ಹಬ್ಬದ ಸಮಯದಲ್ಲಿ ಕಲಬೆರಕೆ ಸಿಹಿತಿಂಡಿಗಳು ಮತ್ತು ಡೈರಿ ಉತ್ಪನ್ನಗಳನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸೂಚನೆ ನೀಡಿದೆ.
ಕಲಬೆರಕೆ ಪ್ರಯತ್ನ ತಡೆಗಟ್ಟಲು ಹಬ್ಬದ ಸಮಯದಲ್ಲಿ ಆಗಾಗ್ಗೆ ಕಣ್ಗಾವಲು ಇರಿಸಬೇಕು ಹಾಗೂ ತಪಾಸಣೆ ನಡೆಸುವಂತೆಯೂ ತಿಳಿಸಿದೆ. ಹಬ್ಬದ ಸಮಯದಲ್ಲಿ ಸಿಹಿತಿಂಡಿಗಳು, ಖಾರಗಳು, ಹಾಲು ಮತ್ತು ತುಪ್ಪ, ಪನೀರ್ನಂತಹ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ಎಫ್ಎಸ್ಎಸ್ಎಐ ಪತ್ರದಲ್ಲಿ ಉಲ್ಲೇಖಿಸಿದೆ. ಈ ಹೆಚ್ಚಿದ ಬೇಡಿಕೆಯು ಈ ಉತ್ಪನ್ನಗಳನ್ನು ಕಲಬೆರಕೆ ಮಾಡಲು ಪ್ರೇರಣೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಗಮನ ಅಗತ್ಯ ಎಂದು ಅದು ಹೇಳಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel