ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |

November 25, 2024
8:44 PM

ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ ಬಂಟ್ವಾಳದ ಮಾಣಿಲದ ಕೃಷಿಕ. ಕೃಷಿಕ ಜಾನ್ ಮೊಂತೆರೋ ಅವರ ಈ ಸಾಹಸಗಾಥೆಯ ಪರಿಚಯ ಇಲ್ಲಿದೆ..  

Advertisement
Advertisement
Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಾಣಿಲ ಗ್ರಾಮ ಬೇಸಿಗೆ ಬಂತೆಂದರೆ ನೀರಿನ ಅಭಾವವನ್ನು ಎದುರಿಸುತ್ತದೆ. ಈ ನೀರಿನ ಬರವನ್ನು ನಿವಾರಿಸಲು ಗ್ರಾಮದ ಕೃಷಿಕ ಜಾನ್ ಮೊಂತೆರೋ ಸುರಂಗ ಕೊರೆದು ಯಶಸ್ವಿಯಾಗಿದ್ದಾರೆ. ಕೃಷಿ ಕಾಯಕವನ್ನೇ ಉಸಿರಾಗಿಸಿಕೊಂಡಿರುವ ಜಾನ್ ಮೊಂತೆರೋ, ಇಳಿ ವಯಸ್ಸಿನಲ್ಲೂ ಏಕಾಂಗಿಯಾಗಿ ಸುರಂಗ ಕೊರೆದು ಸಾಹಸ ಮಾಡಿದ್ದಾರೆ.

Advertisement

ಮೂಲತಃ ಕೃಷಿ ಕಾರ್ಮಿಕರಾಗಿರುವ  ಜಾನ್ ಮೊಂತೆರೋ   ದಿನವಿಡಿ ಕೂಲಿ ಕೆಲಸ ಮಾಡಿ, ಬಳಿಕ  ಸಂಜೆ 6 ಗಂಟೆಯಿಂದ ತಡರಾತ್ರಿ 12ಗಂಟೆಯವರೆಗೆ ಪ್ರತಿ ದಿನ ತಮ್ಮ  ಜಮೀನಿನಲ್ಲಿ ಸುರಂಗ ಕೊರೆಯುತ್ತಿದ್ದರು.  ಸುಮಾರು 30 ಅಡಿ ಆಳದ  8ಕ್ಕೂ ಹೆಚ್ಚು  ಸುರಂಗಗಳನ್ನು ಕೊರೆದಿದ್ದಾರೆ. ಮೂವತ್ತು ವರ್ಷದ ಪ್ರಾಯದಲ್ಲಿರುವಾಗಲೇ ಮೊಂತೆರೊ, ಸುರಂಗ ಕೊರೆಯುವ ಕಾರ್ಯ  ಆರಂಭಿಸಿದ್ದರು. ಜೀವನದುದ್ದಕ್ಕೂ  ಸುರಂಗವನ್ನು  ಕೊರೆದು  ಜೀವಜಲಕ್ಕಾಗಿ  ಅವರ ಹುಡುಕಾಟ ನಿರಂತರವಾಗಿ ಮುಂದುವರೆಯುತ್ತಿತ್ತು. ಇದೀಗ  ಅವರ ಭಗೀರಥ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಅವರು ಕೊರೆದ ಸುರಂಗಗಳ ಪೈಕಿ ಮೂರು  ಸುರಂಗಗಳಲ್ಲಿ ಇದೀಗ ಅಂತರ್ಜಲ ಇದೆ.  ಸುರಂಗಗಳಿಂದ ನಿರಂತರ ಹರಿಯುತ್ತಿರುವ ಜಲಧಾರೆಯಿಂದ  ಮೊಂತೆರೋ ಅವರ  ಕೃಷಿ ಭೂಮಿ ಹಚ್ಚಹಸಿರಾಗಿ ಕಂಗೊಳಿಸುತ್ತಿದೆ. ಅವರ ತೋಟದಲ್ಲಿ ತೆಂಗು ಕಂಗು, ಭತ್ತ, ಕಾಳು ಮೆಣಸು ಸಮೃದ್ಧವಾಗಿ ಬೆಳೆದು ನಿಂತಿವೆ. ಇದೀಗ  70ರ ಹರೆಯದಲ್ಲಿರುವ  ಮೊಂತೆರೋ, ಈಗಲೂ ಸಹ  ಕೃಷಿ ಕಾಯಕವನ್ನು ನಿಲ್ಲಿಸದೆ  ದಿನವಿಡೀ ತಮ್ಮ ಜಮೀನಿನಲ್ಲಿ  ಭೂತಾಯಿಯ ಸೇವೆಯನ್ನು  ಮುಂದುವರೆಸಿದ್ದಾರೆ.ಕೃಷಿ ತೋಟ ಮಾಡುವ ಸವಾಲಿಗೆ ಎದುರಾಗಿದ್ದು ನೀರಿನ ಸಮಸ್ಯೆ. ಹೀಗಾಗಿ ನೀರಿನ ಸಮಸ್ಯೆಗೆ ತಾವು ಕಂಡುಕೊಂಡಿದ್ದು ಸುರಂಗ ಎಂದು ಹೇಳುತ್ತಾರೆ ಜಾನ್ ಮೊಂತೆರೋ.

Advertisement

ಮೊಂತೆರೋ ಅವರ ದಣಿವರಿಸಿದ ಈ ಉತ್ಸಾಹವನ್ನು ಕಂಡ ಗ್ರಾಮದ ಜನರ ಅವರನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ. ಜಾನ್ ಮೊಂತೆರೊ ಅವರ ಈ ಸಾಹಸಕ್ಕೆ ಪತ್ನಿ ದುರ್ಸಿನಾ ಸೋಜಾ ಮತ್ತು ಮಕ್ಕಳು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ.

ಕಷ್ಟಪಟ್ಟು ಛಲದಿಂದ ಭಗೀರಥ ಪ್ರಯತ್ನಪಟ್ಟು ಯಶಸ್ಸು ಸಾಧಿಸಿದ್ದು, ಅವರ ಕೆಲಸಕ್ಕೆ ಮಕ್ಕಳು ಕೂಡ ಸಾಥ್ ಕೊಟ್ಟಿದ್ದಾರೆ ಎನ್ನುತ್ತಾರೆ ಜಾನ್ ಮೊಂತೆರೋ ಪತ್ನಿ ದುರ್ಸಿನಾ ಸೋಜಾ.

Advertisement

ಒಟ್ಟಾರೆಯಾಗಿ  ಜಾನ್ ಮೊಂತೆರೋ ತಮ್ಮ ಈ ವಿನೂತನ ಸಾಹಸದಿಂದಾಗಿ  ಕರ್ನಾಟಕದ ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದು,  ಯುವಪೀಳಿಗೆಗೂ  ಮಾದರಿಯಾಗಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror