ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಬಳಿ ಜನರು ಹಾಗೂ ವಿವಿಧ ಗಣ್ಯರ ಸಹಕಾರದೊಂದಿಗೆ ಜನರಿಂದಲೇ ರಚನೆಯಾದ ಗ್ರಾಮಸೇತು ಬಳಿ ದೀಪಾವಳಿ ಆಚರಣೆ ನಡೆಯಿತು. ಸತತವಾಗಿ ಮೂರನೇ ವರ್ಷದ ದೀಪಾವಳಿಯು ಸರಳವಾಗಿ ಆಚರಿಸಲಾಯಿತು. ದೀಪಗಳಿಂದ ಗ್ರಾಮಸೇತು ಕಂಗೊಳಿಸಿತು.
ಗ್ರಾಮಸೇತುವಿನ ಅಕ್ಕಪಕ್ಕದಲ್ಲಿ ಹಣತೆ ಹಚ್ಚಿದ ಗ್ರಾಮಭಾರತ ತಂಡದ ಸದಸ್ಯರು ಹಾಗೂ ನಾಗರಿಕರು ಸಮಸ್ತರಿಗೂ ದೀಪಾವಳಿಯ ಶುಭಾಶಯ ಕೋರಿ ಸಿಹಿ ಹಂಚಿದರು. ಕಳೆದ ಮೂರು ವರ್ಷಗಳಿಂದ ಮೊಗ್ರ- ಏರಣಗುಡ್ಡೆ ಸೇತುವೆ ಬೇಡಿಕೆ ಈಡೇರಿಕೆಗೆ ಒತ್ತಾಯ ನಡೆಯುತ್ತಿದೆ. ಕಳೆದ ವರ್ಷ ಜನರೇ ಕಾಲು ಸಂಕ ರಚಿಸಿದ್ದರು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಮೊಗ್ರ ಶಾಲೆ ಹಾಗೂ ಆಸುಪಾಸಿನ ಜನರಿಗೆ ತಾತ್ಕಾಲಿಕ ಸಂಪರ್ಕ ಸಾಧ್ಯವಾಗಿದೆ. ಮುಂದೆ ಶಾಶ್ವತ ಸೇತುವೆ ಬೇಡಿಕೆ ಇದೆ. ದೀಪಾವಳಿಯ ಸಂದರ್ಭ ಸೇತುವೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಣತೆ ಬೆಳಗಿ ಗ್ರಾಮದ ಜನರಿಗೆ ಸೇತುವೆ ಬೆಳಕಾಗಲಿ ಎಂದು ಒತ್ತಾಯಿಸುತ್ತಿದ್ದಾರೆ.
ದೀಪ ಬೆಳಗುವ ಕಾರ್ಯಕ್ರಮದ ಸಂದರ್ಭ ಗ್ರಾಮಭಾರತ ತಂಡದ ಅಧ್ಯಕ್ಷರಾಗಿ ಗಂಗಾಧರ ಭಟ್ ಪುಚ್ಚಪ್ಪಾಡಿ, ಸಂಚಾಲಕರಾದ ಸುಧಾಕರ ಮಲ್ಕಜೆ, ಕಾರ್ಯದರ್ಶಿ ಮುಂಜುನಾಥ ಮುತ್ಲಾಜೆ, ಗ್ರಾಪಂ ಸದಸ್ಯ ವಸಂತ ಮೊಗ್ರ ಸೇರಿದಂತೆ ಪ್ರಮುಖರು ಭಾಗವಹಿಸಿದರು.
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…