ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಬಳಿ ಜನರು ಹಾಗೂ ವಿವಿಧ ಗಣ್ಯರ ಸಹಕಾರದೊಂದಿಗೆ ಜನರಿಂದಲೇ ರಚನೆಯಾದ ಗ್ರಾಮಸೇತು ಬಳಿ ದೀಪಾವಳಿ ಆಚರಣೆ ನಡೆಯಿತು. ಸತತವಾಗಿ ಮೂರನೇ ವರ್ಷದ ದೀಪಾವಳಿಯು ಸರಳವಾಗಿ ಆಚರಿಸಲಾಯಿತು. ದೀಪಗಳಿಂದ ಗ್ರಾಮಸೇತು ಕಂಗೊಳಿಸಿತು.
ಗ್ರಾಮಸೇತುವಿನ ಅಕ್ಕಪಕ್ಕದಲ್ಲಿ ಹಣತೆ ಹಚ್ಚಿದ ಗ್ರಾಮಭಾರತ ತಂಡದ ಸದಸ್ಯರು ಹಾಗೂ ನಾಗರಿಕರು ಸಮಸ್ತರಿಗೂ ದೀಪಾವಳಿಯ ಶುಭಾಶಯ ಕೋರಿ ಸಿಹಿ ಹಂಚಿದರು. ಕಳೆದ ಮೂರು ವರ್ಷಗಳಿಂದ ಮೊಗ್ರ- ಏರಣಗುಡ್ಡೆ ಸೇತುವೆ ಬೇಡಿಕೆ ಈಡೇರಿಕೆಗೆ ಒತ್ತಾಯ ನಡೆಯುತ್ತಿದೆ. ಕಳೆದ ವರ್ಷ ಜನರೇ ಕಾಲು ಸಂಕ ರಚಿಸಿದ್ದರು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಮೊಗ್ರ ಶಾಲೆ ಹಾಗೂ ಆಸುಪಾಸಿನ ಜನರಿಗೆ ತಾತ್ಕಾಲಿಕ ಸಂಪರ್ಕ ಸಾಧ್ಯವಾಗಿದೆ. ಮುಂದೆ ಶಾಶ್ವತ ಸೇತುವೆ ಬೇಡಿಕೆ ಇದೆ. ದೀಪಾವಳಿಯ ಸಂದರ್ಭ ಸೇತುವೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಣತೆ ಬೆಳಗಿ ಗ್ರಾಮದ ಜನರಿಗೆ ಸೇತುವೆ ಬೆಳಕಾಗಲಿ ಎಂದು ಒತ್ತಾಯಿಸುತ್ತಿದ್ದಾರೆ.
ದೀಪ ಬೆಳಗುವ ಕಾರ್ಯಕ್ರಮದ ಸಂದರ್ಭ ಗ್ರಾಮಭಾರತ ತಂಡದ ಅಧ್ಯಕ್ಷರಾಗಿ ಗಂಗಾಧರ ಭಟ್ ಪುಚ್ಚಪ್ಪಾಡಿ, ಸಂಚಾಲಕರಾದ ಸುಧಾಕರ ಮಲ್ಕಜೆ, ಕಾರ್ಯದರ್ಶಿ ಮುಂಜುನಾಥ ಮುತ್ಲಾಜೆ, ಗ್ರಾಪಂ ಸದಸ್ಯ ವಸಂತ ಮೊಗ್ರ ಸೇರಿದಂತೆ ಪ್ರಮುಖರು ಭಾಗವಹಿಸಿದರು.
ಮ್ಯಾನ್ಮಾರ್ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…
ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…
ಉಪಗ್ರಹ, ಡ್ರೋನ್, GIS, AI ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರಾಜ್ಯ…
ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್ನ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 10ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ.…