Advertisement
ಸುದ್ದಿಗಳು

ರೈತರ ಭರವಸೆ ಹೆಚ್ಚಿಸಿದ ಕೃಷಿ ಉತ್ಪನ್ನಗಳ ರಫ್ತು | ಶೇ.12 ರಷ್ಟು ಬೆಳವಣಿಗೆ ಹೆಚ್ಚಳ |

Share

ಪ್ರಸಕ್ತ ಹಣಕಾಸು ವರ್ಷ 2022ರ  ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಅಂದರೆ ಇನ್ನು ನಾಲ್ಕು ತಿಂಗಳು ಬಾಕಿ ಇರುವ ಈ ಅವಧಿಯಲ್ಲಿ, ದೇಶದ ಕೃಷಿ ಮತ್ತು ಸಂಸ್ಕರಿಸಿದ ಆಹಾರಗಳ ರಫ್ತು $19.69 ಶತಕೋಟಿಗೆ ಏರಿದೆ. ಇದೇ ಒಂದು ವರ್ಷದ ಹಿಂದೆ ರಫ್ತು ಪ್ರಮಾಣ $17.51 ಶತಕೋಟಿಯಷ್ಟಿತ್ತು.  ಈ ಬಾರಿ ರಫ್ತಿನಲ್ಲಿ 12 ರಷ್ಟು ಬೆಳವಣಿಗೆ ದಾಖಲಾಗಿದೆ.

ಅಪೆಡಾ ಅಧ್ಯಕ್ಷ ಅಂಗುಮುತ್ತು ಪ್ರಕಾರ, ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಯುಎಸ್ಎ, ಸೌದಿ ಅರೇಬಿಯಾ, ಇಂಡೋನೇಷ್ಯಾ ಭಾರತೀಯ ಕೃಷಿ ಉತ್ಪನ್ನಗಳ ಪ್ರಮುಖ ಖರೀದಿದಾರರಾಗಿ ಉಳಿದಿವೆ. ಕೇಂದ್ರ ಸರ್ಕಾರವು 2022-23ರ ಹಣಕಾಸು ವರ್ಷದಲ್ಲಿ 23.56 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಹೊಂದಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಬಾಸ್ಮತಿ ಅಕ್ಕಿ ರಫ್ತು $2.38 ಶತಕೋಟಿಯಿಂದ $3.34 ಶತಕೋಟಿಗೆ 40.26 ಶೇಕಡಾ ಏರಿಕೆಯಾಗಿದೆ. ಹಾಗೆ ಇನ್ನಿತರ ಅಕ್ಕಿ ರಫ್ತು ಶೇಕಡಾ 3.35 ರಷ್ಟು ಏರಿಕೆಯಾಗಿ $4.66 ಶತಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶವು $4.51 ಬಿಲಿಯನ್ ಮೌಲ್ಯದ ಬಾಸ್ಮತಿ ಅಲ್ಲದ ಅಕ್ಕಿಯನ್ನು ರಫ್ತು ಮಾಡಿದೆ.

ತಾಜಾ ತರಕಾರಿಗಳ ರಫ್ತು $616 ಮಿಲಿಯನ್‌ನಿಂದ $662 ಮಿಲಿಯನ್‌ಗೆ 7.5 ಶೇಕಡಾ ಏರಿಕೆಯಾಗಿದೆ, ತಾಜಾ ಹಣ್ಣುಗಳ ರಫ್ತು $462 ಮಿಲಿಯನ್‌ನಿಂದ $459 ಮಿಲಿಯನ್‌ಗೆ ಇಳಿದಿದೆ. ಬೇಳೆಕಾಳುಗಳ ರಫ್ತು ಶೇಕಡಾ 80.38 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ $242 ಮಿಲಿಯನ್‌ಗೆ ಹೋಲಿಸಿದರೆ $436 ಮಿಲಿಯನ್‌ಗೆ ತಲುಪಿದೆ.

ಕೋಳಿ ಉತ್ಪನ್ನಗಳ ರಫ್ತು $50 ಮಿಲಿಯನ್‌ನಿಂದ $95 ಮಿಲಿಯನ್‌ಗೆ ಶೇಕಡಾ 91.7 ರಷ್ಟು ಹೆಚ್ಚಾಗಿದೆ, ಮೆಕ್ಕೆಜೋಳ ಸೇರಿದಂತೆ ಇತರ ಧಾನ್ಯಗಳ ರಫ್ತು $869 ಮಿಲಿಯನ್ ತಲುಪಿದೆ. ಧಾನ್ಯ ರಫ್ತು ಕಳೆದ ವರ್ಷದ ಇದೇ ಅವಧಿಯಲ್ಲಿ $764 ಮಿಲಿಯನ್‌ಗೆ ಹೋಲಿಸಿದರೆ 13.6 ಶೇಕಡಾ ಹೆಚ್ಚಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

4 hours ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

15 hours ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

16 hours ago

ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ

2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…

1 day ago

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

2 days ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

2 days ago