ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವ ಭಕ್ತರಿಗಾಗಿ | ಅಯೋಧ್ಯೆಯ ಕುರಿತು ಒಂದಿಷ್ಟು ಮಾಹಿತಿಗಳು…

February 12, 2024
2:10 PM
ಅಯೋಧ್ಯೆಗೆ ಭೇಟಿ ನೀಡಬೇಕು ಎನ್ನುವವರಿಗೆ ಹಲವು ಪ್ರಶ್ನೆಗಳು ಇರುತ್ತವೆ. ಹೇಗೆ ವ್ಯವಸ್ಥೆ? ಏನೆಲ್ಲಾ ನೋಡಬಹುದು ಇತ್ಯಾದಿಗಳು. ಈ ಬಗ್ಗೆ ಸುಧೀರ್ ಸಾಗರ್ ಅವರು ಬರೆದಿರುವ ಬರಹವನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.

ಮೊದಲಿಗೆ…. ಅಯೋಧ್ಯೆ(Ayodya) ದೊಡ್ಡ ನಗರವೇನಲ್ಲ. ಫೈಜಾ಼ಬಾದ್(Faizabad) ಎಂಬ ನಗರದ(City) ಹೊರವಲಯದಲ್ಲಿ, ಕೇವಲ ಐದು ಕಿಮೀ ಸುತ್ತಳತೆಯಲ್ಲಿರೋ, ಒಂದೇ ದಿನದೊಳಗೆ ಬರಿಗಾಲಲ್ಲೇ ಇಡೀ ಊರನ್ನು ಅಳೆದು ಮುಗಿಸಬಹುದಾದಂತಹ ಪುಟ್ಟ ಊರು ಇದು. ಹಾಗಾಗಿ ತೀರಾ ಐಷಾರಾಮಿ ಸೌಲಭ್ಯಗಳ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ….

Advertisement
Advertisement

ನೋಡುವ ಸ್ಥಳಗಳು : ಅಯೋಧ್ಯೆಯಲ್ಲಿ ಮೊದಲ ದರ್ಶನ ಹನುಮಂತನಿಗೇ ಅನ್ನೋ ನಂಬಿಕೆಯಿರೋ ಕಾರಣ, ಮೊದಲು… ಹನುಮಾನ್ ಗಢಿ ಮಂದಿರ ತಲುಪಿ ದರ್ಶನ ಮುಗಿಸಿ. ಇಲ್ಲಿಂದ ಹೊರ ಬಂದು ರಾಜಪಥ ಮಾರ್ಗದಲ್ಲಿ ಎಡಕ್ಕೆ ಚಲಿಸಿದಲ್ಲಿ ನೋಡಬೇಕಿರೋ ಅಷ್ಟೂ ಜಾಗಗಳೂ ಇದೇ ಹಾದಿಯಲ್ಲಿ ಸಿಗುತ್ತವೆ. ಹಾಗಾಗಿ ಗೈಡುಗಳ ಅವಶ್ಯಕತೆಯೂ ಇಲ್ಲ…

Advertisement

2. ರಾಜದ್ವಾರ ಮಂದಿರ ( ಹನುಮಾನ್ ಮಂದಿರದ ಎದುರಲ್ಲೇ ಇದೆ).

3. ಭರತ ಮಿಲಾಪ್ ಮಂದಿರ. ( 50mtr ಅಂತರ).

Advertisement

4. ದಶರಥ ಮಹಲ್ ( 200mtr ಅಂತರ).

5. ರಾಮಜನ್ಮಭೂಮಿ ಶ್ರೀರಾಮ ಮಂದಿರ ( 500mtr ದೂರದಲ್ಲಿದೆ).

Advertisement

6. ಅರಬಿಂದೋ‌ ಆಶ್ರಮ. (ಶ್ರೀರಾಮಮಂದಿರದ Exit ಗೇಟ್ ಬಳಿ ).

7. ಸುಗ್ರೀವ ಕಿಲಾ ಮಂದಿರ. ( ಶ್ರೀರಾಮಮಂದಿರದ ಪ್ರವೇಶ ದ್ವಾರದಿಂದ 400mtr).

Advertisement

8. ಕನಕಭವನ (ಸೀತೆಗೆ ಕೈಕೇಯಿ ಉಡುಗೊರೆಯಾಗಿ ನೀಡಿದ ಮಹಲು. ದಶರಥ ಮಹಲಿನಿಂದ 200mtr ).

