ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಹರಡಿದ ಕಾಡ್ಗಿಚ್ಚು‌ | ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ

March 5, 2023
10:30 PM

ಬಿಸಿಲಿನ ತಾಪಕ್ಕೆ ಗುಡ್ಡ, ಬೆಟ್ಟ, ಕಾಡು, ಬಯಲು ಎಲ್ಲವು ಒಣಗಿ ನಿಂತಿದೆ.  ಕೊಂಚ ಎಚ್ಚರ ತಪ್ಪಿದರೂ ಬೆಂಕಿ ತಗುಲಿದರೆ ಇಡೀ ಪ್ರದೇಶವೇ ಸುಟ್ಟು ಭಸ್ಮವಾಗುತ್ತದೆ. ಈಗಾಗಲೇ ಹಲವು ಕಡೆ ಬೆಂಕಿ ಅವಘಡ ನಡೆದಿದೆ.  ಇದೀಗ ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶವೂ ಭಾನುವಾರ ಹೊತ್ತಿ ಉರಿಯಲಾರಂಭಿಸಿದೆ. ಸಂಜೆಯ ವೇಳೆಗೆ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಆಲೇಖಾನ್ ಹೊರಟ್ಟಿ ಗುಡ್ಡಕ್ಕೆ ಯಾರೊ ಅನಾಮಿಕರು ಹಾಕಿದ ಬೆಂಕಿಯಿಂದ  ಅರಣ್ಯ ಉರಿಯುತ್ತಿದೆ ಎಂದು ಹೇಳಲಾಗಿದೆ. 

ಈ ಗುಡ್ಡ ಮುಂದಕ್ಕೆ ಚಾರ್ಮಾಡಿ ಘಾಟಿಯನ್ನು ಹೊಂದಿಕೊಂಡಿದೆ. ಎತ್ತರ ಪ್ರದೇಶದ ಗುಡ್ಡದಲ್ಲಿ ವಿಪರೀತ ಬೆಂಕಿ ಹೊತ್ತಿ ಉರಿಯುತ್ತಿದೆ. ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಅಪಾರ ಪ್ರಮಾಣದ ಅರಣ್ಯ  ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗುತ್ತಿದೆ. ಗುಡ್ಡದಲ್ಲಿದ್ದ ಅಪಾರ ಸಂಖ್ಯೆಯ ಪ್ರಾಣಿ-ಪಕ್ಷಿಗಳು ಬೆಂಕಿಗೆ ಆಹುತಿಯಾಗುತ್ತಿವೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ತಂಡ ದೌಡಾಯಿಸಿ, ಬೆಂಕಿ ನಂದಿಸಲು ಹರಸಹಾಸ ಪಡುತ್ತಿದ್ದಾರೆ. ಅಧಿಕಾರಿಗಳಿಗೆ ಸ್ಥಳೀಯರು ಅಗ್ನಿ ದಮನಕ್ಕೆ  ಸಾಥ್ ನೀಡುತ್ತಿದ್ದಾರೆ. ಎತ್ತರ ಪ್ರದೇಶವಾದ್ದರಿಂದ ಅಗ್ನಿ ಶಾಮಕ ವಾಹನ ಹೋಗಲು ಕಷ್ಟ ಸಾಧ್ಯವಾಗಿದೆ. ಅಗಾಧವಾದ ಮರ ಗಿಡಗಳು ಗುಡ್ಡದಲ್ಲಿ ಇರುವುದರಿಂದ ಬೆಂಕಿ‌ ನಂದಿಸುವುದು ಅಷ್ಟು ಸುಲಭವಾದ ಕೆಲಸ ಅಲ್ಲ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಧರ್ಮಸ್ಥಳದಲ್ಲಿ ಶೀಘ್ರದಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ…!
June 21, 2026
12:20 PM
by: ದ ರೂರಲ್ ಮಿರರ್.ಕಾಂ
ಅಡಿಕೆ-ಕಾಳುಮೆಣಸು ಬೆಳೆವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ – ದಕ್ಷಿಣ ಕನ್ನಡ ರೈತರಿಗೆ ಮಹತ್ವದ ಮಾಹಿತಿ
June 20, 2026
11:17 PM
by: ದ ರೂರಲ್ ಮಿರರ್.ಕಾಂ
ಅಕ್ರಮ ಆಮದಿನ ಕರಾಳ ನೆರಳಲ್ಲಿ ಅಡಿಕೆ ಮಾರುಕಟ್ಟೆ – ಮಹಾರಾಷ್ಟ್ರ ಘಟನೆ ಬಿಚ್ಚಿಟ್ಟ ಕಹಿ ಸತ್ಯಗಳೇನು..?
June 20, 2026
10:30 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 20-06-2026 | ಕರ್ನಾಟಕದಲ್ಲಿ ದುರ್ಬಲ ಮುಂಗಾರು ಮುಂದುವರಿಕೆ – ಜೂನ್ 28 ರಿಂದ ಮಳೆ ಚೇತರಿಕೆ ಸಾಧ್ಯತೆ
June 20, 2026
10:04 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror