ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ | ವರ್ಗಾವಣೆ ವೇಳೆ ಹೆಚ್ಚುವರಿ ಶುಲ್ಕವೇಕೆ..? | ಎಲ್ಲೂ ಕಾಣದ ಸುತ್ತೋಲೆ..! | ಮುಗಿಯದ ಗೊಂದಲ-ಬಾರದ ಉತ್ತರ |

July 24, 2024
6:00 AM
ಕೃಷಿ ಪಂಪ್‌ ಸೆಟ್‌ಗಳ ಆರ್‌ಆರ್ ಸಂಖ್ಯೆಯನ್ನು ಗ್ರಾಹಕರ ಆಧಾರ್ ಸಂಖ್ಯೆಗಳಿಗೆ ಜೋಡಿಸುವ ಕಾರ್ಯ ನಡೆಯುತ್ತಿದೆ. ಆದರೆ ಇದಕ್ಕೊಂದುಸ್ಪಷ್ಟವಾದ ಮಾಹಿತಿಯನ್ನು ಒದಗಿಸದೇ ಇರುವುದರಿಂದ ಕೃಷಿಕರ ನಡುವೆ ಚರ್ಚೆ ನಡೆಯುತ್ತಿದೆ.

ವಿದ್ಯುತ್ ಸರಬರಾಜು ಕಂಪನಿಗಳು ಕೃಷಿ ಪಂಪ್‌ ಸೆಟ್‌ಗಳ ಆರ್‌ಆರ್ ಸಂಖ್ಯೆಯನ್ನು ಗ್ರಾಹಕರ ಆಧಾರ್ ಸಂಖ್ಯೆಗಳಿಗೆ ಜೋಡಿಸುವ ಕಾರ್ಯವನ್ನು ಆರಂಭಿಸಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ಈ ಚರ್ಚೆ ನಡೆಯುತ್ತಿದೆ. ನಿಜಕ್ಕೂ ಇದಕ್ಕೊಂದು ಸರಿಯಾದ ಸ್ಪಷ್ಟನೆ ಎಲ್ಲೂ, ಯಾರಿಂದಲೂ ಲಭ್ಯವಾಗಿಲ್ಲ.‌ ಹಾಗೆ ನೋಡಿದರೆ ಸರಿಯಾದ ಸುತ್ತೋಲೆಗಳೂ ಎಲ್ಲೂ ಲಭ್ಯವಾಗುತ್ತಿಲ್ಲ..!. ಆದರೂ ನಮ್ಮ ಪ್ರತಿನಿಧಿಗಳು ಮಾತನಾಡುತ್ತಿಲ್ಲ…!

Advertisement
Advertisement

ಕೃಷಿಕರ ಕೃಷಿ ಪಂಪ್‌ ಸೆಟ್‌ಗಳ ಆರ್‌ಆರ್ ಸಂಖ್ಯೆ ಗ್ರಾಹಕರ ಆಧಾರ್ ಸಂಖ್ಯೆಗಳಿಗೆ ಲಿಂಕ್‌ ಮಾಡಬೇಕು ಎಂಬ ಸುದ್ದಿಗಳು ಬಂದಿದೆ. ಪತ್ರಿಕೆಗಳಲ್ಲಿ ಸಹಿತ ವ್ಯಾಟ್ಸಪ್‌ ಗಳಲ್ಲಿ ಹರಿದಾಡಿದೆ. ಇದಕ್ಕೆ ಸರಿಯಾಗಿ ಇಲಾಖೆಗಳಿಂದಲೂ ಕೃಷಿಕರಿಗೆ ಕರೆ ಬಂದಿದೆ.  ಆಧಾರ್‌ ಲಿಂಕ್‌ ಮಾಡುವುದಕ್ಕೆ ಯಾವುದೇ ಗೊಂದಲಗಳು ಇಲ್ಲ. ಈಗಾಗಲೇ ಹಲವಾರು ವಿಷಯಗಳಿಗೆ ಆಧಾರ್‌ ಲಿಂಕ್‌ ಮಾಡಲಾಗಿದೆ. ಈಚೆಗೆ ಆರ್‌ಟಿಸಿಗೂ ಆಧಾರ್‌ ಲಿಂಕ್‌ ಪ್ರಕ್ರಿಯೆ ನಡೆಯುತ್ತಿದೆ, ಬ್ಯಾಂಕ್‌ ಖಾತೆಗಳಿಗೂ ಸೇರಿದಂತೆ ಎಲ್ಲಾ ಕಡೆಯೂ ಆಧಾರ್‌ ಲಿಂಕ್‌ ಪ್ರಕ್ರಿಯೆ ನಡೆದಿದೆ. ಎಲ್ಲೂ ಆಕ್ಷೇಪ ಇಲ್ಲ. ಆದರೆ ಈಗ ಕೃಷಿ ಪಂಪ್‌ ಸೆಟ್‌ಗಳ ಆರ್‌ಆರ್ ಸಂಖ್ಯೆಯನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡುವ ಪ್ರಕ್ರಿಯೆಯಲ್ಲಿ ಹಲವು ಗೊಂದಲ ಇದೆ.

Advertisement

ಮೊದಲನೆಯದಾಗಿ ಕೃಷಿ ಪಂಪ್‌ ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ ನೀಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಉಚಿತ ಯೋಜನೆ ಇದೆ. ಬಹುತೇಕ ಕೃಷಿಕರ ಪಂಪ್ ಸೆಟ್ಟುಗಳು  ತಮ್ಮ ತಂದೆ ಅಥವಾ ತಾತನ ಕಾಲದಲ್ಲಿ  ಅಳವಡಿಸಿರುತ್ತಾರೆ. ಹೀಗಾಗಿ ಅವರ ನಿಧನಾ ನಂತರವೂ ಖಾತೆ ಬದಲಾವಣೆ ಮಾಡಿರುವುದಿಲ್ಲ. ಈಗ ಅವರ ಆಧಾರ್ ಕಾರ್ಡ್ ಆರ್‌ಆರ್ ನಂಬರ್ ಗೆ ಲಿಂಕ್ ಮಾಡಲಾಗುವುದಿಲ್ಲ. ಹೀಗಾಗಿ  ಸಾಕಷ್ಟು ಗೊಂದಲಗಳು ನಿರ್ಮಾಣವಾಗಿದೆ. ಈಗ ರೈತರ ಹೆಸರಿಗೆ ಬದಲಾವಣೆ ಮಾಡಲು ಹೆಚ್ಚುವರಿ ಶುಲ್ಕವನ್ನು ರೈತರಿಂದ ವಸೂಲು ಮಾಡಲಾಗುತ್ತಿದೆ. ಒಂದು ವೇಳೆ ಆಧಾರ್‌ ಲಿಂಕ್‌ ಮಾಡದೇ ಇದ್ದಲ್ಲಿ  ಮುಂದಿನ ದಿನಗಳಲ್ಲಿ ಸಿಗಬೇಕಾಗಿರುವಂತಹ ಸಬ್ಸಿಡಿ ಹಣ ದೊರಕುವುದಿಲ್ಲ ಎಂದೂ ಹೇಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತವಾದ ಆದೇಶಗಳು ಎಲ್ಲೂ ಲಭ್ಯವಾಗಿಲ್ಲ. ಹಾಗೆಂದು ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳೂ ಮಾಹಿತಿ ನೀಡಿಲ್ಲ, ರೈತರಿಗೆ ಭರವಸೆಯನ್ನೂ, ಸರಿಯಾದ ಕ್ರಮಗಳ ಬಗ್ಗೆಯೂ ಹೇಳಿಲ್ಲ. ಈ ಆಧಾರ್‌ ಲಿಂಕ್‌ ಉದ್ದೇಶವೇನು..? ಖಾತೆ ವರ್ಗಾವಣೆ ವೇಳೆ ಹೆಚ್ಚುವರಿ ಹಣ ಪಾವತಿ ಏಕೆ ಎಂಬುದರ ಬಗ್ಗೆ ಸರಿಯಾದ ಮಾಹಿತಿಯನ್ನು ಕೃಷಿಕರಿಗೆ ನೀಡಬೇಕಿದೆ.

ರಾಜ್ಯದಲ್ಲಿ  34.17 ಲಕ್ಷ ರೈತರು ಸರ್ಕಾರದಿಂದ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ 10 ರಿಂದ 11 ಸಾವಿರ ಕೋಟಿ ರೂಪಾಯಿ ಹಣವನ್ನು ಸರ್ಕಾರ ಇದಕ್ಕಾಗಿ ವಿದ್ಯುತ್ ಇಲಾಖೆಗೆ ಸರ್ಕಾರವೇ ಪಾವತಿ ಮಾಡುತ್ತಿದೆ. ಆದರೆ ಈಗ ಉಚಿತ ವಿದ್ಯುತ್‌ ಯಾರೋ ಬಳಕೆ ಮಾಡುತ್ತಿದ್ದಾರೆ, ಕೃಷಿ ಯೋಜನೆಗಳಿಗೆ ಬಳಕೆ ಆಗುತ್ತಿಲ್ಲ ಎನ್ನುವುದು ಇನ್ನೊಂದು ಮಾಹಿತಿ. ಈ ಬಗ್ಗೆಯೂ ಅಧಿಕೃತವಾದ ಯಾವ ಮಾಹಿತಿಯೂ ಲಿಖಿತ ರೂಪದಲ್ಲಿ ಇಲಾಖೆ ನೀಡಿಲ್ಲ.ಸದ್ಯ ಮೆಸ್ಕಾಂ, ಎಸ್ಕಾಂಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವು ಕೃಷಿಕರು ಈಗಾಗಲೇ ಲಿಂಕ್‌ ಮಾಡಿದ್ದಾರೆ, ಶುಲ್ಕ ಪಾವತಿ ಮಾಡಿ ಖಾತೆ ಬದಲಾವಣೆಯನ್ನೂ ಮಾಡಿದ್ದಾರೆ.

