ಸೃಷ್ಟಿ ನಿಯಮಕ್ಕೆ ವಿರುದ್ಧವಾಗಿ ಸಾಗುತ್ತಿದೆ ಬೇಸಾಯ | ಮಾನವನ ಆಹಾರವೆಲ್ಲವೂ ವಿಷಮಯ |

December 9, 2023
1:35 PM

“ನಮ್ಮ ಪೂರ್ವಜರು ಸುಮಾರು 20ನೇ ಶತಮಾನದ 40ರ ದಶಕದವರೆಗೆ ಸೃಷ್ಟಿ ದೇವತೆಯು ತೋರಿಸಿಕೊಟ್ಟಂತೆ ರೈತರು(Farmer) ಬೇಸಾಯ ಪದ್ದತಿಗಳನ್ನು ಅಂದರೆ ಸಾವಯವ ಬೇಸಾಯ ಪದ್ದತಿಗಳನ್ನು(Organic Farming System) ಅನುಸರಿಸುತ್ತಿದ್ದರು. ಆದರೆ ಇತರ ದಿನಗಳಲ್ಲಿ ಮಾನವರು(Human)) ಸೃಷ್ಟಿ ನಿಯಮಕ್ಕೆ ವಿರುದ್ಧವಾಗಿ ನಡೆದು ಸಜೀವಿಗಳು (ಸಸ್ಯಗಳು, ಪ್ರಾಣಿಗಳು) ಬದುಕಿ, ಬಾಳಿ, ಸುಖ, ಶಾಂತಿ, ಸಂತೃಪ್ತಿ ಪಡೆಯಲು ಬೇಕಾದ ನೆಲ, ಆಕಾಶ, ಜಲ, ಅಗ್ನಿ, ಮತ್ತು ಗಾಳಿ ಇವುಗಳನ್ನು ಪೂರ್ತಿ ಮಾಲಿನ್ಯವಾಗುವಂತೆ(Pollution)ವರ್ತಿಸುತ್ತಿದ್ದಾರೆ. ತತ್ಪರಿಣಾಮವಾಗಿ ಬೇಸಾಯ ಕ್ಷೀಣವಾಗಿದೆ.

Advertisement

ಪರಿಸರವನ್ನು ಮಾಲಿನ್ಯಗೊಳಿಸುವಲ್ಲಿ ಬೇಸಾಯದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಗೂ ಬೆಳೆಗಳಿಗೆ ಹಾನಿ ಉಂಟು ಮಾಡುವ ಪಿಡುಗುಗಳನ್ನು ನಾಶ ಮಾಡಲು ವಿಷಕಾರಿ ರಾಸಾಯನಿಕ ಪಿಡುಗುನಾಶಕಗಳನ್ನು ಹೆಚ್ಚು ಹೆಚ್ಚು ಉಪಯೋಗ ಮಾಡಿದುದೇ ಇದಕ್ಕೆ ಪ್ರಮುಖ ಅಂಶವಾಗಿದೆ. ರಾಸಾಯನಿಕ ಗೊಬ್ಬರಗಳು ಹಾಗೂ ವಿಷಕಾರಿ ರಾಸಾಯನಿಕ ಪಿಡುಗುನಾಶಕಗಳನ್ನು ಉಪಯೋಗ ಮಾಡುತ್ತಿರುವುದರಿಂದ ಮಾನವನ ಆಹಾರಕ್ಕಾಗಿ ಬಳಸುವ ಹಣ್ಣುಗಳು, ತರಕಾರಿಗಳು, ತೃಣಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು ವಿಷಮಯವಾಗಿವೆ. ಈಗಿನ ಕಾಲಕ್ಕೆ ಒಂದರ್ಥದಲ್ಲಿ ಮಾನವನ ಆಹಾರವೆಲ್ಲವೂ ವಿಷಮಯವಾಗಿವೆ.”

