ಸುದ್ದಿಗಳು

ರೈತರ ಭರವಸೆ ಹೆಚ್ಚಿಸಿದ ಕೃಷಿ ಉತ್ಪನ್ನಗಳ ರಫ್ತು | ಶೇ.12 ರಷ್ಟು ಬೆಳವಣಿಗೆ ಹೆಚ್ಚಳ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರಸಕ್ತ ಹಣಕಾಸು ವರ್ಷ 2022ರ  ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಅಂದರೆ ಇನ್ನು ನಾಲ್ಕು ತಿಂಗಳು ಬಾಕಿ ಇರುವ ಈ ಅವಧಿಯಲ್ಲಿ, ದೇಶದ ಕೃಷಿ ಮತ್ತು ಸಂಸ್ಕರಿಸಿದ ಆಹಾರಗಳ ರಫ್ತು $19.69 ಶತಕೋಟಿಗೆ ಏರಿದೆ. ಇದೇ ಒಂದು ವರ್ಷದ ಹಿಂದೆ ರಫ್ತು ಪ್ರಮಾಣ $17.51 ಶತಕೋಟಿಯಷ್ಟಿತ್ತು.  ಈ ಬಾರಿ ರಫ್ತಿನಲ್ಲಿ 12 ರಷ್ಟು ಬೆಳವಣಿಗೆ ದಾಖಲಾಗಿದೆ.

Advertisement
Advertisement

ಅಪೆಡಾ ಅಧ್ಯಕ್ಷ ಅಂಗುಮುತ್ತು ಪ್ರಕಾರ, ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಯುಎಸ್ಎ, ಸೌದಿ ಅರೇಬಿಯಾ, ಇಂಡೋನೇಷ್ಯಾ ಭಾರತೀಯ ಕೃಷಿ ಉತ್ಪನ್ನಗಳ ಪ್ರಮುಖ ಖರೀದಿದಾರರಾಗಿ ಉಳಿದಿವೆ. ಕೇಂದ್ರ ಸರ್ಕಾರವು 2022-23ರ ಹಣಕಾಸು ವರ್ಷದಲ್ಲಿ 23.56 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಹೊಂದಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಬಾಸ್ಮತಿ ಅಕ್ಕಿ ರಫ್ತು $2.38 ಶತಕೋಟಿಯಿಂದ $3.34 ಶತಕೋಟಿಗೆ 40.26 ಶೇಕಡಾ ಏರಿಕೆಯಾಗಿದೆ. ಹಾಗೆ ಇನ್ನಿತರ ಅಕ್ಕಿ ರಫ್ತು ಶೇಕಡಾ 3.35 ರಷ್ಟು ಏರಿಕೆಯಾಗಿ $4.66 ಶತಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶವು $4.51 ಬಿಲಿಯನ್ ಮೌಲ್ಯದ ಬಾಸ್ಮತಿ ಅಲ್ಲದ ಅಕ್ಕಿಯನ್ನು ರಫ್ತು ಮಾಡಿದೆ.

ತಾಜಾ ತರಕಾರಿಗಳ ರಫ್ತು $616 ಮಿಲಿಯನ್‌ನಿಂದ $662 ಮಿಲಿಯನ್‌ಗೆ 7.5 ಶೇಕಡಾ ಏರಿಕೆಯಾಗಿದೆ, ತಾಜಾ ಹಣ್ಣುಗಳ ರಫ್ತು $462 ಮಿಲಿಯನ್‌ನಿಂದ $459 ಮಿಲಿಯನ್‌ಗೆ ಇಳಿದಿದೆ. ಬೇಳೆಕಾಳುಗಳ ರಫ್ತು ಶೇಕಡಾ 80.38 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ $242 ಮಿಲಿಯನ್‌ಗೆ ಹೋಲಿಸಿದರೆ $436 ಮಿಲಿಯನ್‌ಗೆ ತಲುಪಿದೆ.

Advertisement

ಕೋಳಿ ಉತ್ಪನ್ನಗಳ ರಫ್ತು $50 ಮಿಲಿಯನ್‌ನಿಂದ $95 ಮಿಲಿಯನ್‌ಗೆ ಶೇಕಡಾ 91.7 ರಷ್ಟು ಹೆಚ್ಚಾಗಿದೆ, ಮೆಕ್ಕೆಜೋಳ ಸೇರಿದಂತೆ ಇತರ ಧಾನ್ಯಗಳ ರಫ್ತು $869 ಮಿಲಿಯನ್ ತಲುಪಿದೆ. ಧಾನ್ಯ ರಫ್ತು ಕಳೆದ ವರ್ಷದ ಇದೇ ಅವಧಿಯಲ್ಲಿ $764 ಮಿಲಿಯನ್‌ಗೆ ಹೋಲಿಸಿದರೆ 13.6 ಶೇಕಡಾ ಹೆಚ್ಚಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |

ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…

4 hours ago

ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು

"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…

8 hours ago

ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……

ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ‌ ಆಶಯವನ್ನೇ ಕಳೆದುಕೊಳ್ಳುತ್ತದೆ.…

8 hours ago

ಸೂರ್ಯ-ಶನಿಯಿಂದ ಶಕ್ತಿಶಾಲಿ ಪಂಚಮಿ ಯೋಗ.. | ಏನಿದು ಯೋಗ..? ಯಾವ ರಾಶಿಗೆ ವಿಶೇಷವಾದ ಅನುಕೂಲ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಐಪಿಎಲ್‌ ಫೈನಲ್‌ ಕದನ | ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲವು

ಐಪಿಎಲ್  ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…

14 hours ago

ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಿಂದ ಪ್ರವಾಹ | ನೂರಾರು ಗ್ರಾಮಗಳು ಜಲಾವೃತ, ಬೆಳೆ ನಷ್ಟ | 5 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರು |

ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…

16 hours ago