9. ಚೋಟಿ‌ ದೇವ್‌ಕಾಲಿ ದೇವಸ್ಥಾನ.(900mtr from ಹನುಮಾನ್ ಗಢಿ).

Advertisement

10. ರಾಮ್ ಕೀ ಪೈಡಿ, ಸರಯೂ ಘಾಟ್… (ಹನುಮಾನ್ ಮಂದಿರದಿಂದ 2km).

11. ಗುಪ್ತಾರ್ ಘಾಟ್ (ಅಯೋಧ್ಯೆಯಿಂದ 10km ದೂರದಲ್ಲಿ ಸರಯೂ ನದಿ ದಂಡೆಯಲ್ಲಿರೋ ಈ ಘಾಟಿನಲ್ಲಿಯೇ ಜಲಸಮಾಧಿಯಾಗುವ ಮೂಲಕ ಶ್ರೀರಾಮ ತನ್ನ ಅವತಾರವನ್ನು ಮುಗಿಸಿದ್ದು ).

Advertisement

12. ಬಡಿ‌ ದೇವ್‌ಕಾಲಿ ಮಂದಿರ, ಅಯೋಧ್ಯೆಯ ಕುಲದೇವತೆ. ( ಹನುಮಾನ್ ಗಢಿಯಿಂದ 5km ).

ಕೆಲವೊಂದು ಗಮನಿಸಬೇಕಾದ ಅಂಶಗಳು: ಬಹುತೇಕ ಜನರೆಲ್ಲಾ ಬೆಳಗ್ಗಿನ ಸಮಯದಲ್ಲಿ ದರ್ಶನ ಮುಗಿಸಿ ಊರುಗಳಿಗೆ ತೆರಳೋದ್ರಿಂದಾಗಿ, ಅಯೋಧ್ಯೆಯಲ್ಲಿಯೇ ತಂಗುವುದಾದಲ್ಲಿ ಸಂಜೆಯ ನಂತರದ ದರ್ಶನದ ಆಯ್ಕೆ ಮಾಡಿಕೊಳ್ಳೋದು ಉತ್ತಮ. ಜನಸಂದಣಿ ಕಡಿಮೆಯಿರುತ್ತದೆ… ಸಾಮಾನ್ಯವಾಗಿ ಶ್ರೀರಾಮನ ದರ್ಶನಕ್ಕೆ ಕನಿಷ್ಟ ಎರಡು ಗಂಟೆಗಳು ತೆಗೆದುಕೊಳ್ಳುತ್ತದೆ. ತುಂಬಾ ಬಿಗಿ ಭದ್ರತೆಯಿರೋ ಕಾರಣ, ಮೊಬೈಲ್, ಇಯರ್ ಫೋನ್, ಚಾರ್ಜರ್ ಕೇಬಲ್, ಸ್ಮಾರ್ಟ್ ವಾಚ್, ಪವರ್‌ಬ್ಯಾಂಕ್, ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಗುಗಳು…. ಇತ್ಯಾದಿಗಳನ್ನು ಶ್ರೀರಾಮ ಮಂದಿರದೊಳಗೆ ಬಿಡುವುದಿಲ್ಲ. ಹಾಗಾಗಿ ಇವ್ಯಾವುದೂ ಜೊತೆಗೆ ಕೊಂಡೊಯ್ಯಬೇಡಿ. ಅಲ್ಲಿ ಲಾಕರ್‌ಗಳ ಸೌಲಭ್ಯವಿದ್ದರೂ ಇದಕ್ಕಾಗಿಯೇ ಗಂಟೆಗಟ್ಟಲೆ ಕಾಯಬೇಕಿಲ್ಲಿ. ಪ್ರಸಾದಗಳು ನಮ್ಮಲ್ಲೆಲ್ಲಾ ಸಿಗುವಂತೆ ದೇವಸ್ಥಾನದ ಒಳಗೆಲ್ಲಾ ಕೌಂಟರ್‌ಗಳಲ್ಲಿ ಸಿಗೋದಿಲ್ಲ. ಹೊರಗಡೆಯಿರೋ ಅಂಗಡಿಗಳಲ್ಲಿ ಲಾಡು ಇತ್ಯಾದಿ ಖರೀದಿಸಿ ಕೊಂಡೊಯ್ದಲ್ಲಿ ಅದನ್ನು ದೇವರಿಗೆ ಸಮರ್ಪಿಸಿ ನಿಮಗೇ ವಾಪಸ್ ಕೊಡುತ್ತಾರೆ. ಹೀಗೆ ಖರೀದಿಸುವಾಗ ಪಾದರಕ್ಷೆಗಳನ್ನೆಲ್ಲಾ ಆ ಅಂಗಡಿಗಳಲ್ಲೇ ಬಿಟ್ಟು, ಬರಿಗಾಲಲ್ಲೇ ಅಷ್ಟೂ ದರ್ಶನ ಮುಗಿಸಿ ಬಂದು ಧರಿಸೋದು ಉತ್ತಮ. ದಶರಥಮಹಲ್ ಹಾಗೂ ಕನಕಭವನ ಮಧ್ಯಾಹ್ನ 12ರಿಂದ 4pm ವರೆಗೂ ಮುಚ್ಚಿರುತ್ತವೆ. ಸರಯೂ ಘಾಟಿನಲ್ಲಿ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಸರಯೂ ಆರತಿ, ಇದು ಮುಗಿಯುತ್ತಿದ್ದಂತೆಯೇ ಎದುರಲ್ಲಿರೋ ರಾಮ್ ಕೀ ಪೈಡಿಯಲ್ಲಿ ಕಾರ್ಯಕ್ರಮಗಳಿರುತ್ತವೆ. ಹನುಮಾನ್ ಗಢಿ/ಶ್ರೀರಾಮ ಮಂದಿರದಿಂದ ಸರಯೂ ಘಾಟಿಗೆ ತೆರಳಲು ಶೇರಿಂಗ್ ಆಟೋಗಳು ಲಭ್ಯವಿದೆ.

Advertisement

ವಸತಿ ವ್ಯವಸ್ಥೆ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಿಂದ ಕೂಗಳತೆ ದೂರದಲ್ಲೇ, ಪೇಜಾವರ ಮಠದ ಮಾಧವಾಶ್ರಮ, ಬಿರ್ಲಾ ಧರ್ಮಶಾಲಾ, ರಾಮ್ ಸಿಂಧೂ ಧರ್ಮಶಾಲಾ, ಜಾನಕಿಮಹಲ್ ಧರ್ಮಶಾಲಾ ಸೇರಿದಂತೆ ನೂರಕ್ಕೂ ಹೆಚ್ಚು ಧರ್ಮಶಾಲೆಗಳಿದ್ದು ಉಚಿತ ಅಥವಾ ಅತೀ ಕಡಿಮೆ ಬೆಲೆಯಲ್ಲಿ ಇಲ್ಲೆಲ್ಲಾ ಉಳಿದುಕೊಳ್ಳೋ ವ್ಯವಸ್ಥೆಯಿದೆ. ಜೊತೆಗೇ ಇಲ್ಲೆಲ್ಲಾ AC / Non Ac ರೂಮುಗಳೂ ಲಭ್ಯವಿದ್ದು, Yatradham.orgನಲ್ಲಿ ಆನ್ ಲೈನ್ ಬುಕಿಂಗ್ ಕೂಡಾ ಸಾಧ್ಯವಿದೆ.. ಒಂದಿಷ್ಟು ಉತ್ತಮ ದರ್ಜೆಯ ಹೋಟೆಲ್‌ಗಳ ನಿರೀಕ್ಷೆಯಿದ್ದಲ್ಲಿ ಆನ್‌ಲೈನ್‌ನಲ್ಲಿ ಮುಂಗಡ ಬುಕಿಂಗ್ ಮಾಡದೆ ಹೋಗಬೇಡಿ. ಇದಲ್ಲದೆ ಈಗ ಹೊಸದಾಗಿ ನಗರದ ಹೊರವಲಯಗಳಲ್ಲಿ ಟೆಂಟ್ ಸಿಟಿಗಳೂ ನಿರ್ಮಾಣವಾಗಿದ್ದು ಇಲ್ಲಿಯೂ ಉಳಿಯಬಹುದಾಗಿದೆ….

ಬರಹ :
ಸುಧೀರ್ ಸಾಗರ್.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror