ಗೋವಿನ ಸಗಣಿಯಿಂದ ಗಣೇಶ ಮೂರ್ತಿ | ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಆದ್ಯತೆ ನೀಡಿದ ರೈತ|

September 7, 2024
10:59 PM

ಎಲ್ಲೆಡೆ ಗಣೇಶ ಹಬ್ಬ ಜೋರಾಗಿಯೇ ನಡೆಯುತ್ತದೆ. ಸರ್ಕಾರವೂ ಸೇರಿದಂತೆ ಪರಿಸರ ಪ್ರೇಮಿಗಳು ರಾಸಾಯನಿಕ ರಹಿತವಾದ ವಿಗ್ರಹ ತಯಾರಿ ಹಾಗೂ ಗಣೇಶ ಹಬ್ಬವನ್ನು ಆಚರಿಸಿ ಎಂದು ಮನವಿ ಮಾಡುತ್ತಾರೆ. ಈ ನಡುವೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ರೈತ ಮುತ್ತು ಕನ್ನೂರು, ಗೋವಿನ ಸಗಣಿಯಿಂದ ಗೋಮಯ ಗಣೇಶ ಮೂರ್ತಿ ತಯಾರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.…..ಮುಂದೆ ಓದಿ….

Advertisement

ಪ್ರತಿ ವರ್ಷವೂ ಪರಿಸರ ಸ್ನೇಹಿ ಗೋವಿನ ಸಗಣಿಯಿಂದ ಗಣೇಶನ ಮೂರ್ತಿ ತಯಾರಿಸುತ್ತಿದ್ದು, ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ಈ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ.ಗೋಮಯ ಗಣೇಶ ಮೂರ್ತಿಯಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಈ ಮೂರ್ತಿಯನ್ನು ಒಂದು ಬಕೆಟ್ ನಲ್ಲಿ ವಿಸರ್ಜಿಸಿದರೆ ಆದು ಸಂಪೂರ್ಣ ಕರಗಿ ಗೊಬ್ಬರದ ರೂಪದಲ್ಲಿ ಮತ್ತೆ ಗಿಡ – ಸಸಿಗಳಿಗೆ ಒದಗಿ ಬರುತ್ತದೆ. ಹೀಗಾಗಿ ಈಚೆಗೆ ಗಣಪತಿ ವಿಗ್ರಹದ ಬೇಡಿಕೆಯೂ ಬರುತ್ತಿದೆ.…..ಮುಂದೆ ಓದಿ….

ಹಿಂದೆ ನಮ್ಮ ಪೂರ್ವಜರು ಸಗಣಿಯ ಉಂಡೆಯನ್ನು ಇಟ್ಟು ಅದರ ಮೇಲೆ ಗರಿಕೆಯನ್ನು ಇಟ್ಟು ಗಣಪ ಎಂದು ಪೂಜಿಸುತ್ತ ಇದ್ದರು. ಓಡಾಡುವ ಜಾಗದಲ್ಲೂ ಕೂಡ ಈ ರೀತಿ ಇಡುತ್ತಲಿದ್ದರು. ಈ ರೀತಿ ಇಡುವುದರಿಂದ ನೆಗೆಟಿವ್ ಎನರ್ಜಿ ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ ಹಾಗೂ ರೇಡಿಯೇಶನ್ ಪ್ರಭಾವ ಕೂಡ ಬೀರುವುದಿಲ್ಲ ಎನ್ನುವುದು ಅನೇಕರ ನಂಬಿಕೆಯೂ ಹೌದು.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ನಿವೃತ್ತ ಶಿಕ್ಷಕ ಎಸ್. ಬಿ. ಹಂಡಗಲ್, ರಾಸಾಯನಿಕ ಹಾಗೂ ವಿಷಕಾರಿ ಬಣ್ಣಗಳನ್ನು ಬಳಸಿ ತಯಾರಿಸಿದ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುತ್ತಿತ್ತು, ಆದರೆ ರೈತ ಮುತ್ತು ಕನ್ನೂರು ತಯಾರಿಸಿದ ಗೋಮಯ ಗಣಪ ಸಂಪೂರ್ಣ ಪರಿಸರ ಪೂರಕ ಎಂದು ಹೇಳಿದರು.

Environmental enthusiasts, along with government officials, are advocating for the use of chemical-free materials in the preparation and celebration of the Ganesha festival. In a commendable effort, Muthu Kannur, a farmer from Bidarakundi village in Muddebihala taluk of Vijayapur district, has gained recognition for creating a Gomaya Ganesha idol using cow dung.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ
ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group