Advertisement

ಈ ಬಗ್ಗೆ ರೈತರ ನಡುವೆಯೇ ಚರ್ಚೆ ನಡೆಯುತ್ತಿದೆ. ರೈತ ಪರವಾದ ಸಂಘಟನೆಗಳು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ, ಖಾತೆ ಬದಲಾವಣೆಗೆ ಹೆಚ್ಚುವರಿ ಶುಲ್ಕ ಏಕೆ..? ಎಂದು ಪ್ರಶ್ನಿಸಿವೆ. ಆಧಾರ್‌ ಲಿಂಕ್‌ ನೆಪದಲ್ಲಿ ರೈತರ ನೆರವಿಗೆ ಇರುವ ಯೋಜನೆಯನ್ನು ಕಡಿತಗೊಳಿಸುವುದು ಹಾಗೂ ಖಜಾನೆ ಭರ್ತಿ ಮಾಡುವ ಪ್ಲಾನ್‌ ಇದಾಗಿದೆ ಎಂದು ಹೇಳಿವೆ.

ಹಾಗಿದ್ದರೆ ನಿಜಕ್ಕೂ ಇದು ಏನು ? ಉಚಿತವನ್ನು ತೆಗೆಯುವ ಯೋಜನೆಯೇ..? ಉಚಿತವನ್ನು ಮಿತಿಗೊಳಿಸುವ ಯೋಜನೆಯೇ..? ಖಾತೆ ಬದಲಾವಣೆ ಹೆಸರಿನಲ್ಲಿ ಖಜಾನೆ ಭರ್ತಿ ಮಾಡುವ ಪ್ಲಾನ್‌ ಇದಾಗಿದೆಯೇ..? ಇಂತಹ ಹಲವು ಗೊಂದಲಗಳಿಗೆ ಸರಿಯಾದ ಮಾಹಿತಿ, ಉತ್ತರವನ್ನು ಜನಪ್ರತಿನಿಧಿಗಳು, ಸರ್ಕಾರವು ನೀಡಬೇಕಿದೆ.

Advertisement

There are reports circulating in newspapers and on WhatsApp that the RR number of agricultural pump sets belonging to farmers should be linked with consumers’ Aadhaar numbers. As a result, departments have started contacting farmers regarding this matter. The process of linking Aadhaar is not difficult, as Aadhaar is already linked to various services. Recently, the Aadhaar linking process has been implemented for RTC and bank accounts without any issues. However, there seems to be confusion surrounding the current linking process.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಗೋವಿನ ಸಗಣಿಯಿಂದ ಗಣೇಶ ಮೂರ್ತಿ | ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಆದ್ಯತೆ ನೀಡಿದ ರೈತ|
September 7, 2024
10:59 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ಮೈಸೂರಿನಲ್ಲಿ ಗಮನ ಸೆಳೆದ ವಿಶೇಷ ಗಣಪ | ವಿವಿಧ ಪ್ರತಿಮೆಗಳು |
September 7, 2024
10:38 PM
by: ದ ರೂರಲ್ ಮಿರರ್.ಕಾಂ
ಗಣೇಶೋತ್ಸವ | ದೇವರ ಪ್ರಸಾದಕ್ಕೆ FSSAI ಪರವಾನಗಿ ಕಡ್ಡಾಯ | ಖಂಡನೆ-ಸಾರ್ವಜನಿಕರಿಂದ ಅಸಮಾಧಾನ |
September 7, 2024
10:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-09-2024 | ರಾಜ್ಯದ ಅಲ್ಲಲ್ಲಿ ಸಾಮಾನ್ಯ ಮಳೆ | ಸೆ.13 ರಿಂದ ಕರಾವಳಿ ಜಿಲ್ಲೆಯಲ್ಲೂ ಮಳೆ ಕಡಿಮೆ ಸಾಧ್ಯತೆ |
September 7, 2024
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror