಜಿಲ್ಲೆಯಲ್ಲಿ  ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…

9 hours ago

ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ

ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…

9 hours ago

ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…

9 hours ago

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ  ಪೂರೈಕೆಯಾಗಿದ್ದು,…

10 hours ago

ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…

10 hours ago

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

10 hours ago