ಸ್ವಂತ ಉದ್ದಿಮೆ ನಡೆಸುತ್ತಿರುವ ಪದವೀಧರ ಮಹಿಳೆ | ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯ ಪಾಸಿಟಿವ್‌ ರಿಸಲ್ಟ್‌ |

December 17, 2024
7:04 AM
ಕೇಂದ್ರದ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಅನುದಾನದ ಮೂಲಕ ಆರಂಭಿಸಿದ ಗಾರ್ಮೆಂಟ್ ಉದ್ಯಮ ಇದೀಗ ಬೆಳೆದಿದೆ.ಈಗ ಇವರ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ದೊರೆತಿದೆ.

ಹಲವಾರು ಮಂದಿ ಮಹಿಳೆಯರು ಸ್ವ ಉದ್ಯೋಗ ಮಾಡುತ್ತಿದ್ದಾರೆ. ಕನಸಿನ ಉದ್ಯಮ ನಡೆಸುತ್ತಿದ್ದಾರೆ. ಆರಂಭದಲ್ಲಿ ಅವರಿಗೆ ಬೆಂಬಲ ಹಾಗೂ ಆರ್ಥಿಕ ನೆರವುಗಳು ಅಗತ್ಯ. ಅಂತಹ ನೆರವಾಗುವ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ ಒಂದು. ಬಾಗಲಕೋಟೆಯಲ್ಲಿ ಯಶಸ್ವಿಯಾಗಿ ಉದ್ಯಮ ನಡೆಸುತ್ತಿರುವ ಪದವೀಧರ ಮಹಿಳೆಯ ಯಶೋಗಾಥೆ ಇದು.

Advertisement
Advertisement
Advertisement
Advertisement

ಬಾಗಲಕೋಟೆಯ ತೇರದಾಳದ ವಿದ್ಯಾ ಶಿವಾನಂದ ಕೋಲೂರುಮಠ ಎಂಬ ಮಹಿಳೆ ಪದವಿ ಶಿಕ್ಷಣ ಪೂರೈಸಿ, ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಇದೀಗ ಸ್ವಂತ ಉದ್ಯೋಗದ ಮೂಲಕ ಯಶಸ್ಸು ಗಳಿಸುತ್ತಿದ್ದಾರೆ. ವಿದ್ಯಾ ಅವರ ಉದ್ಯಮದ ಕನಸಿಗೆ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ ನೆರವಾಗಿದೆ. ಕೇಂದ್ರ ಸರ್ಕಾರದ  ಯೋಜನೆಯ ಮೂಲಕ 21.5 ಲಕ್ಷ ರೂಪಾಯಿ ಸಹಾಯಧನ ಪಡೆದು ಗಾರ್ಮೆಂಟ್ಸ್ ಉದ್ಯಮವನ್ನು ಆರಂಭಿಸಿ, ವಿವಿಧ ಖಾದಿ ವಸ್ತ್ರಗಳನ್ನು ತಯಾರಿಸುತ್ತಿದ್ದಾರೆ. ವಿದ್ಯಾ ಅವರಿಗೆ ಪತಿ ಹಾಗೂ ಕುಟುಂಬಸ್ಥರು ನೆರವಾಗಿದ್ದು, ಹತ್ತಾರು ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದ್ದಾರೆ. ಇವರು ತಯಾರಿಸುವ ಉತ್ಪನ್ನಗಳನ್ನು ರಾಜ್ಯದ ವಿವಿಧ ಖಾದಿ ಮಳಿಗೆಗಳಿಗೆ ಹಾಗೂ ಅನ್ಯ ರಾಜ್ಯಗಳಿಗೂ ಪೂರೈಕೆ ಮಾಡುತ್ತಿದ್ದಾರೆ.

Advertisement

ಪದವಿ ಶಿಕ್ಷಣದ ಬಳಿಕ ಎರಡು ವರ್ಷ ಶಿಕ್ಷಕಿಯಾಗಿ  ಕಾರ್ಯನಿರ್ವಹಿಸಿದ್ದೆ. ಈ ಸಂದರ್ಭದಲ್ಲಿ ಏನಾದರೊಂದು  ಸ್ವಂತ ಉದ್ಯಮ ಪ್ರಾರಂಭಿಸಬಹುದೇ ಎಂಬ ಆಲೋಚನೆ ಬಂದಾಗ ಮನೆಯವರಿಂದ ಖಾದಿ ಗಾರ್ಮೆಂಟ್ಸ್ ನಡೆಸುವ ಬಗ್ಗೆ ಬೆಂಬಲ ದೊರೆಯಿತು. ಕೇಂದ್ರದ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಅನುದಾನ ಪಡೆದು ಉದ್ಯಮ ಆರಂಭಿಸಿದೆ. ಇದೀಗ ತಮ್ಮ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ದೊರೆತಿದೆ ಎಂದು  ವಿದ್ಯಾ ಶಿವಾನಂದ ಕೋಲೂರಮಠ ಹೇಳುತ್ತಾರೆ.

Advertisement

ಉದ್ಯಮಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಕೇಂದ್ರ ಸರ್ಕಾರದ ಯೋಜನೆಯಿಂದ ಬದುಕು ರೂಪಿಸಿಕೊಳ್ಳಲು ಅನುಕೂಲವಾಗಿದೆ ಎನ್ನುತ್ತಾರೆ ವಿದ್ಯಾ ಅವರ ಪತಿ ಶಿವಾನಂದ ಕೋಲೂರಮಠ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |
March 3, 2025
11:46 AM
by: ಸಾಯಿಶೇಖರ್ ಕರಿಕಳ
ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
March 3, 2025
7:42 AM
by: The Rural Mirror ಸುದ್ದಿಜಾಲ
Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |
March 3, 2025
7:28 AM
by: The Rural Mirror ಸುದ್ದಿಜಾಲ
ಕುಂಭಮೇಳ | ಆ ಪ್ರಯಾಣದಲ್ಲಿ ಕಂಡದ್ದು ಏನೇನು..? ಅದೊಂದು ಸಿಹಿ ನಮಗೂ ಹೊಸದು…!
March 3, 2025
7:06 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

You cannot copy content of this page - Copyright -The Rural Mirror