ಪೋಷಕಾಂಶಗಳಾದ ಇಂಗಾಲ, ಆಮ್ಲಜನಕ ಮತ್ತು ಜಲಜನಕಗಳನ್ನು ಈಗಾಗಲೇ ಹೇಳಿದಂತೆ ಸಸ್ಯಗಳು ವಾತಾವರಣದಿಂದಲೇ ( ಗಾಳಿ ಮತ್ತು ನೀರಿನಿಂದ) ಪಡೆಯುತ್ತವೆ. ಇನ್ನುಳಿದ 13 ಪೋಷಕಾಂಶಗಳನ್ನು ಸಸ್ಯಗಳು ತಮ್ಮ ಬೇರಿನ ಮುಖಾಂತರ ಮಣ್ಣಿನಿಂದ ಪಡೆಯುತ್ತವೆ.”

“ತಿಪ್ಪೆ ಗುಂಡಿಯ ಮೇಲೆ ಬಿಸಿಲು, ಮಳೆ, ಗಾಳಿಗಳ ದುಷ್ಪರಿಣಾಮವನ್ನು ತಪ್ಪಿಸಲು ಬಹಳ ವೆಚ್ಚ ಮಾಡದೆ, ಒಂದು ಚಪ್ಪರವನ್ನು ಹಾಕುವುದು ಒಳಿತು. ಯಾಕೆಂದರೆ ತಿಪ್ಪೆ ಗುಂಡಿಯ ಮೇಲೆ ಮಳೆ, ಬಿಸಿಲು ಬಿದ್ದರೆ, ಆ ತಿಪ್ಪೆ ಗುಂಡಿಯಲ್ಲಿರುವ ಸಾರಜನಕವು ನೈಟ್ರೇಟ್ ಆಗಿ ಹಾರಿಹೋಗುವ ಸಂಭವವಿರುತ್ತದೆ.” ” ಮೃಗ ಪಂಚಕ ಮಳೆಗಾಲದ ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಮತ್ತು ಆಶ್ಲೇಷಾ ಈ 5 ಮಳೆಗಳ ಅವಧಿಗೆ ಮುಂಗಾರು ಹಂಗಾಮು ಎಂದು ಕರೆಯುತ್ತಾರೆ.
ಮಘ ಪಂಚಕ ಮಳೆಗಳಾದ ಮಘಾ, ಉತ್ತರೆ, ಹಸ್ತ, ಚಿತ್ತ, ಮತ್ತು ಸ್ವಾತಿ ಈ 5 ಮಳೆಗಳ ಅವಧಿಗೆ ಹಿಂಗಾರು ಹಂಗಾಮು ಎಂದು ಕರೆಯುತ್ತಾರೆ. ”

ಬರಹ :
ಪ್ರೊ. ಎಸ್ ಎಸ್ ಕಟಗಿಹಳ್ಳಿಮಠ
,  ಸಾವಯವ ಕೃಷಿ, (ಒಂದು ಅಧ್ಯಯನ)

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ : ಮಳೆಯ ಕೊರತೆ ಪರಿಣಾಮ
February 22, 2026
9:50 AM
by: ದ ರೂರಲ್ ಮಿರರ್.ಕಾಂ
ಭಾರತ–ಬ್ರೆಜಿಲ್ ಕೃಷಿ ಸಹಕಾರ : ನೈಸರ್ಗಿಕ ಕೃಷಿಗೆ ಒತ್ತು, ಶೀಘ್ರದಲ್ಲೇ MoU
February 22, 2026
9:44 AM
by: ದ ರೂರಲ್ ಮಿರರ್.ಕಾಂ
ಕರಾವಳಿಯಲ್ಲಿ ಅಕಾಲಿಕ ಮಳೆ ಅಬ್ಬರ | ಸುಬ್ರಹ್ಮಣ್ಯದ ಬಳಿ 42 ಮಿಮೀ, ಅಡಿಕೆ ಬೆಳೆಗಾರರಿಗೆ ಸಂಕಷ್ಟ
February 21, 2026
8:36 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-02-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ | ಎಲ್ಲೆಲ್ಲಾ ಮಳೆ ಇದೆ…? ಎಷ್ಟು ದಿನ ಮಳೆ ಸಾಧ್ಯತೆ…?
February 21, 2026
2:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror