ಸುಳ್ಯ ತಾಲೂಕಿನ ನಡುಗಲ್ಲು ಬಳಿಯ ಚಾರ್ಮತ ಪ್ರದೇಶದ ವಲ್ಪಾರೆ ಕಾಡಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಶನಿವಾರ ರಾತ್ರಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನ ಪಡುತ್ತಿದ್ದಾರೆ. ತರಗೆಲೆ ಹಾಗೂ ಬಿದಿರು ಕೂಡಾ ಇಲ್ಲಿ ಹೆಚ್ಚಾಗಿರುವ ಕಾರಣದಿಂದ ಬೆಂಕಿ ವ್ಯಾಪಿಸುತ್ತಲೇ ಇದೆ. ವಾರದ ಹಿಂದೆ ಬೆಂಕಿ ಹತ್ತಿಕೊಂಡಿತ್ತು. ನಂತರ ಕಡಿಮೆಯಾದರೂ ಇದೀಗ ಮತ್ತೆ ಬೆಂಕಿ ವ್ಯಾಪಿಸಿದೆ. ಶುಕ್ರವಾರ ಸಂಜೆಯಷ್ಟೇ ಮಳೆಯಾಗಿದ್ದರೂ ಮತ್ತೆ ಅದೇ ಪ್ರಮಾಣದಲ್ಲಿ ಬಿಸಿಲು ಕಂಡುಬಂದಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಡುಗಲ್ಲು ಬಳಿಯ ಚಾರ್ಮಾತ ಪ್ರದೇಶದ ವಾಲ್ಪಾರೆ ಕಾಡಿನಲ್ಲಿ ಬೆಂಕಿ. @aranya_kfd @CMofKarnataka @Environment_Ke #forest #ಅರಣ್ಯ
Fire broke out in Valpare forest, Charmatha area near Nadugallu in Sullia taluk of Dakshina Kannada district. pic.twitter.com/ZqZi8jTXIR— theruralmirror (@ruralmirror) April 8, 2023
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel