ದಾಖಲೆ ಪ್ರಮಾಣದಲ್ಲಿ ಮೀನುಗಾರಿಕೆ | ಕುಸಿದ ಲಾಭಾಂಶ | ಮೀನುಗಾರರಿಗೆ ಸಿಹಿಕಹಿ |

May 31, 2023
7:03 PM

ಮೀನುಗಾರಿಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ತೀರದ ಜನರ ಜೀವನೋಪಾಯ. ಮತ್ಸ್ಯೋದ್ಯಮ ವಿಶ್ವ ಮಟ್ಟದಲ್ಲಿ ಈ ಜಿಲ್ಲೆಗಳು ಗುರುತಿಸಿಕೊಳ್ಳುವಂತೆ ಮಾಡಿದೆ. ವರ್ಷದ 10 ತಿಂಗಳು ಮೀನುಗಾರರ ಜೀವನ ಮೀನುಗಾರಿಕೆಯಲ್ಲೇ ಕಳೆಯುತ್ತದೆ. ಈ ಬಾರಿ ಮೀನುಗಾರಿಕೆ ನಡೆದರೂ ನಿರೀಕ್ಷಿತ ಮಟ್ಟದಲ್ಲಿ ನಡೆದಿದೆ. ಮೀನುಗಾರರ ಬದುಕು ಸಾಗಿದೆ, ಆದರೆ ನಿರೀಕ್ಷಿತ ಆದಾಯ ಸಾಧ್ಯವಾಗಿಲ್ಲ.

Advertisement
Advertisement

ಈ ಬಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರಮಾಣದಲ್ಲಿ ಮೀನುಗಾರಿಕೆ ನಡೆದಿದೆ. ಆದರೆ, ಲಾಭಾಂಶ ಮಾತ್ರ ಕಡಿಮೆ ಆಗಿದೆ. 2022-23 ನೇ ಸಾಲಿನ ಋತುವಿನಲ್ಲಿ ಮಳೆ, ಚಂಡಮಾರುತದ ಎಫೆಕ್ಟ್‌ ಕಡಿಮೆ ಇದ್ದಿದ್ರಿಂದ ಈ ಸಾಲಿನ ಅಂತ್ಯದವರೆಗೂ (ಮೇ 31) ಮೀನುಗಾರಿಕೆ ನಡೆಸಲು ಸಾಧ್ಯವಾಗಿದೆ. ಆದರೆ, ತೀವ್ರ ಬೆಲೆ ಕುಸಿತ, ರಫ್ತು ಪ್ರಮಾಣ ಕಡಿಮೆ ಇದೆಲ್ಲವೂ ಮೀನುಗಾರರಿಗೆ ಹೆಚ್ಚಿನ ಲಾಭವನ್ನು ತಂದಿಲ್ಲ. ಆದರೆ ಸ್ಥಳೀಯ ಗ್ರಾಹಕರಿಗೆ ಮಾತ್ರ ಕಡಿಮೆ ಬೆಲೆಯಲ್ಲಿ ಮೀನುಗಳು ಸಿಗುವಂತಾಗಿತ್ತು.

ಹೇಗಿತ್ತು ಈ ಋತುವಿನ ಮೀನುಗಾರಿಕೆ? : ಈ ವರ್ಷ ಅಧಿಕ ಪ್ರಮಾಣದಲ್ಲಿ ಮೀನುಗಾರಿಕೆ ನಡೆದಿದೆ. ಈ ಋತುವಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,33,537 ಮೆಟ್ರಿಕ್‌ ಟನ್​ನಷ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ 2,12,081 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿದೆ. ಹಿಂದಿನ ವರುಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಮೀನುಗಾರಿಕೆ ನಡೆದಿದೆ. ಒಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022-23 ನೇ ಸಾಲಿನ ಋತುವಿನಲ್ಲಿ 5,45,618 ಮೆಟ್ರಿಕ್‌ ಟನ್‌ ಮೀನುಗಾರಿಕೆ ನಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಿರ ಹತ್ತಿರ ಮೂರು ಪಟ್ಟಿನಷ್ಟು ಮೀನುಗಾರಿಕೆ ಅಧಿಕವಾಗಿದೆ.

ಕೈಗೂಡದ ನಿರೀಕ್ಷೆ : ಈ ಬಾರಿ ನಿರೀಕ್ಷೆಯಂತೆ ಫಿಶ್‌ ಮಿಲ್​ಗಳು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎನ್ನುವ ಮಾತಿದೆ. ಉಳ್ಳಾಲದ ಒಂದೇ ಭಾಗದಲ್ಲಿರುವ 13 ಫಿಶ್‌ ಮಿಲ್​ಗಳು ವರ್ಷವಿಡೀ ಬಂದ್‌ ಆಗಿತ್ತು. ಜೊತೆಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕೂಡಾ ತಲೆದೋರಿದ್ದರಿಂದ ಮೀನು ರಫ್ತಿನ ಮೇಲೆ  ಹೊಡೆತ ಬಿದ್ದಿದೆ. ಮೀನುಗಾರಿಕೆ ಹೆಚ್ಚಿದ್ದರೂ, ಲಾಭಾಂಶ ಮಾತ್ರ ಶೇಕಡಾ 30-40 ರಷ್ಟು ಕುಸಿದಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

Advertisement
Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದೇ ರಾಶಿಯಲ್ಲಿ 3 ಗ್ರಹ…..| ತ್ರಿಗ್ರಾಹಿ ಯೋಗವು 50 ವರ್ಷಗಳ ನಂತರ ಸಂಭವಿಸುತ್ತಿದೆ | 5 ರಾಶಿಯವರಿಗೆ ಬಂಪರ್‌ ಲಾಟರಿ..!
June 11, 2025
7:30 AM
by: ದ ರೂರಲ್ ಮಿರರ್.ಕಾಂ
ಕೋಲಾರ ಜಿಲ್ಲೆಯಲ್ಲಿ ನಾಳೆ ಮಾವು ಬೆಳೆಗಾರರಿಂದ ಬಂದ್ ಕರೆ |
June 10, 2025
10:31 PM
by: The Rural Mirror ಸುದ್ದಿಜಾಲ
ಕೃಷಿ ಜೊತೆಗೆ ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ನೀಡಿ
June 10, 2025
10:05 PM
by: The Rural Mirror ಸುದ್ದಿಜಾಲ
ಚಾಮರಾಜನಗರದ ಬೇಡುಗುಳಿ ಬಳಿ ಹುಲಿ ದಾಳಿಗೆ ಮೃತಪಟ್ಟ ಮಹಿಳೆ
June 10, 2025
9:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group