Advertisement
Opinion

ಸೃಷ್ಟಿ ನಿಯಮಕ್ಕೆ ವಿರುದ್ಧವಾಗಿ ಸಾಗುತ್ತಿದೆ ಬೇಸಾಯ | ಮಾನವನ ಆಹಾರವೆಲ್ಲವೂ ವಿಷಮಯ |

Share

“ನಮ್ಮ ಪೂರ್ವಜರು ಸುಮಾರು 20ನೇ ಶತಮಾನದ 40ರ ದಶಕದವರೆಗೆ ಸೃಷ್ಟಿ ದೇವತೆಯು ತೋರಿಸಿಕೊಟ್ಟಂತೆ ರೈತರು(Farmer) ಬೇಸಾಯ ಪದ್ದತಿಗಳನ್ನು ಅಂದರೆ ಸಾವಯವ ಬೇಸಾಯ ಪದ್ದತಿಗಳನ್ನು(Organic Farming System) ಅನುಸರಿಸುತ್ತಿದ್ದರು. ಆದರೆ ಇತರ ದಿನಗಳಲ್ಲಿ ಮಾನವರು(Human)) ಸೃಷ್ಟಿ ನಿಯಮಕ್ಕೆ ವಿರುದ್ಧವಾಗಿ ನಡೆದು ಸಜೀವಿಗಳು (ಸಸ್ಯಗಳು, ಪ್ರಾಣಿಗಳು) ಬದುಕಿ, ಬಾಳಿ, ಸುಖ, ಶಾಂತಿ, ಸಂತೃಪ್ತಿ ಪಡೆಯಲು ಬೇಕಾದ ನೆಲ, ಆಕಾಶ, ಜಲ, ಅಗ್ನಿ, ಮತ್ತು ಗಾಳಿ ಇವುಗಳನ್ನು ಪೂರ್ತಿ ಮಾಲಿನ್ಯವಾಗುವಂತೆ(Pollution)ವರ್ತಿಸುತ್ತಿದ್ದಾರೆ. ತತ್ಪರಿಣಾಮವಾಗಿ ಬೇಸಾಯ ಕ್ಷೀಣವಾಗಿದೆ.

ಪರಿಸರವನ್ನು ಮಾಲಿನ್ಯಗೊಳಿಸುವಲ್ಲಿ ಬೇಸಾಯದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಾಗೂ ಬೆಳೆಗಳಿಗೆ ಹಾನಿ ಉಂಟು ಮಾಡುವ ಪಿಡುಗುಗಳನ್ನು ನಾಶ ಮಾಡಲು ವಿಷಕಾರಿ ರಾಸಾಯನಿಕ ಪಿಡುಗುನಾಶಕಗಳನ್ನು ಹೆಚ್ಚು ಹೆಚ್ಚು ಉಪಯೋಗ ಮಾಡಿದುದೇ ಇದಕ್ಕೆ ಪ್ರಮುಖ ಅಂಶವಾಗಿದೆ. ರಾಸಾಯನಿಕ ಗೊಬ್ಬರಗಳು ಹಾಗೂ ವಿಷಕಾರಿ ರಾಸಾಯನಿಕ ಪಿಡುಗುನಾಶಕಗಳನ್ನು ಉಪಯೋಗ ಮಾಡುತ್ತಿರುವುದರಿಂದ ಮಾನವನ ಆಹಾರಕ್ಕಾಗಿ ಬಳಸುವ ಹಣ್ಣುಗಳು, ತರಕಾರಿಗಳು, ತೃಣಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು ವಿಷಮಯವಾಗಿವೆ. ಈಗಿನ ಕಾಲಕ್ಕೆ ಒಂದರ್ಥದಲ್ಲಿ ಮಾನವನ ಆಹಾರವೆಲ್ಲವೂ ವಿಷಮಯವಾಗಿವೆ.”

ಪೋಷಕಾಂಶಗಳಾದ ಇಂಗಾಲ, ಆಮ್ಲಜನಕ ಮತ್ತು ಜಲಜನಕಗಳನ್ನು ಈಗಾಗಲೇ ಹೇಳಿದಂತೆ ಸಸ್ಯಗಳು ವಾತಾವರಣದಿಂದಲೇ ( ಗಾಳಿ ಮತ್ತು ನೀರಿನಿಂದ) ಪಡೆಯುತ್ತವೆ. ಇನ್ನುಳಿದ 13 ಪೋಷಕಾಂಶಗಳನ್ನು ಸಸ್ಯಗಳು ತಮ್ಮ ಬೇರಿನ ಮುಖಾಂತರ ಮಣ್ಣಿನಿಂದ ಪಡೆಯುತ್ತವೆ.”

“ತಿಪ್ಪೆ ಗುಂಡಿಯ ಮೇಲೆ ಬಿಸಿಲು, ಮಳೆ, ಗಾಳಿಗಳ ದುಷ್ಪರಿಣಾಮವನ್ನು ತಪ್ಪಿಸಲು ಬಹಳ ವೆಚ್ಚ ಮಾಡದೆ, ಒಂದು ಚಪ್ಪರವನ್ನು ಹಾಕುವುದು ಒಳಿತು. ಯಾಕೆಂದರೆ ತಿಪ್ಪೆ ಗುಂಡಿಯ ಮೇಲೆ ಮಳೆ, ಬಿಸಿಲು ಬಿದ್ದರೆ, ಆ ತಿಪ್ಪೆ ಗುಂಡಿಯಲ್ಲಿರುವ ಸಾರಜನಕವು ನೈಟ್ರೇಟ್ ಆಗಿ ಹಾರಿಹೋಗುವ ಸಂಭವವಿರುತ್ತದೆ.” ” ಮೃಗ ಪಂಚಕ ಮಳೆಗಾಲದ ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಮತ್ತು ಆಶ್ಲೇಷಾ ಈ 5 ಮಳೆಗಳ ಅವಧಿಗೆ ಮುಂಗಾರು ಹಂಗಾಮು ಎಂದು ಕರೆಯುತ್ತಾರೆ.
ಮಘ ಪಂಚಕ ಮಳೆಗಳಾದ ಮಘಾ, ಉತ್ತರೆ, ಹಸ್ತ, ಚಿತ್ತ, ಮತ್ತು ಸ್ವಾತಿ ಈ 5 ಮಳೆಗಳ ಅವಧಿಗೆ ಹಿಂಗಾರು ಹಂಗಾಮು ಎಂದು ಕರೆಯುತ್ತಾರೆ. ”

ಬರಹ :
ಪ್ರೊ. ಎಸ್ ಎಸ್ ಕಟಗಿಹಳ್ಳಿಮಠ
,  ಸಾವಯವ ಕೃಷಿ, (ಒಂದು ಅಧ್ಯಯನ)
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

11 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

11 hours ago

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…

11 hours ago

ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ

ಶಿರಾಡಿ ಘಾಟ್‌ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…

12 hours ago

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…

23 hours ago

ಭಾರೀ ಮಳೆಯ ಎಚ್ಚರಿಕೆ | ಕರಾವಳಿ ಕರ್ನಾಟಕದಲ್ಲಿ ಅತಿ ಭಾರೀ ಮಳೆ – ಪ್ರವಾಹ- ಭೂಕುಸಿತದ ಎಚ್ಚರಿಕೆ

ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಕೇರಳದಲ್ಲಿ ಇಂದು ಭಾರೀ ಮಳೆಯ…

1 day ago