ಹತಾಶೆ ಮತ್ತು ಸೋಲು ಜೀವನದ ಅಂತ್ಯವಲ್ಲ, ಅವು ಜೀವನ ನಮಗೆ ಕೊಡುವ ಮೌನ ಪಾಠಗಳು. ನಾವೆಲ್ಲಾ ಕೆಲವೊಮ್ಮೆ ಬಿದ್ದೇ ಬಿದ್ದು ಮುಂದಕ್ಕೆ ನಡೆಯುತ್ತೇವೆ. ಮಗು ಕೂಡಾ ಒಮ್ಮೆಲೇ ನಡೆಯುವುದಿಲ್ಲ, ಸಾಕಷ್ಟು ಸಲ ಬಿದ್ದು, ಮತ್ತೆ ಎದ್ದು ನಡೆಯುತ್ತದೆ. ಆ ಕ್ಷಣಕ್ಕೆ ಬೇಕಾದ್ದು ಧೈರ್ಯ. ಅಮ್ಮ ಆ ಧೈರ್ಯ ನೀಡುತ್ತಾಳೆ. ಹೀಗಾಗಿ ಸೋಲು ಬಂದಾಗ ಅದು ನಮ್ಮ ಶಕ್ತಿಯನ್ನೇ ನಾಶ ಮಾಡುವುದಿಲ್ಲ. ಬದಲಾಗಿ ನಮ್ಮೊಳಗಿನ ಅಡಗಿರುವ ಧೈರ್ಯವನ್ನು ಎಬ್ಬಿಸುತ್ತದೆ. “ನಾನು ಸೋತೇನು” ಎಂಬ ಯೋಚನೆಗಿಂತ “ನಾನು ಕಲಿತೇನು?” ಎಂಬ ಪ್ರಶ್ನೆ ಮನಸ್ಸಿಗೆ ಹಾಕಿಕೊಂಡಾಗಲೇ ಬದಲಾವಣೆ ಆರಂಭವಾಗುತ್ತದೆ. ಹಿನ್ನಡೆಯ ಕ್ಷಣಗಳು ನಮ್ಮನ್ನು ನಿಲ್ಲಿಸಲು ಬಂದವಲ್ಲ, ನಮ್ಮನ್ನು ಇನ್ನಷ್ಟು ಬಲಿಷ್ಠರಾಗಿ ರೂಪಿಸಲು ಬಂದವು.
ಪ್ರತಿ ಬೆಳಗಿನ ಬೆಳಕು ಹೊಸ ಅವಕಾಶದ ಸಂಕೇತ. ನಿನ್ನೆ ನೋವು ಕೊಟ್ಟಿದ್ದರೂ, ಇಂದಿನ ಉಸಿರು ಭರವಸೆ ನೀಡುತ್ತದೆ. ಸಣ್ಣ ಹೆಜ್ಜೆಗಳಿಂದಲೇ ದೊಡ್ಡ ಪ್ರಯಾಣಗಳು ಆರಂಭವಾಗುತ್ತವೆ. ಇಂದು ಒಂದೇ ಸಕಾರಾತ್ಮಕ ನಿರ್ಧಾರ ಸಾಕು. ಮನಸ್ಸನ್ನು ಹೊರೆಗಳಿಂದಲ್ಲ, ನಂಬಿಕೆಯಿಂದ ತುಂಬಿಸಿಕೊಳ್ಳಿ. ನೀನು ಇನ್ನೂ ಇಲ್ಲಿ ಇದ್ದೀಯೆಂದರೆ, ನಿನ್ನ ಕಥೆ ಇನ್ನೂ ಮುಗಿದಿಲ್ಲ. ಸೋಲಿನಿಂದ ಎದ್ದು ನಿಲ್ಲುವವನೇ ನಿಜವಾದ ವಿಜಯಿ. ಇಂದು ಮತ್ತೆ ಶುರುಮಾಡಲು ಇದು ಅತ್ಯುತ್ತಮ ಸಮಯ…. ಶುಭದಿನ… ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ…
ನಿಮ್ಮ ಪ್ರತಿಕ್ರಿಯೆಗಳಿಗೆ…
ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದ ಕೃಷಿ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿ ಕಂಡುಬಂದಿದೆ.…
2030ರೊಳಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ…
ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಬೀಜ ಕಾಯ್ದೆ ಮತ್ತು ಪರಿಷ್ಕೃತ ಕೀಟನಾಶಕ…
ಮೈಸೂರು ವಿಭಾಗದ ತಂಬಾಕು ರೈತರು ಖರೀದಿ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದು, ಈ ಬಗ್ಗೆ ಕೇಂದ್ರ…
ಅಡಿಕೆಯ ಹಳದಿ ಎಲೆ ರೋಗವು(YLD) ಕೇವಲ ಎಲೆಯ ಸಮಸ್ಯೆಯಲ್ಲ, ಮಣ್ಣಿನೊಳಗಿನ ಸೂಕ್ಷ್ಮಜೀವಿಗಳ ಸಮತೋಲನ…
ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಾರ್ಚ್ 3 ರವರೆಗೆ ಮಳೆಯ ಸಾಧ್ಯತೆ…