ಜಗತ್ತಿನಲ್ಲಿ ಯಾವುದೇ ಜೀವಿಯಾಗಲಿ ಪರಸ್ಪರ ಗಂಡು ಹೆಣ್ಣಿನ ಮಿಲನವಿಲ್ಲದೆ ಮರಿಗಳಿಗೆ ಜನ್ಮ ನೀಡುವುದು ಅಸಾಧ್ಯದ ವಿಚಾರ. ಆದರೂ ಕೆಲವೊಂದು ಸರೀಸೃಪ ಜೀವಿಗಳು ಸ್ವತಃ ತಮ್ಮಷ್ಟಕ್ಕೆ ತಾವೇ ಗರ್ಭ ಧರಿಸಿದ ನಿದರ್ಶನಗಳಿವೆ. ಇತ್ತೀಚಿಗೆ ಈ ರೀತಿಯ ಮತ್ತೊಂದು ಆಶ್ವರ್ಯಕರ ಘಟನೆ ಕೋಸ್ಟರಿಕಾದಲ್ಲಿ ನಡೆದಿದೆ. ಹೆಣ್ಣು ಮೊಸಳೆಯೊಂದು ಗಂಡು ಮೊಸಳೆಯ ಮಿಲನವಿಲ್ಲದೆ ಮೊಟ್ಟೆ ಇಟ್ಟಿದೆ, ಇದು ವೈಜ್ಞಾನಿಕ ಜಗತ್ತನ್ನೇ ಅಚ್ಚರಿಗೊಳಿಸಿದೆ. ಕೋಸ್ಟರಿಕಾದ ಮೃಗಾಲಯದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಈ ಮೊಟ್ಟೆಯು ತಾಯಿ ಮೊಸಳೆಗೆ 99.9% ನಷ್ಟು ಹೋಲಿಕೆಯನ್ನು ಹೊಂದಿದೆ ಎಂದು ಪರೀಕ್ಷೆಯು ಬಹಿರಂಗಪಡಿಸಿದೆ. ಈ ವಿದ್ಯಮಾನವು ಪಕ್ಷಿಗಳು, ಮೀನುಗಳು ಮತ್ತು ಇತರ ಸರೀಸೃಪ ಜಾತಿಗಳಲ್ಲಿ ಕಂಡುಬಂದಿವೆ. ಆದರೆ ಮೊಸಳೆಗಳಲ್ಲಿ ಹಿಂದೆದೂ ಕಂಡುಬಂದಿರಲಿಲ್ಲ.
ಹೆಣ್ಣು ಮೊಸಳೆಯು ಯಾವಾಗಲೂ ಇತರ ಮೊಸಳೆಗಳಿಂದ ಬೇರ್ಪಟ್ಟು ವಾಸಿಸುತ್ತಿದ್ದರಿಂದ ಅದು ಹೇಗೆ ಮೊಟ್ಟೆ ಇಟ್ಟಿದೆ ಎಂದು ಮೃಗಾಲಯದವರು ಗೊಂದಲಕ್ಕೊಳಗಾದರು. ಇದರ ವಿಚಾರಣೆಗಾಗಿ ವಾರೆನ್ ಬೂತ್ ನೇತೃತ್ವದ ವಿಜ್ಞಾನಿಗಳ ತಂಡವನ್ನು ಕರೆತರಲಾಯಿತು. ವಿಜ್ಞಾನಿಗಳು ವಂಶವಾಹಿಗಳನ್ನು ಪರೀಕ್ಷಿಸಿದಾಗ ಮೊಟ್ಟೆಯನ್ನು ತನ್ನ ತಾಯಿಯೊಂದಿಗೆ ಶೇಕಡಾ 99.9% ರಷ್ಟು ಹೋಲುತ್ತದೆ ಹಾಗೂ ಅದಕ್ಕೆ ಯಾವುದೇ ತಂದೆ ಇಲ್ಲ ಎಂದು ದೃಢಪಡಿಸಿದರು. ಹಾಗೆ “ಮೊಸಳೆಗಳಲ್ಲಿ ಈ ಅಪರೂಪದ ಸಂತಾನೋತ್ಪತ್ತಿ ವಿಧಾನ ಇದೇ ಮೊದಲು’ ಎಂದು ತಿಳಿಸಿದರು.
