ಮೇವು ಪೂರೈಸಿದರೂ ಬಿಲ್‌ ನೀಡಿಲ್ಲ..! | ಪ್ರಧಾನಿಗೆ ಪತ್ರ ಬರೆದ ಚಿಕ್ಕಬಳ್ಳಾಪುರದ ಉದ್ಯಮಿ |

April 17, 2022
11:24 AM

ರಾಜ್ಯದಲ್ಲಿ  ಮತ್ತೆ ಕಮಿಶನ್‌ ವ್ಯವಹಾರ ಸದ್ದು ಮಾಡುತ್ತಿದೆ. ಗುತ್ತಿಗೆದಾರರ ಸಂಘವು ಕಮಿಶನ್‌ ವ್ಯವಹಾರದ ಆರೋಪದ ಬೆನ್ನಲ್ಲೇ ಇದೀಗ ಮೇವು ವ್ಯವಹಾರದಲ್ಲೂ ಕಮಿಶನ್‌ ಬಗ್ಗೆ ಆರೋಪ ಬಂದಿದೆ. ಈ ಬಗ್ಗೆ ಉದ್ಯಮಿ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ.

Advertisement

ಬೆಳಗಾವಿಯ ಸಂತೋಷ್ ಅವರು ಕಮಿಶನ್‌ ಆರೋಪ ಮಾಡಿ ಉಡುಪಿಯಲ್ಲಿ ಆತ್ಮಹತ್ಯೆ‌ ಪ್ರಕರಣ ನಡೆದ ಬಳಿಕ ರಾಜ್ಯದಲ್ಲಿ ಕಮಿಶನ್‌ ವ್ಯವಹಾರವು ಬಹುದೊಡ್ಡ ಸದ್ದು ಮಾಡಿದೆ. ಗುತ್ತಿಗೆದಾರರ ಸಂಘವು ಕಮಿಶನ್‌ ವ್ಯವಹಾರದ ಬಗ್ಗೆ ನೇರ ಆರೋಪ ಮಾಡಿದ್ದರೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಬಹುಕೋಟಿ ಮೇವು ಹಗರಣ ಸದ್ದು‌ ಮಾಡಿದೆ. ಮೇವು ಪೂರೈಸಿದರೂ ಕಮಿಷನ್ ಕಾರಣ ನೀಡಿ ಬಿಲ್ ನೀಡಿಲ್ಲ ಎಂದು ಹರ್ಷ ಅಸೋಸಿಯೇಟ್ಸ್​ನ ಜಿ.ಎಂ ಸುರೇಶ್ ಎಂಬವರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಇದೀಗ ತಾನು ಸಾಲಕ್ಕೆ ಸಿಲುಕಿಕೊಂಡಿದ್ದು, ಪ್ರಾಣಕ್ಕೆ ಹಾನಿಯಾದರೆ ಇದೇ ಕಾರಣ ಎಂದು ಹೇಳಿದ್ದಾರೆ‌.

ಸುರೇಶ್ ಅವರು ರೈತರಿಂದ ಮೇವು ಖರೀದಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ 591 ಟನ್ ಮೇವು ಸರಬರಾಜು ಮಾಡಿದ್ದರು. ಆದರೆ ಕಮಿಷನ್ ಆಸೆಗಾಗಿ ಬೇಕೆಂದೇ ಬಿಲ್ ವಿಳಂಬ ಮಾಡುತ್ತಿದ್ದಾರೆ. ಹಳೇ ಡೇಟ್ ಗೆ ಪ್ರೊಸೀಡಿಂಗ್ಸ್ ಮಾಡಿ ಅನ್ಯಾಯ ಮಾಡಿದ್ದಾರೆ. ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಬರಬೇಕಾದ ಬಿಲ್ ಬಂದಿಲ್ಲ. 3 ಲೋಡ್ ಮೇವಿಗೆ ಒಂದು ಲೋಡ್ ಮೇವಿನ ದರ ನೀಡುತ್ತಿದ್ದಾರೆ. ಇದಕ್ಕಾಗಿ ಹೇಳೇ ಡೇಟ್ ಗೆ ದಾಖಲೆ ತಯಾರಿಸಿದ್ದಾರೆ ಎಂದು ಸುರೇಶ್ ಪತ್ರದಲ್ಲಿ ಆರೋಪಿಸಿದ್ದಾರೆ.

ಆದರೆ, ಈ ಬಗ್ಗೆ  ಪ್ರತಿಕ್ರಿಯೆ ನೀಡಿರುವ ಪಶಸಂಗೋಪನೆ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಡಾ.ರವಿ ಅವರು ‘ಸುರೇಶ್ ಅವರು ಒಣ ಮೇವಿನ ಬದಲು ಹಸಿ ಮೇವನ್ನು ಪೂರೈಸಿದ್ದರು. 1 ಕೆಜಿ ಒಣ ಮೇವು, 3 ಕೆ.ಜಿ ಹಸಿ ಮೇವಿಗೆ ಸಮವಾಗುತ್ತದೆ. ಇದೇ ರೀತಿ ಡಿಸಿ ಆಫೀಸ್​​ನಿಂದ ಪೇಮೆಂಟ್ ಮಾಡಿದ್ದಾರೆ. ಆದ್ರೆ ಹೆಚ್ಚು ಪೇಮೆಂಟ್​ ಬೇಕೆಂದು ಸುರೇಶ್ ಅವರು ದೂರು ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ | ರಾಜ್ಯದಲ್ಲಿ ಎ.27 ರ ನಂತರ ಮಳೆ ಹೆಚ್ಚಾಗುವ ಲಕ್ಷಣ
April 23, 2025
3:13 PM
by: ಸಾಯಿಶೇಖರ್ ಕರಿಕಳ
ಬೆಳೆಗಾರರಿಂದ ಗ್ರಾಹಕರಿಗೆ ನೇರ ಮಾವು ಮಾರಾಟ | ಅಂಚೆ ಇಲಾಖೆಯಿಂದ 6 ವರ್ಷಗಳಿಂದ ಯಶಸ್ವಿ | ದೆಹಲಿಯವರೆಗೂ ಮಾವಿನಹಣ್ಣು ರವಾನೆ |
April 23, 2025
11:24 AM
by: ದ ರೂರಲ್ ಮಿರರ್.ಕಾಂ
ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಯಶಸ್ಸು | ಕೋಟ್ಯಾಧಿಪತಿ ಯೋಗ!
April 23, 2025
8:13 AM
by: ದ ರೂರಲ್ ಮಿರರ್.ಕಾಂ
ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ
April 22, 2025
9:35 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group