ಅಂತರಂಗ

ಸಾರ್ವಜನಿಕ ಬದುಕಿನಲ್ಲಿ ನಿರಾಸೆಯ ಸ್ಫೋಟ…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸಾರ್ವಜನಿಕ‌ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು ಅಥವಾ ತೊಡಗಿಸಿ ಕೊಂಡವರನ್ನು ಖಾಸಾಗಿಯಾಗಿ ಮಾತನಾಡಿಸಿ ಕೇಳಿ ನೋಡಿ.ಯಾವತ್ತಾದರೂ frustrationಗೆ ಒಳಗಾದ ಘಳಿಗೆಗಳು ಇವೆಯೇ ಅಂತ.ಪ್ರತಿಯೊಬ್ಬರೂ ತಂತಮ್ಮ frustrationಗಳನ್ನು ಬಿಚ್ವಿಡ್ತಾರೆ ನೋಡಿ. ಯಾರು ಪ್ರಾಮಾಣಿಕರಿದ್ದಾರೋ, ಯಾರೋ ಶುದ್ಧ ಹಸ್ತರಿದ್ದಾರೋ ಅವರುಗಳ frustration ಘಟನೆಗಳು ಹೆಚ್ಚು ಇರ್ತವೆ ,ಇದಕ್ಕೆ ಸಂದೇಹವೇ ಬೇಡ.……..ಮುಂದೆ ಓದಿ…..

Advertisement
Advertisement

ಸಾರ್ವಜನಿಕ ಬದುಕು ಅಂದರೆ ಹತ್ತಾರು ಜನರೊಡನೆ ಕೂಡಿ ಕೆಲಸ ಮಾಡಬೇಕು.ಈ ಹತ್ತಾರು ಜನ ಒಂದೇ ಮನೋಭಾವದವರಾಗಿರುವುದಿಲ್ಲ.ಇದರಲ್ಲಿ ಸ್ವಹಿತಾಸಕ್ತರು,ಮೋಸಗಾರರು,ಲಾಭಬಡುಕರುಗಳೂ ಇದ್ದೇ ಇರ್ತಾರೆ.

ಆ ಕಾರಣದಿಂದಾಗಿಯೇ ಅಲ್ಲವೇ ಮೋದಿಯವರಿಗೆ 2014ರ ಬಳಿಕ ‘ ನ‌ ಖಾನೇ ದೂಂಗಾ’ ಅಂತ ಹೇಳುವ ಧೈರ್ಯ ಬರದೇ ಇದ್ದದ್ದು. ಸಾರ್ವಜನಿಕ‌ ಬದುಕಿನಲ್ಲಿ ಯೋಜನೆಯೊಂದನ್ನು ಹಮ್ಮಿಕೊಂಡು ಪ್ರಾಮಾಣಿಕವಾಗಿ ಅನುಷ್ಟಾನಕ್ಕೆ ಇಳಿದಾಗ ಸಹಾಯಹಸ್ತಗಳ ಜೊತೆಗೆ ಅಡೆತಡೆಗಳೂ ಎದುರಾಗುತ್ತವೆ.ಅಡೆತಡೆಗಳ ನಿವಾರಣೆಗಳೇ frustrationಗೆ ಕಾರಣೀಭೂತಗಳಾಗುವಂತಹವು.ಅದರಲ್ಲೂ ತಮ್ಮವರು ಎಂದುಕೊಂಡವರಿಂದಲೇ ಅಡ್ಡಿ ಎದುರಾದರೆ ಅಥವಾ ಸಹಾಯ ನಿರಾಕರಿಸಲ್ಪಟ್ಟರೆ ಆಗ ಈ frustration ನಿಯಂತ್ರಣದ ಪರಿಧಿಯಿಂದ ಹೊರಬರುತ್ತದೆ,ಅದೆಲ್ಲೋ ಆಸ್ಪೋಟ ಗೊಳ್ಳುತ್ತದೆ.

ಮಧೂರಿನಲ್ಲಾದ್ದೂ ಇದೇ ಇರಬಹುದು ಎಂಬುದು ನನ್ನ ಊಹೆ. ಕೇಂದ್ರ ಸರಕಾರದಿಂದ ಹಣ ಬಿಡುಗಡೆ ಆಯ್ತು ಅಂದಾಗ ಒಂದಷ್ಟು ಭಾರ ಕಳಚಿದ ಅನುಭಾವ. ಅದನ್ನು ಬಿಡುಗಡೆ ಮಾಡಿಸುವಲ್ಲಿ ರಾಜ್ಯ ಸರಕಾರದ ನಿರಾಸಕ್ತಿಯನ್ನು ಅರ್ಥೈಸಿಕೊಳ್ಳ ಬಹುದು. ಯಾಕೆಂದರೆ ಅದು ದೇವರನ್ನು ನಂಬದ , ನಾಸ್ತಿಕ ಪಕ್ಷದ ನೇತೃತ್ವದ ಸರಕಾರ. ಸರಕಾರದ ಹಣ ಬಿಡುಗಡೆ ಆಗಬೇಕು ಎಂದರೆ,ಎಲ್ಲರಿಗೂ ಗೊತ್ತಿರುವಂತಹದ್ದೇ, ಮಾನದಂಡಗಳು ಪೂರೈಕೆಯಾಗ ಬೇಕು ಮತ್ತು ಆಡಳಿತ ಯಂತ್ರದ ಚಕ್ರ ಚಲಿಸುವಂತೆ ಮಾಡಿಸುವ ಸಾಮರ್ಥ್ಯವೂ ಬೇಕು.ಇಲ್ಲಿ ರಾಜಕಾರಣಿಗಳ ಅಥವಾ ಮಧ್ಯವರ್ತಿಗಳ ಸಹಾಯ ಹಸ್ತ ಇಲ್ಲದೇ ಹಣ ಬಿಡುಗಡೆ ಮರೀಚಿಕೆಯಾದೀತು.

ಹೇಳಬಹುದು ಪದಗಳ ಬಳಕೆಯಲ್ಲಿ ಎಚ್ಚರ ಬೇಕಿತ್ತು ಅಂತ.ಆದರೆ ನೋವು ಸ್ಫೋಟದ ಹಂತದಲ್ಲಿ ಎಚ್ಚರ ವಹಿಸುವ ಸಾಮರ್ಥ್ಯ ಇರುವುದಿಲ್ಲ.ಆಗ ಎಚ್ಚರ ಬೇಕಾದ್ದು ಕೇಳುಗರಿಗೆ. frustration ಹಂತ ಮೀರಿದೆ ಅಂತ ಅರ್ಥೈಸಿಕೊಳ್ಳ ಬೇಕಾದ್ದು ಕೇಳುಗರ ಜವಾಬ್ದಾರಿ. ಮಿಕ್ಕೆಲ್ಲ ವಿಷಯಗಳೂ ಸಮರ್ಪಕವಾಗಿದೆ, ಒಂದೆಡೆ ಮಾತ್ರ ಎಡವಟ್ಟಾಗಿದೆ ಎಂಬಂತಹ ಸಂದರ್ಭದಲ್ಲಂತೂ ಇಂತಹ ಎಚ್ಚರದ ಅಗತ್ಯ ಕೇಳುಗರಿಗೆ ಹೆಚ್ಚು.

Advertisement

ಸಾರ್ವಜನಿಕ ಬದುಕಿನ ಅದರಲ್ಲೂ ರಾಜಕೀಯ ನಂಟು ಬಂದರೆ ಇನ್ನೊಂದೇ ಆಟ ಇಂತಹ ಸಂದರ್ಭ ನಡೆಯುತ್ತದೆ.ಎದುರಾಳಿ ತಂಡ ತನ್ನ ಸರ್ವ ಶಕ್ತಿಯನ್ನೂ ಬಳಸಿ ಈತನನ್ನು ಮಣಿಸಲು ಯತ್ನಿಸುತ್ತದೆ. ಅದರಲ್ಲೂ ಒಂದು ರಾಜಕೀಯ ಪಕ್ಷ ಹಲವು ಬಣಗಳಾಗಿ ವಿಭಜಿತ ಗೊಂಡಿದ್ದಾಗಲಂತೂ ಇಂತಹ ಹಣಿಯುವಿಕೆಯ ಯತ್ನ ತೀವ್ರಗತಿಯನ್ನು ಪಡೆಯುತ್ತದೆ. ಆತ ಒಂಟಿಯಾಗಬೇಕು ಎಂದೇ ಭಾವಿಸುತ್ತದೆ ಹಾಗೂ ಒಳಗೊಳಗೇ ಮುಸಿಮುಸಿ ನಗುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

Published by
ರಮೇಶ್‌ ದೇಲಂಪಾಡಿ

Recent Posts

ಜೂನ್ 15 ರಂದು ಮಿಥುನ ರಾಶಿಗೆ ಸೂರ್ಯ | 12 ರಾಶಿಗಳ ಫಲಾಫಲ ಹೀಗಿದೆ….

ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490

6 hours ago

ಬದುಕು ಪುರಾಣ | ಶ್ರೀಮಂತಿಕೆ ‘ಪಾಸ್ ಬುಕ್ಕಿನಲ್ಲಿ’ ಇರುವುದಲ್ಲ!

ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಖರೀದಿ ಮಾಡಲು ಸಾಧ್ಯವಿಲ್ಲ. ನೀತಿ, ನಡತೆ, ಬದ್ಧತೆಗಳು  ಹಣ ಕೊಟ್ಟರೂ…

7 hours ago

ಜೂನ್ 1 : ಯಕ್ಷಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ‘ಈಶಾವಾಸ್ಯ ಪ್ರಶಸ್ತಿ’ | ಗೋವಿಂದ ಗಾಥೆ’ ಕೃತಿ ಅನಾವರಣ

ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…

15 hours ago

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಮೀ ಸಾರ್ವಕಾಲಿಕ ದಾಖಲೆ ಮಳೆ

ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.…

15 hours ago

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿ

ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ…

15 hours ago

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆ | ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ

ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ…

16 hours ago