Advertisement
Opinion

ಸೃಷ್ಟಿ ನಿಯಮಕ್ಕೆ ವಿರುದ್ಧವಾಗಿ ಸಾಗುತ್ತಿದೆ ಬೇಸಾಯ | ಮಾನವನ ಆಹಾರವೆಲ್ಲವೂ ವಿಷಮಯ |

Share

“ನಮ್ಮ ಪೂರ್ವಜರು ಸುಮಾರು 20ನೇ ಶತಮಾನದ 40ರ ದಶಕದವರೆಗೆ ಸೃಷ್ಟಿ ದೇವತೆಯು ತೋರಿಸಿಕೊಟ್ಟಂತೆ ರೈತರು(Farmer) ಬೇಸಾಯ ಪದ್ದತಿಗಳನ್ನು ಅಂದರೆ ಸಾವಯವ ಬೇಸಾಯ ಪದ್ದತಿಗಳನ್ನು(Organic Farming System) ಅನುಸರಿಸುತ್ತಿದ್ದರು. ಆದರೆ ಇತರ ದಿನಗಳಲ್ಲಿ ಮಾನವರು(Human)) ಸೃಷ್ಟಿ ನಿಯಮಕ್ಕೆ ವಿರುದ್ಧವಾಗಿ ನಡೆದು ಸಜೀವಿಗಳು (ಸಸ್ಯಗಳು, ಪ್ರಾಣಿಗಳು) ಬದುಕಿ, ಬಾಳಿ, ಸುಖ, ಶಾಂತಿ, ಸಂತೃಪ್ತಿ ಪಡೆಯಲು ಬೇಕಾದ ನೆಲ, ಆಕಾಶ, ಜಲ, ಅಗ್ನಿ, ಮತ್ತು ಗಾಳಿ ಇವುಗಳನ್ನು ಪೂರ್ತಿ ಮಾಲಿನ್ಯವಾಗುವಂತೆ(Pollution)ವರ್ತಿಸುತ್ತಿದ್ದಾರೆ. ತತ್ಪರಿಣಾಮವಾಗಿ ಬೇಸಾಯ ಕ್ಷೀಣವಾಗಿದೆ.

ಪರಿಸರವನ್ನು ಮಾಲಿನ್ಯಗೊಳಿಸುವಲ್ಲಿ ಬೇಸಾಯದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಗೂ ಬೆಳೆಗಳಿಗೆ ಹಾನಿ ಉಂಟು ಮಾಡುವ ಪಿಡುಗುಗಳನ್ನು ನಾಶ ಮಾಡಲು ವಿಷಕಾರಿ ರಾಸಾಯನಿಕ ಪಿಡುಗುನಾಶಕಗಳನ್ನು ಹೆಚ್ಚು ಹೆಚ್ಚು ಉಪಯೋಗ ಮಾಡಿದುದೇ ಇದಕ್ಕೆ ಪ್ರಮುಖ ಅಂಶವಾಗಿದೆ. ರಾಸಾಯನಿಕ ಗೊಬ್ಬರಗಳು ಹಾಗೂ ವಿಷಕಾರಿ ರಾಸಾಯನಿಕ ಪಿಡುಗುನಾಶಕಗಳನ್ನು ಉಪಯೋಗ ಮಾಡುತ್ತಿರುವುದರಿಂದ ಮಾನವನ ಆಹಾರಕ್ಕಾಗಿ ಬಳಸುವ ಹಣ್ಣುಗಳು, ತರಕಾರಿಗಳು, ತೃಣಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು ವಿಷಮಯವಾಗಿವೆ. ಈಗಿನ ಕಾಲಕ್ಕೆ ಒಂದರ್ಥದಲ್ಲಿ ಮಾನವನ ಆಹಾರವೆಲ್ಲವೂ ವಿಷಮಯವಾಗಿವೆ.”

ಪೋಷಕಾಂಶಗಳಾದ ಇಂಗಾಲ, ಆಮ್ಲಜನಕ ಮತ್ತು ಜಲಜನಕಗಳನ್ನು ಈಗಾಗಲೇ ಹೇಳಿದಂತೆ ಸಸ್ಯಗಳು ವಾತಾವರಣದಿಂದಲೇ ( ಗಾಳಿ ಮತ್ತು ನೀರಿನಿಂದ) ಪಡೆಯುತ್ತವೆ. ಇನ್ನುಳಿದ 13 ಪೋಷಕಾಂಶಗಳನ್ನು ಸಸ್ಯಗಳು ತಮ್ಮ ಬೇರಿನ ಮುಖಾಂತರ ಮಣ್ಣಿನಿಂದ ಪಡೆಯುತ್ತವೆ.”

“ತಿಪ್ಪೆ ಗುಂಡಿಯ ಮೇಲೆ ಬಿಸಿಲು, ಮಳೆ, ಗಾಳಿಗಳ ದುಷ್ಪರಿಣಾಮವನ್ನು ತಪ್ಪಿಸಲು ಬಹಳ ವೆಚ್ಚ ಮಾಡದೆ, ಒಂದು ಚಪ್ಪರವನ್ನು ಹಾಕುವುದು ಒಳಿತು. ಯಾಕೆಂದರೆ ತಿಪ್ಪೆ ಗುಂಡಿಯ ಮೇಲೆ ಮಳೆ, ಬಿಸಿಲು ಬಿದ್ದರೆ, ಆ ತಿಪ್ಪೆ ಗುಂಡಿಯಲ್ಲಿರುವ ಸಾರಜನಕವು ನೈಟ್ರೇಟ್ ಆಗಿ ಹಾರಿಹೋಗುವ ಸಂಭವವಿರುತ್ತದೆ.” ” ಮೃಗ ಪಂಚಕ ಮಳೆಗಾಲದ ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಮತ್ತು ಆಶ್ಲೇಷಾ ಈ 5 ಮಳೆಗಳ ಅವಧಿಗೆ ಮುಂಗಾರು ಹಂಗಾಮು ಎಂದು ಕರೆಯುತ್ತಾರೆ.
ಮಘ ಪಂಚಕ ಮಳೆಗಳಾದ ಮಘಾ, ಉತ್ತರೆ, ಹಸ್ತ, ಚಿತ್ತ, ಮತ್ತು ಸ್ವಾತಿ ಈ 5 ಮಳೆಗಳ ಅವಧಿಗೆ ಹಿಂಗಾರು ಹಂಗಾಮು ಎಂದು ಕರೆಯುತ್ತಾರೆ. ”

ಬರಹ :
ಪ್ರೊ. ಎಸ್ ಎಸ್ ಕಟಗಿಹಳ್ಳಿಮಠ
,  ಸಾವಯವ ಕೃಷಿ, (ಒಂದು ಅಧ್ಯಯನ)
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

14 hours ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

20 hours ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

20 hours ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

1 day ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

1 day ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

2 days ago