Advertisement
ಸಂಪಾದಕೀಯ ಆಯ್ಕೆ

₹5 ಕೂಲಿಯಿಂದ ₹15 ಕೋಟಿ ಕೃಷಿ ಉದ್ಯಮದವರೆಗೆ…! ಈಗ ಆಕ್ಸ್‌ಫರ್ಡ್‌ AI ಸಮ್ಮೇಳನದಲ್ಲಿ ಭಾರತೀಯ ರೈತನ ಭಾಷಣ..!

Share

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮಸ್ಲಾ ಅಂಜಂಗಾವ್‌ ಬಾರಿ ಗ್ರಾಮದ ರೈತ ರವೀಂದ್ರ ಮಾನಿಕ್ರಾವ್ ಮೆಟ್ಕರ್ ಅವರ ವೃತ್ತಿಯ ಯಶಸ್ಸು ಇದೀಗ ಜಾಗತಿಕ ವೇದಿಕೆಗೆ ತಲುಪಿದೆ. ಅಂದು ದಿನಕ್ಕೆ ಕೇವಲ ₹5 ಕೂಲಿ ಮಾಡಿಕೊಂಡಿದ್ದ ಅವರು, ಇದೀಗ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕೃತಕ ಬುದ್ಧಿಮತ್ತೆ (AI) ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಲು ಆಹ್ವಾನ ಪಡೆದಿದ್ದಾರೆ.

1984ರಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ಮನೆಯ ಮೇಲ್ಚಾವಣಿಯಲ್ಲೇ ಕೇವಲ 100 ಕೋಳಿಗಳೊಂದಿಗೆ ಪೌಲ್ಟ್ರಿ ಕೃಷಿ ಆರಂಭಿಸಿದ ಅವರು, ತಂದೆಯಿಂದ ಪಡೆದ ₹3,000 ನೆರವಿನಿಂದ ತಮ್ಮ ಉದ್ಯಮಕ್ಕೆ ಚಾಲನೆ ನೀಡಿದರು. ನಂತರ ಬ್ಯಾಂಕಿನಿಂದ ₹5 ಲಕ್ಷ ಸಾಲ ಪಡೆದು 4,000 ಕೋಳಿಗಳ ಫಾರ್ಮ್‌ ಸ್ಥಾಪಿಸಿದರು. ಅದೇ ವೇಳೆ ಔಷಧ ಅಂಗಡಿಯಲ್ಲಿ ತಿಂಗಳಿಗೆ ₹150 ಸಂಬಳದಿಂದ ಕೆಲಸವನ್ನೂ ಆರಂಭಿಸಿ ಮೆಟ್ಕರ್, ಬಳಿಕ ಸ್ವಂತ ಕೃಷಿ ಪ್ರಯೋಗಗಳ ಮೂಲಕ ಸಾಧನೆಯನ್ನೂ ಮಾಡಿದ್ದಾರೆ. ಕೇವಲ ಒಂದು ಎಕ್ರೆ ಜಮೀನಿನಿಂದ ಕೆಲಸ ಆರಂಭಿಸಿದ ಾವರು 2006ರ ವೇಳೆಗೆ ಈ ವ್ಯವಹಾರ ವೇಗವಾಗಿ ಬೆಳೆಯಿತು.

ಬರ್ಡ್‌ ಫ್ಲೂ ಕಾರಣದಿಂದ  ಕೋಳಿ ಉದ್ಯಮ ದೊಡ್ಡ ಹಿನ್ನಡೆಯನ್ನೂ ಎದುರಿಸಿದರೂ, 2008ರಲ್ಲಿ ₹25 ಲಕ್ಷ ಸಾಲದೊಂದಿಗೆ ಪುನಃ ಆರಂಭಿಸಿ ತಮ್ಮ ಪರಿಶ್ರಮದಿಂದ ಮತ್ತೆ ಯಶಸ್ಸಿನ ಹಾದಿ ಹಿಡಿದರು. ಇಂದು ಸುಮಾರು 50 ಏಕರೆ ಪ್ರದೇಶದಲ್ಲಿ 1.8 ಲಕ್ಷಕ್ಕೂ ಹೆಚ್ಚು ಕೋಳಿಗಳ ಫಾರ್ಮ್‌ ನಡೆಸುತ್ತಿದ್ದು, ವಾರ್ಷಿಕವಾಗಿ ಸುಮಾರು ₹15 ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಜೊತೆಗೆ ಹಣ್ಣು ಬೆಳೆಗಳು ಸೇರಿದಂತೆ ಮಿಶ್ರ ಕೃಷಿಯನ್ನೂ ಕೈಗೊಂಡಿದ್ದಾರೆ.

ಇನ್ನೊಂದೆಡೆ, ಕಡಿಮೆ ವೆಚ್ಚದ ಕೃಷಿ ವಿಧಾನಗಳು ಹಾಗೂ ಸಾವಯವ ಗೊಬ್ಬರ ತಂತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ತಮ್ಮ ಕೃಷಿಯನ್ನು ವಿಸ್ತರಿಸಿರುವ ಅವರು, ಸಾವಿರಾರು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

“AI for Every Mind” ಎಂಬ ವಿಷಯದಡಿ ಮೇ 1 ರಿಂದ 5ರವರೆಗೆ ನಡೆಯಲಿರುವ ಈ ಜಾಗತಿಕ ಸಮ್ಮೇಳನವನ್ನು ಗ್ಲೋಬಲ್ ಎಕಾನಾಮಿಕ್ ಫೋರಂ (GEF) ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸುತ್ತಿದೆ. ಈ ವೇದಿಕೆಯಲ್ಲಿ ಗ್ರಾಮೀಣ ನವೀನ ಕೃಷಿ ಮಾದರಿ ಹಾಗೂ ತಮ್ಮ ಅನುಭವಗಳನ್ನು ಜಗತ್ತಿನ ಮುಂದೆ ಹಂಚಿಕೊಳ್ಳಲಿರುವುದು ಭಾರತೀಯ ರೈತರ ಪರಿಶ್ರಮ ಮತ್ತು ನವೀನತೆಗೆ ದೊರೆಯುತ್ತಿರುವ ಜಾಗತಿಕ ಮಾನ್ಯತೆಯ ಸಂಕೇತವಾಗಿದೆ.

ಇತ್ತೀಚಿನ ದಿನಗಳಲ್ಲಿ ಕೋಳಿಗಳ ಸಂಖ್ಯೆಯನ್ನು ಹೆಚ್ಚಿಸುವುದನ್ನು ನಿಲ್ಲಿಸಿ, ಇತರ ರೈತರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಿಂಗಾಪುರ್ ಸೇರಿದಂತೆ ದೇಶ-ವಿದೇಶದ ಹಲವು ಕೃಷಿ ವೇದಿಕೆಗಳಲ್ಲಿ ತಮ್ಮ ಯಶೋಗಾಥೆಯನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಖರೀದಿಸುವುದನ್ನು ತಪ್ಪಿಸಿ, ಸ್ವಂತವಾಗಿ ತಯಾರಿಸಿದ ಸಾವಯವ ಹಾಗೂ ಕಡಿಮೆ ವೆಚ್ಚದ ಗೊಬ್ಬರ ತಂತ್ರಗಳನ್ನು ಅಭಿವೃದ್ಧಿಪಡಿಸುವುದು ಅವರ ಯಶಸ್ಸಿನ ಪ್ರಮುಖ ಕಾರಣವಾಗಿದೆ. ಈ ವಿಧಾನಗಳನ್ನು ಬಳಸಿ ಅವರು ತಮ್ಮ ಕೃಷಿಯನ್ನು 50 ಎಕ್ರೆ ವರೆಗೆ ವಿಸ್ತರಿಸಿದ್ದು, ಲಕ್ಷಾಂತರ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Ravindra Manikrao Metkar, a farmer-entrepreneur from Maharashtra, has risen from earning ₹5 a day to building a ₹15-crore agri and poultry enterprise. He has now been invited to speak at an international AI conference at the University of Oxford, showcasing grassroots innovation and resilience in Indian agriculture.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗುತ್ತಿಗಾರಿನಲ್ಲಿ ಮಹಿಳೆಯರ ನೇತೃತ್ವದಲ್ಲಿ ಗೇರು ಹಣ್ಣಿನ ಜ್ಯೂಸ್‌ ಘಟಕ ಆರಂಭ – ಮಹಿಳೆಯರ ನೇತೃತ್ವದಲ್ಲಿ ಗ್ರಾಮೀಣ ಉದ್ಯಮಕ್ಕೆ ಹೊಸ ದಿಕ್ಕು

ಸುಳ್ಯದ ಗುತ್ತಿಗಾರಿನಲ್ಲಿ ಮಹಿಳೆಯರ ನೇತೃತ್ವದಲ್ಲಿ ಗೇರು ಹಣ್ಣಿನ ಜ್ಯೂಸ್‌ ಘಟಕ ಆರಂಭವಾಗಿದೆ. ಮೌಲ್ಯವರ್ಧನೆಯ…

23 hours ago

ಅಡಿಕೆ ಎಲೆಚುಕ್ಕೆ ರೋಗದ ವಿರುದ್ಧ ಹೋರಾಟ – ಸಮುದಾಯ ಮಟ್ಟದಲ್ಲಿ ಕ್ರಿಯಾ ಯೋಜನೆಗೆ ಸಂಸದ ಬ್ರಿಜೇಶ್ ಚೌಟ ಕರೆ

ಗುತ್ತಿಗಾರಿನಲ್ಲಿ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಸಮುದಾಯದ…

24 hours ago

ಹವಾಮಾನ ವರದಿ | 28-04-2026 | ಎಪ್ರಿಲ್ 29ರಿಂದ ಕರ್ನಾಟಕದಲ್ಲಿ ಮಳೆ ಚುರುಕು! ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ

29.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ತಾಪಮಾನ…

2 days ago

ಹೆಸರಘಟ್ಟ ಹಕ್ಕಿಜ್ವರ ನಿಯಂತ್ರಣದಲ್ಲಿ | ಜನರಿಗೆ ಯಾವುದೇ ಆತಂಕ ಬೇಡ ಎಂದ ಆರೋಗ್ಯ ಇಲಾಖೆ

ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…

4 days ago

ಬಿಸಿಲಿನ ಬೇಗೆಯಲ್ಲಿ ಕಾಡಿಗೆ ಜೀವಜಲ..! ವನ್ಯಜೀವಿಗಳಿಗಾಗಿ ಕೃತಕ ನೀರಿನ ತೊಟ್ಟಿಗಳ ಮಹಾಯೋಜನೆ

ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…

4 days ago

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ

ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…

4 days ago