ಕೇಂದ್ರ ಸರ್ಕಾರವು ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಕುರಿತು ಸಾರ್ವಜನಿಕರು ಮತ್ತು ಎಲ್ಲಾ ಹಿತಾಸಕ್ತಿದಾರರಿಂದ ಅಭಿಪ್ರಾಯ ಹಾಗೂ ಸಲಹೆಗಳನ್ನು ಆಹ್ವಾನಿಸಿದೆ. ಈ ಹೊಸ ಮಸೂದೆ ಜಾರಿಗೆ ಬಂದಲ್ಲಿ, ಇನ್ಸೆಕ್ಟಿಸೈಡ್ಸ್ ಕಾಯ್ದೆ–1968 ಹಾಗೂ ಇನ್ಸೆಕ್ಟಿಸೈಡ್ಸ್ ನಿಯಮಗಳು–1971 ರದ್ದುಪಡಿಸಲ್ಪಡಲಿವೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು (MoA&FW) ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ಈ ಹೊಸ ಕರಡು ಮಸೂದೆಯನ್ನು ತಯಾರಿಸಿದೆ.
ರೈತಕೇಂದ್ರಿತ ಮಸೂದೆ : ಈ ಕರಡು ಮಸೂದೆ ರೈತಕೇಂದ್ರಿತ ಕಾನೂನು ಆಗಿದ್ದು, ರೈತರಿಗೆ ಗುಣಮಟ್ಟದ ಕೀಟನಾಶಕಗಳ ಲಭ್ಯತೆ ಖಚಿತಪಡಿಸುವುದರ ಜೊತೆಗೆ Ease of Living ಮತ್ತು Ease of Doing Business ಅನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ತಿಳಿಸಿದೆ.
ಕರಡು ಮಸೂದೆಯ ಪ್ರಮುಖ ಅಂಶಗಳು :
ಈ ಮಸೂದೆ ರೈತರ ಹಿತ ಹಾಗೂ ವ್ಯಾಪಾರ ಸುಲಭತೆ ನಡುವೆ ಸಮತೋಲನ ಸಾಧಿಸುವುದನ್ನು ಗುರಿಯಾಗಿಸಿಕೊಂಡಿದೆ.
ಸಾರ್ವಜನಿಕ ಸಲಹೆ ಸಲ್ಲಿಸಲು ಅವಕಾಶ: ಪೂರ್ವ-ಶಾಸನಾತ್ಮಕ ಸಮಾಲೋಚನೆ ಪ್ರಕ್ರಿಯೆಯ ಭಾಗವಾಗಿ, ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಮತ್ತು ಸಲಹೆ ಸಲ್ಲಿಸುವ ನಿಗದಿತ ನಮೂನೆಯನ್ನು ಕೃಷಿ ಸಚಿವಾಲಯದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಹಾಗೂ ಹಿತಾಸಕ್ತಿದಾರರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು MS Word ಅಥವಾ PDF ರೂಪದಲ್ಲಿ ಇಮೇಲ್ ಮೂಲಕ ಸಲ್ಲಿಸಬಹುದು. ಅಂತಿಮ ದಿನಾಂಕ: ಫೆಬ್ರವರಿ 4, 2026
ರಾಜ್ಯದ ಹಲವೆಡೆ ಇಂದು ಸಂಜೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.…
ಯುಗಾದಿ ಹಬ್ಬವು ಕೇವಲ ಹೊಸ ವರ್ಷದ ಆರಂಭವಲ್ಲ; ಅದು ಕಾಲತತ್ತ್ವ, ಪ್ರಕೃತಿ ಚಕ್ರ…
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ…
ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ 8–10% ಎಳೆ ಅಡಿಕೆ ಉದುರುವುದಾಗಿ ಅಂದಾಜಿಸಲಾಗಿದ್ದು,…
ಚಾಮರಾಜನಗರ ಮತ್ತು ಬೆಳಗಾವಿಯಲ್ಲಿ ಭಾರೀ ಆಲಿಕಲ್ಲು ಮಳೆ ಸುರಿದು ರೈತರು ಆತಂಕಗೊಂಡಿದ್ದಾರೆ. ಬೆಂಗಳೂರಿನ…
ದೇಶದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 520 ಗಿಗಾ ವ್ಯಾಟ್ಗಿಂತ ಹೆಚ್ಚು ಮಟ್ಟಕ್ಕೆ ಹೆಚ್ಚಿಸಲಾಗಿದೆ…