ಕೆಲವೊಮ್ಮೆ ಕೆಲವು ಪ್ರಾಣಿಗಳು ಗಂಡಿನ ಸಹಾಯವಿಲ್ಲದೆ ಮರಿಗಳಿಗೆ ಜನ್ಮ ನೀಡುತ್ತವೆ. ಇದನ್ನು ‘ವರ್ಜಿನ್ ಬರ್ತ್’ ಅಥವಾ ‘ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿನ್’ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಅಂಡಾಣು ಪುರುಷ ಜೀವಿಗಳ ವೀರ್ಯದಿಂದ ಫಲವತ್ತಾಗದೆ ಭ್ರೂಣವಾಗುತ್ತವೆ. ಈ ಹಿಂದೆ ಕೆಲವು ಜಾತಿಯ ಪಕ್ಷಿಗಳು, ಮೀನುಗಳು, ಹಲ್ಲಿಗಳು ಈ ರೀತಿಯ ಸರೀಸೃಪಗಳಲ್ಲಿ ಈ ರೀತಿಯ ಗರ್ಭಧಾರಣೆ ಕಾಣಿಸಿಕೊಂಡಿವೆ. ಆದರೆ ಮೊಸಳೆಗಳಲ್ಲಿ ಈ ಪ್ರಕ್ರಿಯೆಯಲ್ಲಿ ಪುರುಷ ಜೀವಿಯ ಸಹಕಾರವಿಲ್ಲದೆ ಅಂಡಾಣು ಹೆಣ್ಣು ಜೀವಿಯಲ್ಲಿ ತನ್ನಿಂದ ತಾನೇ ಭ್ರೂಣವಾಗಿ ಬೆಳೆಯುತ್ತದೆ.
ಕನ್ಯಾಜತ್ವ ಅಥವಾ ವರ್ಜಿನ್ ಬರ್ತ್ ಎಂಬುದು ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿಸ್ ಎಂಬ ನೈಸರ್ಗಿಕ ಪ್ರಕ್ರಿಯೆ. ಜೇನು ನೊಣಗಳು, ಇರುವೆಗಳಂತಹ ಜೀವಿಗಳಲ್ಲಿ ಲೈಂಗಿಕ ವರ್ಣತಂತು ಇರುವುದಿಲ್ಲ. ಈ ಜೀವಿಗಳು ಪಾರ್ಥೆನೋಜೆನೆಸಿಸ್ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ. ಅದೇ ರೀತಿ ಕೆಲವು ಸರೀಸೃಪಗಳು, ಮೀನುಗಳು, ಪಕ್ಷಿಗಳು ಸಹ ಈ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆದರೂ ಪ್ರಕ್ರಿಯೆಯ ಮೂಲಕ ಜನಿಸಿದ ಭ್ರೂಣವು ಬದುಕುಳಿಯುವ ಸಾಧ್ಯತೆ ಕಡಿಮೆ.
ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…
ಈ ವರ್ಷ ವಿಶೇಷವಾಗಿ ಗಮನ ಸೆಳೆದ ಕ್ಷೇತ್ರ ಕೊಟ್ಟಿಯೂರ್ ಅಥವಾ ತೃಚ್ಚೇರುಮನ ಕ್ಷೇತ್ರ…
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಕ್ತ ಜಲಾಶಯದಲ್ಲಿ 77.144…
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವಿವಿಧ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಾಗಿತ್ತು. ವಿವಿಧ ಚಿತ್ರಕಲಾವಿದರ…