Advertisement
ನಂದನವನ

ತಲೆಮಾರುಗಳ ಅಂತರ ಮತ್ತು ಸಮನ್ವಯ

Share

ನಮ್ಮ ಸಮಾಜವು ನಿರಂತರವಾಗಿ ಬದಲಾವಣೆ ಹೊಂದುತ್ತಾ ಸಾಗುತ್ತದೆ. ಒಂದು ತಲೆಮಾರು ತನ್ನ ಅನುಭವ, ಮೌಲ್ಯಗಳು, ಜೀವನ ಶೈಲಿ, ಆಲೋಚನೆಗಳೊಂದಿಗೆ ಬೆಳೆದರೆ, ಮುಂದಿನ ತಲೆಮಾರು ಹೊಸ ಜ್ಞಾನ, ತಂತ್ರಜ್ಞಾನ, ಬದುಕಿನ ಕನಸುಗಳೊಂದಿಗೆ ರೂಪುಗೊಳ್ಳುತ್ತದೆ. ಈ ವ್ಯತ್ಯಾಸವೇ “ತಲೆಮಾರುಗಳ ಅಂತರ” (Generation Gap) ಎಂದು ಕರೆಯಲ್ಪಡುತ್ತದೆ. ಆದರೆ ಅಂತರದೊಂದಿಗೆ ಸಂಘರ್ಷವಷ್ಟೇ ಬಂದು ನಿಲ್ಲುವುದಿಲ್ಲ; ಸಮನ್ವಯ ಸಾಧ್ಯವಾದಾಗ ಸಮಾಜವು ಇನ್ನಷ್ಟು ಸಮೃದ್ಧ, ಪ್ರಜ್ಞಾವಂತವಾಗಿರುತ್ತದೆ.

ತಲೆಮಾರುಗಳ ಅಂತರದ ಮೂಲಗಳು :  ತಂತ್ರಜ್ಞಾನ ಬದಲಾವಣೆಗಳು ನಮ್ಮ ಹಿರಿಯರು ಪತ್ರ, ಪುಸ್ತಕ, ಮುಖಾಮುಖಿ ಮಾತುಕತೆಗಳನ್ನು ಅವಲಂಬಿಸಿದ್ದರೆ, ಇಂದಿನ ಯುವ ಪೀಳಿಗೆ ಮೊಬೈಲ್, ಇಂಟರ್ನೆಟ್, ಕೃತಕ ಬುದ್ಧಿಮತ್ತೆ (AI) ನ್ನು ಬಳಸುತ್ತಿದೆ. ಹಿಂದಿನ ತಲೆಮಾರುಗಳಿಗೆ ಸಂಯಮ, ಕಠಿಣ ಶ್ರಮ, ಕುಟುಂಬ ಕೇಂದ್ರಿತ ಜೀವನ ಪ್ರಮುಖವಾಗಿದ್ದರೆ, ಇಂದಿನ ಪೀಳಿಗೆಗೆ ವೈಯಕ್ತಿಕತೆ, ವೇಗ, ವೃತ್ತಿಜೀವನ ಮತ್ತು ಸ್ವಾತಂತ್ರ್ಯ ಮುಖ್ಯವಾಗುತ್ತಿದೆ.
ಹಿಂದಿನ ಕಾಲದಲ್ಲಿ ಸಂಪ್ರದಾಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದರೆ, ಇಂದಿನ ಪೀಳಿಗೆ ತರ್ಕ, ವಿಜ್ಞಾನ ಮತ್ತು ಜಾಗತೀಕರಣವನ್ನು ಅವಲಂಬಿಸುತ್ತದೆ.
ಕೃಷಿ ಮತ್ತುಹೈನುಗಾರಿಕೆಯಿಂದ ಬದುಕು ನಡೆಸಿದ ಪೀಳಿಗೆಗೆ ಹೋಲಿಸಿದರೆ, ಇಂದಿನ ಪೀಳಿಗೆ ಸೇವಾ ಕ್ಷೇತ್ರ, ಉದ್ಯಮಶೀಲತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ.

ಅಂತರದಿಂದ ಹುಟ್ಟುವ ಸಮಸ್ಯೆಗಳು :  ಕುಟುಂಬದೊಳಗಿನ ಅಸಮಂಜಸತೆ – ಮಕ್ಕಳ ಆಸಕ್ತಿ, ಹಿರಿಯರ ನಿರೀಕ್ಷೆಗಳಿಗೆ ಹೊಂದದಾಗ ಭಿನ್ನಾಭಿಪ್ರಾಯ.
ಸಂಪ್ರದಾಯ ಮತ್ತು ಆಧುನಿಕತೆಯ ಸಂಘರ್ಷ – ಹಬ್ಬ, ಆಚರಣೆ, ಧಾರ್ಮಿಕ ನಂಬಿಕೆಗಳಲ್ಲಿ ತಲೆಮಾರುಗಳ ನಡುವೆ ವಿಭಿನ್ನ ದೃಷ್ಟಿಕೋನ. ಜೀವನ ಶೈಲಿಯಲ್ಲಿ ತಾರತಮ್ಯ – ಹಿರಿಯರಿಗೆ ಸರಳತೆ ಇಷ್ಟವಿದ್ದರೆ, ಇಂದಿನ ಪೀಳಿಗೆಗೆ ವೇಗ ಮತ್ತು ಸುಖಾಸಕ್ತಿ ಮುಖ್ಯ. ಹಿರಿಯರು ತಮ್ಮ ಅನುಭವದ ಆಧಾರದಲ್ಲಿ ನಿಯಂತ್ರಣ ಬಯಸಿದರೆ, ಯುವ ಪೀಳಿಗೆ ಸ್ವಾತಂತ್ರ್ಯ ಬಯಸುತ್ತದೆ.

ಸಮನ್ವಯದ ಮಾರ್ಗಗಳು : 

  • ಪರಸ್ಪರ ಸಂವಹನ – ಹಿರಿಯರು ತಮ್ಮ ಅನುಭವ ಹಂಚಿಕೊಳ್ಳಬೇಕು, ಯುವಕರು ತಮ್ಮ ಆಲೋಚನೆಗಳನ್ನು ತೆರೆದ ಮನಸ್ಸಿನಿಂದ ಹೇಳಿಕೊಳ್ಳಬೇಕು.
  • ಪರಸ್ಪರ ಗೌರವ – ಹಿರಿಯರ ಅನುಭವಕ್ಕೆ, ಯುವಕರ  ಹೊಸ ಚಿಂತನೆಗೆ ಎರಡಕ್ಕೂ ಗೌರವ ನೀಡಬೇಕು.
  • ಸಮಯೋಚಿತ ಹೊಂದಾಣಿಕೆ – ಸಂಪ್ರದಾಯವನ್ನು ಕಾಪಾಡಿಕೊಳ್ಳುತ್ತಾ, ಆಧುನಿಕತೆಯ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳುವುದು.
  • ಸಹಾನುಭೂತಿ ಮತ್ತು ಸಹನೆ – ತಲೆಮಾರುಗಳ ವ್ಯತ್ಯಾಸವನ್ನು ವೈಯಕ್ತಿಕ ದೋಷವಾಗಿ ನೋಡುವುದರ ಬದಲು, ಸ್ವಾಭಾವಿಕ ಬೆಳವಣಿಗೆಯಂತೆ ಸ್ವೀಕರಿಸಬೇಕು.
  • ಮೌಲ್ಯ ಶಿಕ್ಷಣ – ಹಿರಿಯರು ಮಕ್ಕಳಿಗೆ ನೈತಿಕತೆ, ಸತ್ಯ, ಶ್ರಮದ ಮಹತ್ವವನ್ನು ತಿಳಿಸಬೇಕು; ಯುವಕರು ಹಿರಿಯರ ಮಾರ್ಗದರ್ಶನವನ್ನು ಬುದ್ಧಿವಂತಿಕೆಯಿಂದ ಬಳಸಬೇಕು.
  • ಶಾಸ್ತ್ರೀಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು .“ಪಿತೃವಾಕ್ಯಂ ಪ್ರಮಾನಂ ಹಿ” ಎಂದರೆ ಹಿರಿಯರ ಅನುಭವ ಮತ್ತು ಮಾತುಗಳನ್ನುಮಾರ್ಗದರ್ಶಕವಾಗಿ ಪರಿಗಣಿಸಬೇಕು.  “चरैवेति चरैवेति” – “ಚರೈವೇತಿ ಚರೈವೇತಿ” ಎಂದು ಉಪನಿಷತ್ತು ಹೇಳುವಂತೆ, ಜೀವನವು ನಿರಂತರ ಚಲನೆಯಾಗಿದೆ; ಬದಲಾವಣೆಯನ್ನೂ ಅಳವಡಿಸಿಕೊಳ್ಳಬೇಕು.

एवं परम्पराप्राप्तमिमं राजर्षयो विदुः ।
स कालेनेह महता योगो नष्टः परन्तप ॥ (ಭ.ಗೀ. 4.2)

“ಎವಂ ಪರಂಪರಾ ಪ್ರಾಪ್ತಮಿಮಂ ರಾಜರ್ಷಯೋ ವಿದುಃ” ಎಂಬ ಭಗವದ್ಗೀತೆಯ ಶ್ಲೋಕದಂತೆ ಜ್ಞಾನವು ಪರಂಪರೆಯಿಂದ ಸಾಗಬೇಕು, ಆದರೆ ಅದರ ಅರ್ಥ ಹೊಸ ತಲೆಮಾರುಗಳು ಅಳವಡಿಸಿಕೊಂಡಾಗ ಮಾತ್ರ ಬದುಕುಂಟು.  ತಲೆಮಾರುಗಳ ಅಂತರವು ಸಂಘರ್ಷಕ್ಕೆ ಕಾರಣವಲ್ಲ, ಬದಲಾಗಿ ಹೊಸ ಚಿಂತನೆ ಮತ್ತು ಹಳೆಯ ಅನುಭವಗಳ ಸಮನ್ವಯಕ್ಕೆ ಅವಕಾಶ. ಹಿರಿಯರು ಬೇರುಗಳಂತಿರಬೇಕು, ಯುವಕರು ಹೊಸ ಕೊಂಬೆಗಳಂತಿರಬೇಕು. “ಹಳೆ ಬೇರು ಹೊಸಚಿಗುರು ಕೂಡಿದರೆ ಮರ ಸೊಗಸು ” ಎಂಬಂತೆ ಬೇರು ಮತ್ತು ಕೊಂಬೆ ಒಟ್ಟಾಗಿ ಇದ್ದಾಗ ಮಾತ್ರ ವೃಕ್ಷವು ಹಸಿರಾಗುತ್ತದೆ.

ತಲೆಮಾರುಗಳ ಅಂತರವನ್ನು ತಡೆಹಿಡಿಯುವುದು ಅಸಾಧ್ಯ; ಆದರೆ ಅದನ್ನು ಸಮನ್ವಯದ ಮೂಲಕ ಸೃಜನಶೀಲತೆಯಾಗಿ ರೂಪಿಸುವುದು ಸಾಧ್ಯ. ಹಿರಿಯರು ಅನುಭವದ ದೀಪವನ್ನು ಹಿಡಿದವರು; ಯುವಕರು ಕನಸು ಮತ್ತು ಉತ್ಸಾಹದ ದಾರಿ ಹಿಡಿದವರು. ಈ ಎರಡೂ ಒಂದಾಗಿದಾಗ ಸಮಾಜವು ಪ್ರಗತಿಪಥದಲ್ಲಿ ಬೆಳೆಯುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

18 hours ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

20 hours ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

20 hours ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

1 day ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

1 day ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

2 days ago