ರಾಜ್ಯಾದ್ಯಂತ ಭೀಕರ ಬರಕ್ಕೆ ರೈತರು ಕಂಗಾಲು | ಮಳೆಗಾಗಿ ಕತ್ತೆಗಳ‌ ಅದ್ಧೂರಿ ಮದುವೆ

October 24, 2023
9:27 PM
ಮಳೆ ಇಲ್ಲದೇ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಬಿತ್ತನೆ‌ ಮಾಡಿದ ಎಲ್ಲ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿವೆ. ಹೀಗಾಗಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆಯನ್ನು ರೈತ ಸಮೂಹದ ಕುಟುಂಬಸ್ಥರು ಮಾಡಿದರು.

ಊರೆಲ್ಲಾ ದಸರಾ(dasara)ಹಬ್ಬದ ಸಂಭ್ರಮ. ಅದರ ಜೊತೆಗೆ ಮದುವೆ(Marriage) ಮೆರವಣಿಗೆ ಜೋರಾಗಿತ್ತು. ಊರ ಮಂದಿಯೆಲ್ಲಾ  ಮದುವೆಗೆ ಆಗಮಿಸಿ ಜೋಡಿಗಳನ್ನು ಹರಸಿದ್ರು. ಸಾಂಪ್ರದಾಯಿಕವಾಗಿ ನಡೆದ ಅದ್ಧೂರಿ‌ ಮದುವೆಯಲ್ಲಿ, ಇಡೀ ಗ್ರಾಮಸ್ಥರೇ ಸೇರಿದ್ದರು. ಆದರೆ ಈ ಅದ್ಧೂರಿ ಮದುವೆಯಲ್ಲಿ ಇದ್ದ  ಈ ಜೋಡಿಗಳು ಮಾತ್ರ ವಿಶೇಷ. ಈ ಜೋಡಿಗಳ ಮದುವೆ ಮಾಡಿ ಅನ್ನದಾತರು‌ ಮಳೆ(rain)ಗಾಗಿ ಪ್ರಾರ್ಥನೆ‌ ಮಾಡಿದರು.

Advertisement
Advertisement

ಮಳೆ ಇಲ್ಲದೇ ರಾಜ್ಯದಲ್ಲಿ ಭೀಕರ ಬರ(drought) ಆವರಿಸಿದೆ. ಗದಗ(Gadag) ತಾಲೂಕಿನ ತಿಮ್ಮಾಪೂರ ಗ್ರಾಮದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಬಿತ್ತನೆ‌ ಮಾಡಿದ ಎಲ್ಲ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿವೆ. ಕಷ್ಟಪಟ್ಟು ಸಾಲಸೋಲ ಮಾಡಿ ಬಿತ್ತನೆ ಮಾಡಿದ ಬೆಳೆ ನಾಶವಾಗಿದೆ. ಹೀಗಾಗಿ ಅನ್ನದಾತರು ಅಕ್ಷರಶಃ ಕಂಗಾಲಾಗಿದ್ದಾರೆ. ಈಗಲಾದ್ರೂ ಮಳೆರಾಯನ ಕೃಪೆಗಾಗಿ ಕಾಯುತ್ತಿದ್ದಾರೆ. ಮಳೆಯಾದ್ರು ಹಿಂಗಾರು ಬೆಳೆಯಾದ್ರೂ ಬರುತ್ತೆ. ಬದುಕಿನ ಬಂಡಿ ಸಾಗುತ್ತೆ ಅಂತ ಪರಿತಪಿಸುತ್ತಿದ್ದಾರೆ.

Advertisement

ಕತ್ತೆಗಳ‌ ಅದ್ಧೂರಿ ಮದುವೆ, ಮಳೆಗಾಗಿ ರೈತರ ಪ್ರಾರ್ಥನೆ ದಸರಾ ಹಬ್ಬದ ಪ್ರಯುಕ್ತ ತಿಮ್ಮಾಪೂರ ಗ್ರಾಮದ ಹುಡೇದ ಲಕ್ಷ್ಮಿ ದೇವಸ್ಥಾನದಲ್ಲಿ ಇಂದು ಕತ್ತೆಗಳ ಮದುವೆ ಇಡೀ ರೈತ ಸಮೂಹದ ಕುಟುಂಬಸ್ಥರು ಸೇರಿ ಅದ್ದೂರಿಯಾಗಿ ಮದುವೆ ಮಾಡಿದರು. ಕತ್ತೆಗಳ ಮದುವೆ ಕಾಟಾಚಾರಕ್ಕೆ ಮಾಡಿಲ್ಲ. ಎಲ್ಲ ಮದುವೆಗಳಂತೆ ಶಿಸ್ತು, ಬದ್ಧ, ಸಾಂಪ್ರದಾಯಿಕವಾಗಿ ಮಾಡಲಾಯಿತು. ಮದುವೆಯ ಹಿನ್ನೆಲೆಯಲ್ಲಿ ಸಂಪ್ರದಾಯದ ಪ್ರಕಾರ ಮಹಿಳೆಯರು ಹೂಗಾರರ ಮನೆಯಿಂದ ಭಾಸಿಂಗ್ ತರಲಾಯಿತು.

ಕತ್ತೆಗಳಿಗೆ ಮೊದ್ಲು ಅರಿಶಿಣ ಶಾಸ್ತ್ರವನ್ನು ಮಾಡಿ ಸುರುಗಿ ನೀರನ್ನು ಹಾಕಲಾಯಿತು. ಬಳಿಕ ಎರಡು ಕತ್ತೆಗಳಿಗೆ ಶಂಗಾರ ಮಾಡಲಾಯಿತು. ಗಂಟಿಗೆ ಭಾಸಿಂಗ್ ಶಂಗಾರ ಮಾಡಿದ್ರೆ. ಹೆಣ್ಣು ಕತ್ತೆ ಹೂವಿನ ದಂಡಿ ಕಟ್ಟಿ ಶೃಂಗಾರ‌ ಮಾಡಿದ್ರು. ಬಳಿದ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ನೂರಾರು ಜನ್ರ ಸಮ್ಮುಖದಲ್ಲಿ ಮಾಂಗಲ್ಯ ಧಾರಣೆ ಮಾಡಿ ಅಕ್ಷತೆಯನ್ನು ಹಾಕುವುದರ ಮೂಲಕ ಕತ್ತೆಗಳಿಗೆ ಸಾಂಪ್ರದಾಯಕವಾಗಿ ಮದುವೆ ಮಾಡಲಾಯಿತು.

Advertisement

There is severe drought in the Karnataka state without rain. The situation in Thimmapura village of Gadag taluk is no different. All the crops sown have dried up without rain. The crop that was sown with hard debt has been destroyed. Thus the breadwinners are literally devastated. Even now they are waiting for the grace of Rainrayan. Even if it rains, it will grow. They are hoping that the cart of life will move on.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |
April 27, 2024
2:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ
April 25, 2024
10:12 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror