Advertisement
ವಿಶೇಷ ವರದಿಗಳು

ಗಾಂಧಿ ಜಯಂತಿ : ಗಾಂಧೀಜಿ ಚಿಂತನೆಯ‌ ಪ್ರಸ್ತುತತೆ

Share

ಮಹಾತ್ಮ ಎಂಬ ಶಬ್ದದೊಂದಿಗೆ ಗಾಂಧೀಜಿ ಎಂಬ ಪದ ಸೇರಿದರೇ ಅದಕ್ಕೊಂದು ಪರಿಪೂರ್ಣ ಅರ್ಥ ಬರುವುದು.

Advertisement
Advertisement
Advertisement
Advertisement

ಗಾಂಧೀಜಿಯವರೆಂದರೆ ಸರಳತೆಗೊಂದು ಅನ್ವರ್ಥ.ಸರಳತೆ ಬದುಕಿನ ಸಂಕೀರ್ಣತೆಯನ್ನು  ಸರಳವಾಗಿಸುತ್ತದೆ.  ಗೋಜಲುಗಳನ್ನು  ನಿವಾರಿಸುತ್ತದೆ. ಮಾತು, ಕೃತಿಗಳು  ಸರಳವಾದಾಗ  ಬದುಕು ಸಂತೋಷವಾಗಿರುತ್ತದೆ. ಬೇಡಿಕೆ ಗಳು , ನಿರೀಕ್ಷೆ ಗಳು ಅಗತ್ಯ ಗಳು ಕಡಿಮೆಯಾದಾಗ   ಒತ್ತಡಮುಕ್ತ ಜೀವನ ನಮ್ಮದಾಗುತ್ತದೆ. ಈ ಸರಳ ಸೂತ್ರವನ್ನು ಅನುಸರಿಸಿ ಎಲ್ಲರಿಗೂ ಮಾರ್ಗದರ್ಶನ ಮಾಡಿದರು.    ಎಲ್ಲಾ ಆಡಂಬರಗಳನ್ನು ತ್ಯಜಿಸಿ ಕೇವಲ ಪಂಚೆಯುಟ್ಟು ಸರಳತೆಯ ಪಾಠವನ್ನು ಜಗತ್ತಿಗೇ ಸಾರಿದರು .

Advertisement
ರಾಜ ಸತ್ಯ ಹರಿಶ್ಚಂದ್ರ ರಿಂದ  ಬಹಳಷ್ಟು ಪ್ರಭಾವಿತರಾಗಿದ್ದ  ಗಾಂಧೀಜಿವರು ಬದುಕಿನುದ್ದಕ್ಕೂ ಪರಿಪಾಲಿಸಿಕೊಂಡು ಬಂದರು. ಮಾತ್ರವಲ್ಲ ಸತ್ಯದ ಹಾದಿಯಲ್ಲಿ ಎಷ್ಟೇ ಕಲ್ಲುಮುಳ್ಳುಗಳೆದುರಾದರೂ ಎದೆಗುಂದದೆ  , ಯಾವುದೇ ಒತ್ತಡಕ್ಕೂ ಮಣಿಯದೆ ತನ್ನ ಸತ್ಯದ ಹಾದಿಯಲ್ಲಿ ಮುನ್ನಡೆದರು. ಜಗತ್ತಿಗೇ ಮಾದರಿಯಾದರು.
ಖಾದಿ  ವಸ್ತ್ರ ಕ್ಕೆ ಇಂದು ಇಷ್ಟು ಪ್ರಚಾರ ಪ್ರಾಮುಖ್ಯತೆ ವಿಶ್ವ ಮಟ್ಟದಲ್ಲಿ ದೊರೆಯುತ್ತಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಗಾಂಧೀಜಿಯವರು. ಸ್ವಾತಂತ್ರ್ಯ ಪೂರ್ವದಲ್ಲೇ ಸ್ವಾವಲಂಬಿ ಭಾರತದ ಕಲ್ಪನೆಯನ್ನು ಕಂಡಿದ್ದರು.  ಸ್ವಾವಲಂಬನೆ ಕುಟುಂಬದಿಂದಲೇ ಆರಂಭಗೊಳ್ಳಬೇಕು. ಸ್ವಾವಲಂಬಿ ಗ್ರಾಮ, ಆಮೇಲೆ ಸಮಾಜ, ರಾಜ್ಯ, ಸ್ವಾವಲಂಬಿ ದೇಶ, ಈ ಕಲ್ಪನೆಯೇ ಎಷ್ಟು ಸುಂದರವಾಗಿದೆಯಲ್ಲವೇ. ಪರಿವರ್ತನೆಯಾಗ ಬೇಕದ್ದು ಮನಸುಗಳಲ್ಲಿ.  ಮನಮನದಲ್ಲಿರುವ  ಬೇರೂರಿರುವ ದಾಸ್ಯದ ಭಾವನೆಯನ್ನು ಹೊರಹಾಕಿ ಸ್ವಾವಲಂಬನೆಯ  ಬೀಜ ಬಿತ್ತ ಬೇಕಾಗಿದೆ.  ಖಾದಿ ಉದ್ಯಮ ಸ್ವದೇಶೀ ಮಾರುಕಟ್ಟೆಯ ಬಲವರ್ಧನೆಯಲ್ಲಿ ಪ್ರಮುಖವಾಗಿದೆ. ಇಂದು ಜಗತ್ತಿನಾದ್ಯಂತ ಬಹು ಬೇಡಿಕೆಯ ಉದ್ಯಮವಾಗಿ ಬೆಳೆದು ನಿಂತುದರಲ್ಲಿ ಗಾಂಧೀಜಿಯವರ ಸ್ವಾವಲಂಬಿ ತತ್ವ ಅಡಿಪಾಯವಾಗಿದೆ.
ಸಮಾಜದಲ್ಲಿ ಎಲ್ಲವೂ ಸರಿಯಾಗಿರಬೇಕೆಂದರೆ  ಸಾಮಾಜಿಕ ಸಾಮರಸ್ಯ ಬಹಳ ಮುಖ್ಯ. ಸ್ವಾಸ್ಥ್ಯ ಸಮಾಜಕ್ಕೆ  ಇದು ಬಹಳ ಅಗತ್ಯ. ಜಾತಿ, ಧರ್ಮಗಳ ಅಸಹಿಷ್ಣುತೆ ಸಲ್ಲ.  ಇಲ್ಲಿ ಎಲ್ಲರೂ ಸಮಾನರು. ಇದು ಅಂದಿಗೂ ಇಂದಿಗೂ ಪ್ರಸ್ತುತವೇ.
ಸಸ್ಯಾಹಾರ ಹಾಗೂ ಉಪವಾಸ ಆರೋಗ್ಯದ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು. ಇವು  ಹೋರಾಟದ ಅಸ್ತ್ರ ಗಳು ಕೂಡ.  ಈ ಅಸ್ತ್ರವನ್ನು ಬ್ರಿಟಿಷ್ ರ ವಿರುದ್ಧದ ಹೋರಾಟದಲ್ಲಿ  ಗಾಂಧೀಜಿಯವರು ಸಮರ್ಥವಾಗಿ ಬಳಸಿದರು.
ಅಸ್ಪೃಶ್ಯತೆ, ಅಸಮಾನತೆ  ಸಮಾಜದ ಅಭಿವೃದ್ಧಿ ಯಲ್ಲಿ ದೊಡ್ಡ ತೊಡಕು. ಇದು ಮನಸ್ಸಿನ ಕೊಳಕಿಗೆ ಹಿಡಿದ ಕನ್ನಡಿ. ಎಲ್ಲರೂ ಸಮಾನರು , ಜಾತಿ , ಮತಗಳೆಲ್ಲವೂ ದೇಶದ ಹಿತದ ಮುಂದೆ ಗೌಣವೆಂಬ ದೃಷ್ಟಿ ಕೋನ ಬೆಳೆಯದಿದ್ದರೆ ಅಭಿವೃದ್ಧಿ ಅಸಾಧ್ಯ.
ಸ್ವಾತಂತ್ರ್ಯ ನಂತರ ಗಾಂಧೀಜಿ ಹಾಗೂ ಖಾದಿ ರಾಜಕೀಯ ಓಟು ಬ್ಯಾಂಕ್ ನ ಅಸ್ತ್ರ ವಾಗಿ ದುರುಪಯೋಗವಾಗುತ್ತಿರುವುದು ಮಾತ್ರ ನಂಬಲೇ ಬೇಕಾದ ಸತ್ಯ.!
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು

ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…

6 hours ago

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ  ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…

6 hours ago

ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ

ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…

6 hours ago

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…

7 hours ago

15000 ಶಿಕ್ಷಕರ ಶೀಘ್ರ ನೇಮಕ | ಶಿಕ್ಷಣ ಸಚಿವ ಮಧು ಬಂಗಾರಪ್ಪ

ಹದಿನೈದು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಮತ್ತು…

7 hours ago

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ʼದರ್ಶಿನಿʼ ವಿನೂತನ ಕಾರ್ಯಕ್ರಮಕ್ಕೆ  ಸರ್ಕಾರ ಚಾಲನೆ

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…

1 day ago