Advertisement
ಸುದ್ದಿಗಳು

ರೈತರ ಭರವಸೆ ಹೆಚ್ಚಿಸಿದ ಕೃಷಿ ಉತ್ಪನ್ನಗಳ ರಫ್ತು | ಶೇ.12 ರಷ್ಟು ಬೆಳವಣಿಗೆ ಹೆಚ್ಚಳ |

Share

ಪ್ರಸಕ್ತ ಹಣಕಾಸು ವರ್ಷ 2022ರ  ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಅಂದರೆ ಇನ್ನು ನಾಲ್ಕು ತಿಂಗಳು ಬಾಕಿ ಇರುವ ಈ ಅವಧಿಯಲ್ಲಿ, ದೇಶದ ಕೃಷಿ ಮತ್ತು ಸಂಸ್ಕರಿಸಿದ ಆಹಾರಗಳ ರಫ್ತು $19.69 ಶತಕೋಟಿಗೆ ಏರಿದೆ. ಇದೇ ಒಂದು ವರ್ಷದ ಹಿಂದೆ ರಫ್ತು ಪ್ರಮಾಣ $17.51 ಶತಕೋಟಿಯಷ್ಟಿತ್ತು.  ಈ ಬಾರಿ ರಫ್ತಿನಲ್ಲಿ 12 ರಷ್ಟು ಬೆಳವಣಿಗೆ ದಾಖಲಾಗಿದೆ.

ಅಪೆಡಾ ಅಧ್ಯಕ್ಷ ಅಂಗುಮುತ್ತು ಪ್ರಕಾರ, ಬಾಂಗ್ಲಾದೇಶ, ಯುನೈಟೆಡ್ ಅರಬ್ ಎಮಿರೇಟ್ಸ್, ಯುಎಸ್ಎ, ಸೌದಿ ಅರೇಬಿಯಾ, ಇಂಡೋನೇಷ್ಯಾ ಭಾರತೀಯ ಕೃಷಿ ಉತ್ಪನ್ನಗಳ ಪ್ರಮುಖ ಖರೀದಿದಾರರಾಗಿ ಉಳಿದಿವೆ. ಕೇಂದ್ರ ಸರ್ಕಾರವು 2022-23ರ ಹಣಕಾಸು ವರ್ಷದಲ್ಲಿ 23.56 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಹೊಂದಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಬಾಸ್ಮತಿ ಅಕ್ಕಿ ರಫ್ತು $2.38 ಶತಕೋಟಿಯಿಂದ $3.34 ಶತಕೋಟಿಗೆ 40.26 ಶೇಕಡಾ ಏರಿಕೆಯಾಗಿದೆ. ಹಾಗೆ ಇನ್ನಿತರ ಅಕ್ಕಿ ರಫ್ತು ಶೇಕಡಾ 3.35 ರಷ್ಟು ಏರಿಕೆಯಾಗಿ $4.66 ಶತಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶವು $4.51 ಬಿಲಿಯನ್ ಮೌಲ್ಯದ ಬಾಸ್ಮತಿ ಅಲ್ಲದ ಅಕ್ಕಿಯನ್ನು ರಫ್ತು ಮಾಡಿದೆ.

ತಾಜಾ ತರಕಾರಿಗಳ ರಫ್ತು $616 ಮಿಲಿಯನ್‌ನಿಂದ $662 ಮಿಲಿಯನ್‌ಗೆ 7.5 ಶೇಕಡಾ ಏರಿಕೆಯಾಗಿದೆ, ತಾಜಾ ಹಣ್ಣುಗಳ ರಫ್ತು $462 ಮಿಲಿಯನ್‌ನಿಂದ $459 ಮಿಲಿಯನ್‌ಗೆ ಇಳಿದಿದೆ. ಬೇಳೆಕಾಳುಗಳ ರಫ್ತು ಶೇಕಡಾ 80.38 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ $242 ಮಿಲಿಯನ್‌ಗೆ ಹೋಲಿಸಿದರೆ $436 ಮಿಲಿಯನ್‌ಗೆ ತಲುಪಿದೆ.

ಕೋಳಿ ಉತ್ಪನ್ನಗಳ ರಫ್ತು $50 ಮಿಲಿಯನ್‌ನಿಂದ $95 ಮಿಲಿಯನ್‌ಗೆ ಶೇಕಡಾ 91.7 ರಷ್ಟು ಹೆಚ್ಚಾಗಿದೆ, ಮೆಕ್ಕೆಜೋಳ ಸೇರಿದಂತೆ ಇತರ ಧಾನ್ಯಗಳ ರಫ್ತು $869 ಮಿಲಿಯನ್ ತಲುಪಿದೆ. ಧಾನ್ಯ ರಫ್ತು ಕಳೆದ ವರ್ಷದ ಇದೇ ಅವಧಿಯಲ್ಲಿ $764 ಮಿಲಿಯನ್‌ಗೆ ಹೋಲಿಸಿದರೆ 13.6 ಶೇಕಡಾ ಹೆಚ್ಚಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸರಿಯಾದ ಆಹಾರ ಪದ್ಧತಿಯೇ ರೋಗಮುಕ್ತ ಜೀವನದ ಮೂಲ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…

4 hours ago

ಹವಾಮಾನ ವರದಿ | 30-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಉತ್ತಮ ಮಳೆ

ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…

9 hours ago

ಸಮಾಜಕ್ಕೆ ಸರಿದಾರಿಯನ್ನು ತೋರುವುದು ಗುರುವಿನ ಕಾರ್ಯ : ರಾಘವೇಶ್ವರ ಶ್ರೀ

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…

17 hours ago

ಅಪೊಲೊ ಫಾರ್ಮಸಿಯಲ್ಲಿ ಉದ್ಯೋಗಾವಕಾಶ : ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ ಸಂದರ್ಶನ

ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ…

18 hours ago

ಹವಾಮಾನ ವರದಿ | 29-07-2026 | ಆ.2 ರಿಂದ ಮಳೆಯ ಸ್ಥಿತಿ ಏನಾಗಬಹುದು..?

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…

1 day ago

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!

ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…

2 days ago