ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಚಿಂತನೆ | 262 ಲಕ್ಷ ಟನ್​ಗಳಷ್ಟು ಗೋಧಿ ಬೆಂಬಲ ಬೆಲೆಗೆ ಖರೀದಿ |

June 2, 2023
12:43 PM

ರೈತ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಅನ್ನದಾತ ಹೈರಾಣಾಗಿದ್ದಾನೆ. ಇರುವ ಸರ್ಕಾರಗಳು ರೈತನ ಕಷ್ಟವನ್ನು ಅರ್ಥಮಾಡಿಕೊಂಡು ಸಂಕಷ್ಟಕ್ಕೆ ನೆರವಾದರೆ ರೈತರು ಬೆಳೆ ಬೆಳೆಯಲು ಅನುಕೂಲವಾಗುತ್ತದೆ.  ಅದರೆಂತೆ ಈ ವರ್ಷದ ಮುಂಗಾರು ಬೆಳೆ ಅಥವಾ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.

ಮಾಹಿತಿ ಪ್ರಕಾರ ಬೆಳೆಗಳಿಗೆ ಇರುವ ಎಂಎಸ್​ಪಿಯನ್ನು ಶೇ. 3ರಿಂದ 8ರಷ್ಟು ಏರಿಸುವ ಸಾಧ್ಯತೆ ಇದೆ. ಗೋಧಿ, ಭತ್ತ ಇತ್ಯಾದಿ ಬೆಳೆಗಳಿಗೆ ಸರ್ಕಾರ ಹೆಚ್ಚು ದರ ಕೊಟ್ಟು ಖರೀದಿಸಬಹುದು ಎನ್ನಲಾಗಿದೆ. 2040 ರೂ ಇರುವ ಭತ್ತದ ಎಂಎಸ್​ಪಿ ದರವನ್ನು 2,200 ರೂವರೆಗೂ ಏರಿಸುವ ಸಾಧ್ಯತೆ ಇದೆ.

ಕನಿಷ್ಠ ಬೆಂಬಲ ಬೆಲೆ ದರದಲ್ಲಿ ಈ ವರ್ಷ ಇದುವರೆಗೂ ಕೇಂದ್ರ ಸರ್ಕಾರ ರೈತರಿಂದ 262 ಲಕ್ಷ ಟನ್​ಗಳಷ್ಟು ಗೋಧಿ ಖರೀದಿ ಮಾಡಿದೆ. ಒಟ್ಟು 47,000 ಕೋಟಿ ರೂ ಹಣವನ್ನು ಈ ಗೋಧಿ ಬೆಳೆದ ರೈತರಿಗೆ ತಲುಪಿಸಲಾಗಿದೆ. 21.27 ಲಕ್ಷ ರೈತರಿಗೆ ಅನುಕೂಲವಾಗಿದೆ. ಕಳೆದ ವರ್ಷ (2022) ಕೇಂದ್ರ ಸರ್ಕಾರ ಎಂಎಸ್​ಪಿ ದರದಲ್ಲಿ ರೈತರಿಂದ 188 ಲಕ್ಷ ಟನ್​ಗಳಷ್ಟು ಗೋಧಿ ಖರೀದಿ ಮಾಡಿತ್ತು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror