Advertisement
MIRROR FOCUS

ದೇಶದಾದ್ಯಂತ ಕಾಳುಮೆಣಸಿಗೆ ಬಂಗಾರದ ಬೆಲೆ |

Share

ವರ್ಷವಿಡೀ ತಾವು ಬೆಳೆದ ಬೆಲೆ(Rate) ಕೈಗೆ ಬರಲು ರೈತರು(Farmer) ಇನ್ನಿಲ್ಲದ ಕಷ್ಟ ಪಡುತ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಫಸಲು(Crop) ಕೈಗೆ ಬಂದಾಗ ಅದಕ್ಕೆ ತಕ್ಕ ರೇಟು ಸಿಗುತ್ತದೆ. ಈ ಬಾರಿ ಮೆಣಸಿನ ಕಾಳು ಬೆಳೆಗಾರರಿಗೆ ಅದೃಷ್ಟ ಖುಲಾಯಿಸಿದೆ. ದಿನದಿಂದ ದಿನಕ್ಕೆ ದೇಶಿಯ ಮಾರುಕಟ್ಟೆಯಲ್ಲಿ(Market) ಕರಿ ಮೆಣಸಿನ (Black Pepper) ಬೆಲೆ(Price) ಗಗನಕ್ಕೇರುತ್ತಿದೆ. ಭಾರತದೆಲ್ಲೆಡೆ ಕಾಳುಮೆಣಸಿನ ದರ ಗಗನಕ್ಕೆ ಜಿಗಿದಿದೆ. ಚಿಕ್ಕಮಗಳೂರು(Chikkamagaluru) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಂತೂ ಧಾರಣೆಯು ಕ್ವಿಂಟಾಲ್‌ಗೆ 88,000 ರೂಪಾಯಿ ಆಗಿದ್ದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಲೆನಾಡ ಚಿಕ್ಕಮಗಳೂರು ಭಾಗಕ್ಕೆ ಶಿರಸಿ ಹಾಗೂ ಸುತ್ತಮುತ್ತಲಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಿಘ್ನೇಶ್ ಭಟ್ ಹೊಸ್ತೋಟ ಅವರು ತಮ್ಮ ಅಡಿಕೆ ತೋಟದಲ್ಲಿ ಕಳೆದ 15 ವರ್ಷದಿಂದ ಕಾಳುಮೆಣಸಿನ ಕೃಷಿ ಮಾಡುತ್ತಿದ್ದಾರೆ. ಖ್ಯಾತ ಕೃಷಿ ತಜ್ಞ ವಿಎಂ ಹೆಗಡೆಯವರ ಸಲಹೆಯೊಂದಿಗೆ ಕೃಷಿ ಮಾಡುತ್ತಿರುವ ಇವರು ಬಾರೆಯ ಹೊಸ್ತೋಟದಲ್ಲಿ ತಮ್ಮ‌ ಮನೆ ಬಳಿ ಉಪಬೆಳೆಯಾಗಿ ಕಾಳುಮೆಣಸನ್ನು ಬೆಳೆದಿದ್ದಾರೆ.

ವಿವಿಧ ತಳಿಯ ಕಾಳುಮೆಣಸು
8-10 ವಿಧದ ಕಾಳುಮೆಣಸು ಇವರಲ್ಲಿ ಇವೆ ಅದರಲ್ಲಿ ಪಣಿಯೂರು-1, ಪಣಿಯೂರು-2, ನೀಲಮುಂಡಿ, ಶ್ರೀಕರ, ಶುಭಕರ ಸೇರಿದಂತೆ ಹಲವು ವಿಧದ ಕಾಳುಮೆಣಸು ಇವರಲ್ಲಿವೆ, ಕೇವಲ 1000 ಬಳ್ಳಿಗಳನ್ನು ಹೊಂದಿರುವ ಇವರು ಪ್ರತೀ ವರ್ಷ ಬರೊಬ್ಬರಿ 2.5 ಟನ್ ನಷ್ಟು ಇಳುವರಿಯನ್ನು ಪಡೆಯುತ್ತಿದ್ದಾರೆ. ಜೂನ್ ತಿಂಗಳಲ್ಲಿ ಟ್ರೆಂಚಿಂಗ್ ಮಾಡಿ ಲೈಟೆಕ್ಸ್ ಹಾಕಿ ನಂತರ ಪ್ಲ್ಯಾಸ್ಟಿಕ್ ಹೊದಿಕೆ ಹಾಕಿಡುವ ಕಾರಣ ಭಾರೀ ಮಳೆಯಲ್ಲೂ ಭರ್ಜರಿ ಫಸಲು ದೊರಕುತ್ತಿದೆ. 6 ಲಕ್ಷ ಖರ್ಚಿಗೆ ಸದ್ಯದ ಮಟ್ಟಿಗೆ 15 ರಿಂದ 20 ಲಕ್ಷ ವಹಿವಾಟು ನಡೆಸುವ ನಿರೀಕ್ಷೆಯಲ್ಲಿದ್ದಾರೆ. ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ದೇಶದಲ್ಲಿ ಕಾಳುಮೆಣಸಿನ ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೊಸ ಪೀಳಿಗೆಯ ಆಹಾರ ಖಾದ್ಯಗಳಲ್ಲಿ ಕಾಳುಮೆಣಸು ಪ್ರಮುಖ ಪಾತ್ರ ವಹಿಸಿದೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

3 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

22 hours ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

1 day ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

1 day ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

2 days ago