ಸೌತೆ ಕೃಷಿಗೆ ಗೋಬರ್ ಸ್ಲರಿ – ಅಧಿಕ ಇಳುವರಿ | ಸೌತೆ ಬೆಳೆದು ಬಂಪರ್‌ ಬೆಳೆ ತೆಗೆಯಬಹುದು….!

June 3, 2024
2:10 PM

ಸೌತೆಗೆ(cucumber) 21ನೇ ದಿನದ ಬಳಿಕ ಏನೂ ಗೊಬ್ಬರ(Manure) ಕೊಡುವುದು ಬೇಕಿಲ್ಲ. ಆಮೇಲೆ ದಂಡೆಗೆ ನೀರು(Water) ಬಿಡುವುದು, ಕೊಯ್ಯುವುದು ಅಷ್ಟೇ ಕೆಲಸ, 50 ಚಿಲ್ಲರೆ ದಿನಗಳಲ್ಲಿ ಸೌತೆಯ ಜೀವನ ಚಕ್ರವೇ ಮುಗಿಯುತ್ತದೆ – ಎಂಬಿತ್ಯಾದಿ ಸಾಂಪ್ರದಾಯಿಕ ಸೌತೆ ಬೆಳೆಗಾರರ(Cucumber cultivators) ಮಾತುಗಳು.

ನಾನು ಈ ಬಾರಿ ಸುಮಾರು 25ನೆಯ ದಿನದ ಬಳಿಕ ಪ್ರತೀ 8 ದಿನಕ್ಕೊಮ್ಮೆ ಗೋಬರ್ ಸ್ಲರಿಯನ್ನು(Manure Slurry) ಸೌತೆಯ ದಂಡೆಗೆ ನೀರು ಬಿಡುವಂತೆ ಬಿಡಲು ಶುರುಮಾಡಿದೆ. ಸುಮಾರು ಒಂದು ಗೋಣಿಯಷ್ಟು ಒಲೆ ಬೂದಿಯನ್ನೂ(Ash) ಮರಳು ಶೋಧಕದಲ್ಲಿ ಸೋಸಿ ಸ್ಲರಿ ಗುಂಡಿಗೆ ಮಿಶ್ರ ಮಾಡಿ ನಂತರ ಸ್ಲರಿ ಬಿಟ್ಟೆ, ಪ್ರತೀ ಬಾರಿ. ಸುಮಾರು 2000 ಲೀಟರ್ ನಷ್ಟು ಸ್ಲರಿ ಒಮ್ಮೆ ಬಿಟ್ಟರೆ ನನ್ನ ಸೌತೆಯ 4 ದೊಡ್ಡ ಸಾಲುಗಳು ಭರ್ತಿ ಆಗುತ್ತಿದ್ದವು.

ಅಚ್ಚರಿಯಾಯ್ತು, ಅಲ್ಲಿ ಸಂಗ್ರಹವಾಗುವ ಕಪ್ಪನೆಯ ಬಗ್ಗಡಕ್ಕೆ ಬಿಳಿಬಣ್ಣದ ಹೊಸ ಸೌತೆಯ ಬೇರುಗಳು ಟಿಸಿಲೊಡೆದೊಡೆದು ಹಬ್ಬಿದವು. ತೇವಾಂಶ ಸಂಗ್ರಹಣ ಶಕ್ತಿ ಹೆಚ್ಚಿತು. ಸೌತೆಯ ಬಳ್ಳಿ ಹಣ್ಣಾಗಲೇ ಇಲ್ಲ. ಮತ್ತೆ ಮತ್ತೆ ಹೊಸ ಗೆಲ್ಲುಗಳು ಮೂಡಿ ರಾಶಿರಾಶಿ ಹೂಗಳು, ಹಣ್ಣುಗಳು ಮೂಡಿದವು. ಒಟ್ಟು 700ಕೇಜಿ ಯಷ್ಟು ಸೌತೆ ಕೊಯ್ದೆವು. ನಾಳೆ (ಜೂನ್ 4) ಗದ್ದೆ ಹೂಟೆ ಇರುವುದರಿಂದ ಸುಮಾರು ಕಳೆದ 15 ದಿನದಿಂದ ಸ್ಲರಿ ಊಡಿಕೆ ನಿಲ್ಲಿಸಿದೆ. ಈಗ ಸ್ವಲ್ಪ ಬಳ್ಳಿ ಹಣ್ಣಾಗಲು ಶುರುವಾಗಿದೆ. ಇರುವ ಮಿಡಿಯನ್ನೆಲ್ಲ (ಇಂದು 70ನೆಯ ದಿನ) ಕೊಯ್ದು ನಾಳೆ ಬಳ್ಳಿಯನ್ನು ಟ್ರಾಕ್ಟರ್ ನಲ್ಲಿ ಹೂಟೆ ಮಾಡಲು ಸಿದ್ಧಗೊಳಿಸಿದೆವು. ಒಂದುವೇಳೆ ಭತ್ತದ ಬೆಳೆಯನ್ನು ಮುಂದೆ ಹಾಕಿದರೆ, ಜೂನ್ ಇಡೀ ಇನ್ನಷ್ಟು ಸೌತೆ ಕೊಯ್ಯಬಹುದು ಎಂದು ನನಗೆ ವಿಶ್ವಾಸವಿದೆ.

ಮುರುಟು ಕಾಯಿಗಳೇ ಇಲ್ಲ! : ಗೋಮೂತ್ರ, ಗೋಮಯಗಳ ಫ್ಲಡಿಂಗ್ ನಿಂದ ಇರಬಹುದು ಎನಿಸುತ್ತದೆ; ಹಣ್ಣಿಗೆ ಕೀಟಬಾಧೆ ಇಲ್ಲವೇ ಇಲ್ಲ. ಮುರುಟುಕಾಯಿಗಳೇ ಇಲ್ಲ. ಇದು ನನಗೆ ಕಂಡ ಇನ್ನೊಂದು ಗುಣ. ಕೊನೆಯ ಕೊಯ್ಲಿನ ಚಿತ್ರ ನೋಡಿ. ಅದರಲ್ಲಿ ಮುರುಟಿ ದ ಕಾಯಿಗಳೇ ಇಲ್ಲ.

ನೀವೂ ಮಾಡಿ : ಮುಂದಿನ ಬೇಸಿಗೆಯಲ್ಲಿ ನೀವೆಲ್ಲ ಹೀಗೆ ಪ್ರಯತ್ನಿಸಿ, ನನಗೆ ನಿಮ್ಮ ಅನುಭವ ಹೇಳಿ. 21 ದಿನದಿಂದ ಪೋಷಣೆ ನಿಲ್ಲಿಸಿದರೆ, ಸೌತೆ ಬಳ್ಳಿಗಳು ಸೊರಗಿ, ಬೇಗ ಫಲಧಾರಣೆ ನಿಲ್ಲಿಸುತ್ತವೆ. ಸ್ಲರಿ ಬಳಕೆಯಿಂದ ಮೂರು ತಿಂಗಳ ವರೆಗೆ ಸೌತೆಬಳ್ಳಿಯಿಂದ ಸೌತೆಕಾಯಿ ಪಡೆಯಬಹುದು ಎಂಬುದು ನನ್ನ ಅಭಿಪ್ರಾಯ. ಮುಂದಿನ ಸೀಸನ್ ನಲ್ಲಿ ಇನ್ನೊಮ್ಮೆ ಪ್ರಯೋಗಿಸಿ ಖಚಿತ ಪಡಿಸಿಕೊಳ್ಳುವೆ.

ಬರಹ :
ವಸಂತ ಕೇಶವ
, ಕೃಷಿಕರು, 90086 66266

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ
August 23, 2026
7:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ
August 23, 2026
3:24 PM
by: ಸಾಯಿಶೇಖರ್ ಕರಿಕಳ
ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ
August 23, 2026
2:16 PM
by: ದ ರೂರಲ್ ಮಿರರ್.ಕಾಂ
ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ
August 23, 2026
12:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror