ಸುಮಾರು ಒಂದು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ, ಚೆಂಬು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗಿತ್ತು. ಮಳೆ ಹಾಗೂ ಪ್ರವಾಹದ ಕಾರಣದಿಂದ ದ.ಕ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಕಡೆ ಸೇತುವೆ, ಕಾಲು ಸಂಕ ಕೊಚ್ಚಿ ಹೋಗಿತ್ತು. ಇದೀಗ ಅಂತಹ ಕಡೆಗಳಲ್ಲಿ ಸೇತುವೆ ರಚನೆ ಆಗಬೇಕಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿಯ ಕನಸು ಹೊತ್ತಿರುವ ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಯುವಕ ಸಂಘ ಕಾಲು ಸಂಕ ರಚನೆ ಮಾಡಿಕೊಟ್ಟಿದೆ.
ಕೆಲವು ತಿಂಗಳ ಹಿಂದೆ ವಿಪರೀತ ಮಳೆಯಿಂದಾಗಿ ದ.ಕ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಯು.ಪಿ.ರವೀಂದ್ರ ಇವರ ಮನೆಗೆ ಭೀಕರ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ಹಾನಿಯಾಗಿತ್ತು. ದಿನ ಬಳಕೆಗೆ ಉಪಯೋಗ ಮಾಡುವಂತಹ ಕಟ್ಟಿಗೆ ಸಾಮಾಗ್ರಿಗಳು ಮತ್ತು ಇತರ ಸಾಮಾಗ್ರಿಗಳು ನೀರು ಪಾಲಾಗಿತ್ತು. ಅದಲ್ಲದೆ ಈ ಮನೆಗೆ ತೆರಳುವ ಹಾಗೂ ಸಮೀಪದ ಮನೆಗೆ ತೆರಳುವ ರಸ್ತೆಯ ಹತ್ತಿರ ಇರುವ ಹೊಳೆಗೆ ಅಡ್ಡಲಾಗಿ ಸಂಪರ್ಕ ಕಾಲುಸೇತುವೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಹೀಗಾಗಿ ರವೀಂದ್ರ ಮತ್ತು ಮನೆಯವರಿಗೆ ಹಾದುಹೋಗಲು ಕಷ್ಟಕರವಾಗಿರುವುದರಿಂದ ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಯುವಕ ಸಂಘದ ವತಿಯಿಂದ ನಡೆದಾಡಲು ಕಾಲುಸೇತುವೆ ನಿರ್ಮಾಣ ಮಾಡಲಾಯಿತು.
ಈ ಶ್ರಮದಾನ ಕಾರ್ಯದಲ್ಲಿ ಪಯಸ್ವಿನಿ ಯುವಕ ಸಂಘ ಸಂಪಾಜೆ ಕೊಡಗು ಇದರ ಹಿರಿಯ ಸದಸ್ಯರುಗಳು, ಸಂಘದ ಎಲ್ಲಾ ಸದಸ್ಯರುಗಳು ಹಾಗೂ ಯು.ಪಿ.ರವೀಂದ್ರ ಮತ್ತು ಮನೆಯವರು ಭಾಗವಹಿಸಿದರು. ಯುವಕರ ಗ್ರಾಮೀಣ ಕಾಳಜಿ ಹಾಗೂ ಸೇವಾ ಮನೋಭಾವಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…