Advertisement
ಕೃಷಿ

ಪಿಎಂ ಕಿಸಾನ್ ಪಟ್ಟಿಯಿಂದ ಕೆಲ ರೈತರು ಔಟ್ | ಕಾರಣ ಏನು ಗೊತ್ತಾ? | ನಿಮ್ಮ ಆಧಾರ್‌ ಸೀಡಿಂಗ್‌ ಆಗಿದೆಯೇ ?

Share

ಪಿಎಂ ಕಿಸಾನ್ ಪಟ್ಟಿಯಲ್ಲಿ ಅನರ್ಹರಾಗಿದ್ದ ಕೆಲ ರೈತರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ. ಕೈ ಬಿಟ್ಟ ರೈತರನ್ನು ಹೊರತುಪಡಿಸಿ ಉಳಿದೆಲ್ಲಾ ಅರ್ಹ ಫಲಾನುಭವಿಗಳು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ಹಲವು ನಕಲಿ ನಮೂದುಗಳಿರುವುದರಿಂದ ಅಂತವರ ಹೆಸರನ್ನು ಪತ್ತೆ ಹಚ್ಚಿ ತೆಗೆದುಹಾಕಲಾಗಿದೆ. ಫಲಾನುಭವಿಯ ಡೇಟಾದ ಸರಿಯಾದ ಪರಿಶೀಲನೆ ಮತ್ತು ಮೌಲ್ಯಾಂಕನದ ನಂತರ ಸತ್ತವರು ಸೇರಿದಂತೆ ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಹೇಳಿದೆ. ಪ್ರಮುಖ ಯೋಜನೆ ಕಡಿತದ ಬಗ್ಗೆ ರೈತರು ಮತ್ತು ವಿರೋಧ ಪಕ್ಷದ ನಾಯಕರಿಂದ ತೀವ್ರ ವಿರೋಧದ ನಂತರ ಅಚಿವರು ಈ ಹೇಳಿಕೆಯನ್ನು ನೀಡಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಲಭಿಸುತ್ತದೆ. ಕೇಂದ್ರ ಬಜೆಟ್ 2023 ರ ಅಂದಾಜಿನ ಪ್ರಕಾರ, ಪಿಎಂ ಕಿಸಾನ್ ಯೋಜನೆಯ ಹಂಚಿಕೆಯು ರೂ 8,000 ಕೋಟಿಗಳಷ್ಟು ಕಡಿಮೆಯಾಗಿದೆ. ಆದರೆ ಬಜೆಟ್ ಕಡಿತದಿಂದ ಯೋಜನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದರು.
ಯೋಜನೆಯಲ್ಲಿ ಸಾಕಷ್ಟು ಡೇಟಾ ನವೀಕರಣಗಳು ನಡೆಯುತ್ತಿವೆ ಮತ್ತು ಫಲಾನುಭವಿಗಳ ಡಿಪ್ಲಿಕೇಶನ್ ಪರೀಕ್ಷೆಯನ್ನು ಕೃಷಿ ಸಚಿವಾಲಯ ಮಾಡುತ್ತಿದೆ ಎಂದು ಸೀತಾರಾಮನ್ ಪ್ರತಿಪಕ್ಷಗಳಿಗೆ ತಿಳಿಸಿದರು. ಯೋಜನೆಯ ಮೊತ್ತವನ್ನು ಹೆಚ್ಚಿಸುವ ಬಗ್ಗೆ, ಕೃಷಿ ಸಚಿವ ನರೇಂದ್ರ ತೋಮರ್ , ಪಿಎಂ-ಕಿಸಾನ್ ಅಡಿಯಲ್ಲಿ ವರ್ಷಕ್ಕೆ 6,000 ಮೊತ್ತವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.

ಪಿಎಂ ಕಿಸಾನ್‌ ಸಹಿತ ಸರ್ಕಾರದ ಎಲ್ಲಾ ಯೋಜನೆಗಳ ಸಹಾಯಧನವು ಇನ್ನು ಮುಂದ ಆಧಾರ್‌ ಕಾರ್ಡ್‌ ನೋಂದಣಿಯಾದ ಬ್ಯಾಂಕ್‌ಗೆ ಮಾತ್ರಾ ಪಾವತಿಯಾಗುತ್ತದೆ. ಅದಕ್ಕಾಗಿ ಆಧಾರ್‌ ಸೀಡಿಂಗ್‌ ಕಾರ್ಯ ನಡೆಯುತ್ತದೆ. ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಸಂಖ್ಯೆಯು ಲಿಂಕ್‌ ಆಗಿರಬೇಕು, ಕೇವಲ ಲಿಂಕ್‌ ಆಗಿದ್ದರೆ ಸಾಲದು ಸೀಡಿಂಗ್‌ ಆಗಿರಬೇಕು. ಸೀಡಿಂಗ್‌ ಆಗಿರದ ಆಧಾರ್‌ ಕಾರ್ಡ್‌ಗಳಿಗೆ ಸಹಾಯಧನವು ಮುಂದಿನ ದಿನಗಳಲ್ಲಿ ಪಾವತಿಯಾಗುವುದಿಲ್ಲ.ಈಗ ಪಿಎಂ ಕಿಸಾನ್‌ ಯೋಜನೆಯಲ್ಲೂ ಇದೇ ಸಮಸ್ಯೆಯಾಗುತ್ತಿದೆ.

ನಕಲಿ ವಿಳಾಸಗಳು, ಮೃತರ ಖಾತೆಗೆ ಹಣ ಪಾವತಿ ತಡೆಯಲು ಮುಂದಿನ ದಿನಗಳಲ್ಲಿ ಬ್ಯಾಂಕ್‌ ಖಾತೆಗಳ ಬದಲಾಗಿ ಆಧಾರ್‌ ಸಂಖ್ಯೆಗಳಿಗೆ ಹಣ ಪಾವತಿಯಾಗುತ್ತದೆ. ಈ ಸಂದರ್ಭದಲ್ಲಿ ಆಧಾರ್‌ ಸಂಖ್ಯೆಗೆ ಬ್ಯಾಂಕ್‌ ಖಾತೆಗಳು ಸೀಡಿಂಗ್‌ ಆಗಿರಬೇಕಾಗಿರುತ್ತದೆ. ಒಂದು ಆಧಾರ್‌ ಗೆ ಒಂದು ಖಾತೆ ಮಾತ್ರಾ ಸೀಡಿಂಗ್‌ ಆಗಿರುತ್ತದೆ. ಆಧಾರ್‌ ಗೆ ನಿಮ್ಮ ಬ್ಯಾಕ್‌ ಖಾತೆ ಸೀಡಿಂಗ್‌ ಆಗಿದೆಯೇ ಎಂದು ಪರಿಶೀಲನೆ ಮಾಡಲು ಈ  ಲಿಂಕ್‌ ಮೂಲಕ ಗಮನಿಸಬಹುದಾಗಿದೆ. https://resident.uidai.gov.in/bank-mapper   

ಒಂದು ವೇಳೆ ಆಧಾರ್‌ ಸಂಖ್ಯೆ ಜೊತೆ ನಿಮ್ಮ ಬ್ಯಾಂಕ್‌ ಖಾತೆ ಲಿಂಕ್‌ ಆಗದೇ ಇದ್ದರೆ ಅಥವಾ ಸೀಡಿಂಗ್‌ ಆಗದೇ ಇದ್ದರೆ ಬ್ಯಾಂಕ್‌ ನಲ್ಲಿ ಈ ಬಗ್ಗೆ ಪ್ರತ್ಯೇಕವಾಗಿ ತಿಳಿಸಿ ಸೀಡಿಂಗ್‌ ಮಾಡಿಸಿದರೆ ಪಿಎಂ ಕಿಸಾನ್‌ ಯೋಜನೆಯ ಹಣ ಹಾಗೂ ಸರ್ಕಾರದ ಇತರ ಎಲ್ಲಾ ಯೋಜನೆಯ ಹಣವು ಪಾವತಿಯಾಗುತ್ತದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

5 minutes ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

16 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

23 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

2 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

3 days ago