ಬೆಳೆ ಹೆಚ್ಚುತ್ತಿದೆ… ರೈತರಿಗೆ ಲಾಭ ಏಕೆ ಕಡಿಮೆ..? ಕೃಷಿಯ ನಿಜವಾದ ಪರೀಕ್ಷೆ ಉತ್ಪಾದಕತೆ..!

February 1, 2026
7:51 AM

ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಕೃಷಿ ವಲಯವು ಚೇತರಿಕೆ ಮತ್ತು ನಿರಂತರತೆಯನ್ನು ತೋರಿಸಿದೆ. ಆದರೆ, ರೈತರ ಆದಾಯದ ಬೆಳವಣಿಗೆಯನ್ನು ಉಳಿಸಿಕೊಳ್ಳುವುದು ದೇಶವು ಆಳವಾಗಿ ಬೇರೂರಿರುವ ಉತ್ಪಾದಕತೆಯ ಸವಾಲುಗಳನ್ನು ಎಷ್ಟು ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.

Advertisement
Advertisement

2025–26ರ ಆರ್ಥಿಕ ಸಮೀಕ್ಷೆಯು ಕೃಷಿಯ ಸಾಧನೆಗಳ ಜೊತೆಗೆ ಮುಂದುವರಿದ ಸಮಸ್ಯೆಗಳನ್ನೂ ಸ್ಪಷ್ಟವಾಗಿ ಬಿಂಬಿಸಿದೆ. ವಿಶೇಷವಾಗಿ ಇಳುವರಿ ಅಂತರಗಳು, ಭೂಮಿಯ ಫಲವತ್ತತೆ ಸಮಸ್ಯೆ ಮತ್ತು ಹವಾಮಾನ ಅಪಾಯಗಳಲ್ಲಿ.

ಧನುಕಾ ಅಗ್ರಿಟೆಕ್ ಲಿಮಿಟೆಡ್‌ನ ನಿವೃತ್ತ ಅಧ್ಯಕ್ಷ ಡಾ. ಆರ್.ಜಿ. ಅಗರ್ವಾಲ್ ಅವರ ಪ್ರಕಾರ, ಈ ಸಮೀಕ್ಷೆಯು ಭಾರತೀಯ ಆರ್ಥಿಕತೆಯಲ್ಲಿ ಕೃಷಿಯ ಶಾಶ್ವತ ಪಾತ್ರವನ್ನು ಒತ್ತಿಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕೃಷಿ ಸ್ಥಿರವಾದ ಪ್ರಗತಿಯನ್ನು ಸಾಧಿಸಿದೆ. ಆಹಾರ ಧಾನ್ಯ ಉತ್ಪಾದನೆ ಉನ್ನತ ಮಟ್ಟದಲ್ಲಿಯೇ ಉಳಿದಿದೆ. ಕೃಷಿಯು ಭಾರತದ ಅರ್ಧದಷ್ಟು ಉದ್ಯೋಗಿಗಳನ್ನು ಬೆಂಬಲಿಸುತ್ತಿದೆ ಮತ್ತು ಆರ್ಥಿಕತೆಯ ಐದನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತಿದೆ, ಎಂದು ಅವರು ಹೇಳಿದ್ದಾರೆ.

ಕೃಷಿಯ ಸ್ಥಿರತೆಯನ್ನು ಬೆಂಬಲಿಸಿದ ಪ್ರಮುಖ ಅಂಶಗಳಲ್ಲಿ ನೀರಾವರಿ ವ್ಯಾಪ್ತಿಯ ವಿಸ್ತರಣೆ,  ತಂತ್ರಜ್ಞಾನ ಅಳವಡಿಕೆ ಹೆಚ್ಚಿಕೆ, ತೋಟಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳ ವೈವಿಧ್ಯೀಕರಣ, ರಚನಾತ್ಮಕ ಸುಧಾರಣೆಗಳು ಕೃಷಿಗೆ ಹೆಚ್ಚಿನ ಸ್ಥಿರತೆಯನ್ನು ನೀಡಿವೆ.

 ಉತ್ಪಾದಕತೆ ಸವಾಲು ಇನ್ನೂ ಮುಂದುವರಿದಿದೆ:  ಆರ್ಥಿಕ ಸಮೀಕ್ಷೆ ಉತ್ಪಾದಕತೆ ಮತ್ತು ರೈತ ಆದಾಯದ ಮೇಲೆ ಪರಿಣಾಮ ಬೀರುವ ನಿರಂತರ ಸವಾಲುಗಳನ್ನು ಬಹಿರಂಗಪಡಿಸಿದೆ. ವಿಶೇಷವಾಗಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಇಳುವರಿ ಜಾಗತಿಕ ಮಟ್ಟಕ್ಕಿಂತ ಕಡಿಮೆ, ಇದರಿಂದ ದೇಶೀಯ ಬೇಡಿಕೆ ಪೂರೈಕೆ ಗಟ್ಟಿಯಾಗುವುದಿಲ್ಲ, ರೈತರು ಬೆಲೆ ಏರಿಳಿತ ಮತ್ತು ಆಮದು ಅವಲಂಬನೆಗೆ ಒಳಗಾಗುತ್ತಾರೆ.

ದೊಡ್ಡ ಸಮಸ್ಯೆಗಳಲ್ಲಿ ಭೂಹಿಡುವಳಿಗಳು ಇನ್ನೂ ಹೆಚ್ಚು ಹಾಳಾಗುತ್ತಿವೆ. ಇದರಿಂದ ಪ್ರಮಾಣದ ಆರ್ಥಿಕತೆ (Economies of Scale) ಸಾಧ್ಯವಾಗುವುದಿಲ್ಲ, ಸುಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ದುಬಾರಿಯಾಗುತ್ತದೆ, ವೆಚ್ಚ-ಪರಿಣಾಮಕಾರಿ ಉತ್ಪಾದನೆ ಕಷ್ಟವಾಗುತ್ತದೆಎಂದು ಹೇಳುತ್ತದೆ.

ಹವಾಮಾನ ವೈಪರೀತ್ಯ ವಿಪರೀತವಾಗಿ ಕಾಡುತ್ತಿದೆ.  ಅನಿಯಮಿತ ಮಳೆ, ಏರುತ್ತಿರುವ ತಾಪಮಾನ ಮತ್ತು ತೀವ್ರ ಹವಾಮಾನ ಘಟನೆಗಳು ಕೃಷಿಯಲ್ಲಿ ಅಪಾಯವನ್ನು ಹೆಚ್ಚಿಸುತ್ತಿವೆ.

ಕಡಿಮೆ ಲಾಭದಲ್ಲಿ ಕಾರ್ಯನಿರ್ವಹಿಸುವ ರೈತರಿಗೆ ಉತ್ಪಾದನೆ ಅನಿಶ್ಚಿತವಾಗುತ್ತದೆ, ವೆಚ್ಚದ ಒತ್ತಡ ಹೆಚ್ಚುತ್ತದೆ, ಗಳಿಸಿದ ಲಾಭ ತ್ವರಿತವಾಗಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದು ಅಪಾಯವಾಗಿ ಕಾಡುತ್ತಿದೆ.

“ಪ್ರತಿ ಹೆಕ್ಟೇರ್ ಉತ್ಪಾದಕತೆಯೇ” ಮುಂದಿನ ದಾರಿ : ಡಾ. ಅಗರ್ವಾಲ್ ಅವರ ಪ್ರಕಾರ, ಕೃಷಿ ಬೆಳವಣಿಗೆಯನ್ನು ಮುಂದುವರಿಸಲು ಹೊಸ ದೃಷ್ಟಿಕೋನ ಅಗತ್ಯ.  “ಕೇವಲ ಎಕರೆ ಪ್ರದೇಶ ಹೆಚ್ಚಿಸುವುದಲ್ಲ, ಪ್ರತಿ ಹೆಕ್ಟೇರ್ ಉತ್ಪಾದಕತೆ ಸುಧಾರಿಸುವತ್ತ ಗಮನ ಹರಿಸಬೇಕು.  ಕೃಷಿಯೋಗ್ಯ ಭೂಮಿಯ ಮೇಲೆ ಒತ್ತಡ ಇರುವುದರಿಂದ, ಭವಿಷ್ಯದ ಲಾಭಗಳು ಬರಬೇಕಾದುದು ಅಗತ್ಯ. ಹೆಚ್ಚಿನ ದಕ್ಷತೆ, ಉತ್ತಮ ಬೆಳೆ ನಿರ್ವಹಣೆ, ಒಳಹರಿವಿನ ಚುರುಕಾದ ಬಳಕೆ ಅಗತ್ಯವಿದೆ.

ಸಂಶೋಧನೆ-ನೇತೃತ್ವದ ನಾವೀನ್ಯತೆ ಅಗತ್ಯ ಇದೆ. ಇಳುವರಿ ಅಂತರ ಕಡಿಮೆ ಮಾಡಲು ಸಂಶೋಧನೆ ಆಧಾರಿತ ತಂತ್ರಜ್ಞಾನ, ಸಮತೋಲಿತ ಬೆಳೆ ಸಂರಕ್ಷಣಾ ಪದ್ಧತಿಗಳು, ನಿಖರ ಕೃಷಿ ಪರಿಹಾರಗಳ ಅಳವಡಿಕೆ ಅತ್ಯಂತ ಮುಖ್ಯವಾಗಿವೆ. ಈ ಕ್ರಮಗಳು ರೈತರಿಗೆ ಸ್ಥಿರ ಆದಾಯ ಹಾಗೂ ದೀರ್ಘಾವಧಿ ಸಮೃದ್ಧಿಯ ದಾರಿಯನ್ನು ತೆರೆಯುತ್ತವೆ.

ಆರ್ಥಿಕ ಸಮೀಕ್ಷೆ ಸ್ಪಷ್ಟಪಡಿಸುವಂತೆ, ಭಾರತದ ಕೃಷಿ ಪಥವು ಇನ್ನು ಮುಂದೆ ಕೇವಲ ಹೆಚ್ಚಿನ ಉತ್ಪಾದನೆ ಮಾಡುವುದಲ್ಲ. ಮುಂದಿನ ಹಂತವನ್ನು ನಿರ್ಧರಿಸುವುದು ಅಗತ್ಯವಿದೆ.  ಉತ್ಪಾದಕತೆ, ಸ್ಥಿತಿಸ್ಥಾಪಕತ್ವ,  ರೈತ ಆದಾಯ ಇವುಗಳು ಎಷ್ಟು ಪರಿಣಾಮಕಾರಿಯಾಗಿ ಒಟ್ಟಿಗೆ ಸಾಗುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ.  ಸ್ಥಿರ ಉತ್ಪಾದನೆಯನ್ನು ಕೃಷಿ ವಲಯದ ದೀರ್ಘಾವಧಿಯ ಸಮೃದ್ಧಿಯಾಗಿ ಪರಿವರ್ತಿಸುವುದೇ ಭಾರತದ ಕೃಷಿಯ ಮುಂದಿನ ಸವಾಲು ಮತ್ತು ಅವಕಾಶ ಎನ್ನುತ್ತದೆ ವರದಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

(ಸಮೀಕ್ಷೆಯ ಆಧಾರದಲ್ಲಿ)

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಬೆಳೆಗಾರರ ಮೌನ : ಜಾಗತಿಕ ಎಚ್ಚರದ ಘಂಟೆ ಮೊಳಗುತ್ತಿದ್ದರೂ ಏಕೆ ನಿರಾಳತೆ?
February 15, 2026
10:56 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಚಿಕ್ಕಮಗಳೂರು ಕಾಳುಮೆಣಸಿಗೆ ಜಾಗತಿಕ ಸ್ಪರ್ಶ | ರಫ್ತು ಮಾರುಕಟ್ಟೆ ಗೆಲ್ಲಲು ಫೆ. 17ಕ್ಕೆ ವಿಶೇಷ ತರಬೇತಿ
February 15, 2026
10:46 PM
by: ಮಿರರ್‌ ಡೆಸ್ಕ್
ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror