Advertisement
ಸುದ್ದಿಗಳು

ಮಕಾಡೆ ಮಲಗಿದ ಜರ್ಮನಿ; ಬಲಿಷ್ಠ ದೇಶಕ್ಕೆ ಬಂತು ಹೀನಾಯ ಸ್ಥಿತಿ : ಇದು ಭಾರತಕ್ಕೆ ತರಲಿದೆಯಾ ಆತಂಕ?

Share
ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಥಿಕ ಹಿನ್ನಡೆ (Economic Recession) ಬಗ್ಗೆ ಸುದ್ದಿಗಳನ್ನು ಸಾಕಷ್ಟು ಓದಿದ್ದೇವೆ. ಹೆಚ್ಚಾಗಿ ಅಮೆರಿಕ ಮತ್ತು ಬ್ರಿಟನ್​ನ ಆರ್ಥಿಕ ಸಂಕಷ್ಟದ ಬಗ್ಗೆ ವರದಿಗಳು ಬಹಳಷ್ಟು ಬಂದಿವೆ. ಇದೀಗ ಜರ್ಮನಿ ದೇಶ ಹೆಚ್ಚು ಸದ್ದಿಲ್ಲದೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. 2022ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಜರ್ಮನಿಯ ಆರ್ಥಿಕತೆ ಶೇ. 0.5ರಷ್ಟು ಕುಸಿತ ಕಂಡಿತ್ತು. ಅಂದರೆ, ಮೈನಸ್ 0.5ಗೆ ಇಳಿದಿತ್ತು. ಇದೀಗ 2023ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ. 0.3ರಷ್ಟು ಜಿಡಿಪಿ ಕುಸಿತವಾಗಿದೆ. ಅಂದರೆ ಮೈನಸ್ 0.3 ಆಗಿದೆ. ಜರ್ಮನಿ ಸರ್ಕಾರದ ಸಾಂಖ್ಯಿಕ ಕಚೇರಿಯಿಂದ ಈ ಮಾಹಿತಿಯನ್ನು ಮೇ 25ರಂದು ಬಿಡುಗಡೆ ಮಾಡಲಾಗಿದೆ. ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಮೈನಸ್​ಗೆ ಹೋದರೆ ಅದು ಆರ್ಥಿಕ ಹಿಂಜರಿತದ ಸಂಕೇತವಾಗಿದೆ. 2020ರಲ್ಲಿ ಕೋವಿಡ್ ನಂತರ, 2 ವರ್ಷದ ಅಂತರದಲ್ಲಿ ಜರ್ಮನಿ ಎರಡು ಬಾರಿ ರಿಸಿಶನ್​ಗೆ ಸಿಲುಕಿದಂತಾಗಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮಗಳು ಯೂರೋಪಿಯನ್ ದೇಶಗಳ ಬುಡ ಅಲುಗಾಡಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಅತಿಹೆಚ್ಚು ಬಾಧಿತವಾಗಿರುವುದು ಬ್ರಿಟನ್ ಮತ್ತು ಜರ್ಮನಿ ಮಾತ್ರವೇ. ಬೇರೆ ಯೂರೋಪಿಯನ್ ದೇಶಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುವುದರಿಂದ ಪಾರಾಗಬಹುದು ಎಂದು ತಜ್ಞರು ಹೇಳುತ್ತಾರೆ. ರಿಷಿ ಸುನಕ್ ಪ್ರಧಾನಿಯಾದ ಬಳಿಕ ಬ್ರಿಟನ್ ದೇಶದ ಆರ್ಥಿಕತೆಯೂ ಪ್ರಪಾತಕ್ಕೆ ಬೀಳುವುದರಿಂದ ಬಚಾವ್ ಆಗಿದೆ. ಜರ್ಮನಿ ವಿಚಾರಕ್ಕೆ ಬಂದರೆ, ರಷ್ಯಾ ಉಕ್ರೇನ್ ಯುದ್ಧದಿಂದ ಮುರಿದಿದ್ದ ಸರಬರಾಜು ಸರಪಳಿ ವ್ಯವಸ್ಥೆ ಮತ್ತೆ ಕ್ರೋಢೀಕರಣಗೊಂಡರೂ ಆರ್ಥಿಕತೆಯ ಕುಸಿತವನ್ನು ತಡೆಯಲು ಸಾಧ್ಯವಾಗಿಲ್ಲ. ಹಣದುಬ್ಬರವೇ ಜರ್ಮನಿ ಪಾಲಿಗೆ ಪ್ರಮುಖ ವಿಲನ್ ಆಗಿರುವುದು.

ಜರ್ಮನಿ ಆರ್ಥಿಕ ಹಿಂಜರಿತ ಕಾಣಲು ಪ್ರಮುಖ ಕಾರಣಗಳೇನು?
  • ಹಣದುಬ್ಬರ: ಅಗತ್ಯ ವಸ್ತುಗಳ ಸತತ ಬೆಲೆ ಏರಿಕೆ.
  • ವೆಚ್ಚ ಕಡಿತ: ಜನಸಾಮಾನ್ಯರು ವೆಚ್ಚ ಪ್ರಮಾಣ ತೀರಾ ಕಡಿಮೆ ಮಾಡಿದ್ದು.
  • ಸರ್ಕಾರದಿಂದಲೂ ವೆಚ್ಚ ಕಡಿತ
  • ರಷ್ಯಾ ಉಕ್ರೇನ್ ಯುದ್ಧ ಪರಿಣಾಮ ಪೆಟ್ರೋಲ್, ಗ್ಯಾಸ್ ಸರಬರಾಜಿಗೆ ಅಡೆತಡೆ; ಪೆಟ್ರೋಲ್ ಬೆಲೆ ಏರಿಕೆ

ಜರ್ಮನಿಗೆ ಆರ್ಥಿಕವಾಗಿ ಚೇತರಿಸಿಕೊಳ್ಳುವ ಅವಕಾಶ ಇದೆಯಾ?

ಜರ್ಮನಿ ದೇಶದಲ್ಲಿ ಎಲ್ಲವೂ ತೀರಾ ಹಾಳಾಗಿಲ್ಲ. ಸತತ ಎರಡು ಕ್ವಾರ್ಟರ್ ಮಾತ್ರ ಜಿಡಿಪಿ ಬೆಳವಣಿಗೆ ಮೈನಸ್​ನಲ್ಲಿದೆ. ಆದರೆ, ಹೆಚ್ಚು ಶೀತವಿಲ್ಲದ ಚಳಿಗಾಲ, ಕೈಗಾರಿಕೆಗಳ ಚಟುವಟಿಕೆ ಗರಿಗೆದರಿರುವುದು, ಹೂಡಿಕೆ ಹೆಚ್ಚಾಗಿರುವುದು, ರಫ್ತು ಹೆಚ್ಚಾಗಿರುವುದು, ಆಮದು ಕಡಿಮೆ ಆಗಿರುವುದು ಇವೆಲ್ಲವೂ ಜರ್ಮನಿಗೆ ಪಾಸಿಟಿವ್ ಸಂಕೇತಗಳಾದರೂ, ಸದ್ಯಕ್ಕೆ ಹಿಂಜರಿತ ತಡೆಯುವಷ್ಟು ಇವು ಪರಿಣಾಮಕಾರಿ ಎನಿಸಿಲ್ಲ. ಈ ಪಾಸಿಟಿವ್ ಸಿಗ್ನಲ್​ಗಳು ಮುಂದಿನ ತಿಂಗಳಲ್ಲೂ ಮುಂದುವರಿದರೆ ಜರ್ಮನಿ ಆರ್ಥಿಕ ಹಿಂಜರಿತದ ಸುಳಿಯಿಂದ ಪಾರಾಗಲು ಸಾಧ್ಯವಾಗಬಹುದು.

ಜರ್ಮನಿಗಾದ ರಿಸಿಶನ್ ತೊಂದರೆ ಭಾರತಕ್ಕೂ ಆಗುತ್ತಾ?

ಜರ್ಮನಿ ಆರ್ಥಿಕ ಹಿಂಜರಿತಕ್ಕೆ ಸಿಲುಕಲು ಪ್ರಮುಖ ಕಾರಣವಾಗಿರುವುದು ಅದರ ಜಿಡಿಪಿ ಬೆಳವಣಿಗೆ ಕುಸಿತ ಹಾಗೂ ಪೆಟ್ರೋಲ್ ಅಭಾವ ಎಂಬೆರಡು ಅಂಶಗಳು. ಭಾರತ ಈ ವಿಚಾರದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಭಾರತಕ್ಕೆ ರಷ್ಯಾದಿಂದ ಅಗ್ಗದ ಬೆಲೆಗೆ ತೈಲಗಳು ಸಿಗುತ್ತಿವೆ. ಇದರಿಂದ ದೇಶದ ಬೊಕ್ಕಸಕ್ಕೆ ಒಳ್ಳೆಯ ಲಾಭವಾಗುತ್ತಿದೆ. ಭಾರತದ ಜಿಡಿಪಿ ಕೂಡ ಬೇರೆ ಉದಯೋನ್ಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ವೇಗದಲ್ಲಿದೆ.

ಇನ್ನು, ಅಮೆರಿಕಕ್ಕೆ ತೊಂದರೆ ಆದರೆ ಭಾರತಕ್ಕೆ ಪರಿಣಾಮಗಳುಂಟು. ಯಾಕೆಂದರೆ ಭಾರತದ ಬಹುತೇಕ ಐಟಿ ಕಂಪನಿಗಳಿಗೆ ಆದಾಯ ಮೂಲವೇ ಅಮೆರಿಕಾ. ಆದರೆ, ಜರ್ಮನಿಯೊಂದಿಗೆ ಭಾರತದ ತೀರಾ ದೊಡ್ಡ ವ್ಯಾವಹಾರಿಕ ಸಂಬಂಧವಿಲ್ಲ. ಭಾರತದಲ್ಲಿ ಹೂಡಿಕೆ ಮಾಡಿರುವ ವಿದೇಶಗಳ ಪೈಕಿ ಜರ್ಮನಿ 9ನೇ ಸ್ಥಾನದಲ್ಲಿದೆ. 2021ರಲ್ಲಿ ಜರ್ಮನಿ ಭಾರತಕ್ಕೆ ರೂ 1 ಲಕ್ಷ ಕೋಟಿಯಷ್ಟು ರಫ್ತು ಮಾಡಿತ್ತು. ಆ ವರ್ಷ ಜರ್ಮನಿಗೆ ಭಾರತದಿಂದ ಹೋದ ರಫ್ತು 72,000 ಕೋಟಿ ರೂ. ಇವೇನೂ ಸಾಧಾರಣ ಮೊತ್ತವಲ್ಲವಾದರೂ ಭಾರತಕ್ಕೆ ಸದ್ಯಕ್ಕೆ ದೊಡ್ಡ ಪರಿಣಾಮವಾಗುವ ಸಾಧ್ಯತೆ ಕಡಿಮೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

8 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

14 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

18 hours ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

1 day ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

1 day ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

1 day ago