Exclusive - Mirror Hunt

ಪಂಜದಲ್ಲಿ ನವಸಾಕ್ಷರರಿಂದ ಗ್ರಾಮಾಭಿವೃದ್ದಿಯ ಚಿಂತನೆ | ಗ್ರಾಮ ಸ್ವರಾಜ್ಯದತ್ತ ವಿನೂತನ ಹೆಜ್ಜೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಗಾಂಧೀಜಿಯವರ ಚಿಂತನೆಯೇ ಗ್ರಾಮ ಸ್ವರಾಜ್ಯ. ಈಗ ಈ ಚಿಂತನೆ ಆರಂಭವಾಗಿರುವುದು  ಸುಳ್ಯ ತಾಲೂಕಿನ ಪಂಜದಲ್ಲಿ ನವಸಾಕ್ಷರರಿಂದ. ಈ ಹೆಜ್ಜೆ ಸದ್ದಿಲ್ಲದೆ ಮುಂದಡಿ ಇಡುತ್ತಿದೆ. ವಿವಿಧ ಕಾರಣಗಳಿಂದ ಗಮನ ಸೆಳೆದಿದೆ ಈ ಚಳುವಳಿ. ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಪ್ರದೇಶದ ಜಿನ್ನಪ್ಪ ಗೌಡ ಅವರು ಗ್ರಾಮ ಸ್ವರಾಜ್ಯ ಸಾಕಾರದಲ್ಲಿ ಮುಂಚೂಣಿಯಲ್ಲಿದ್ದಾರೆ.

Advertisement
Advertisement

ರೂರಲ್‌ ಮಿರರ್‌ ಸಂದರ್ಶನ

ಸಾಕ್ಷರತಾ ಆಂದೋಲನ ಆರಂಭವಾದಾಗ ಸುಳ್ಯ ತಾಲೂಕಿನ ಪಂಜದಲ್ಲಿ ಕೂಡಾ ಓದು ಬಾರದೇ ಇರುವವರಿಗೆ ಓದಿಸುವ, ಬರೆಯಿಸುವ ಆಂದೋಲನ ಆರಂಭವಾಯಿತು. ಹೀಗಾಗಿ ಪಂಜದಲ್ಲೂ 1990 ರಲ್ಲಿ ಸಾಕ್ಷರತಾ ಆಂದೋಲನ ಹೆಜ್ಜೆ ಇರಿಸಿತು. 1995 ರ ಹೊತ್ತಿಗೆ ನವಸಾಕ್ಷರರ ಪ್ರೇರಕರಾಗಿ ಜಿನ್ನಪ್ಪ ಅವರು ತೊಡಗಿಸಿಕೊಂಡರು. ಅಕ್ಷರ ಕಲಿಸುವುದು  ಹಾಗೂ ಅನೇಕರ ಬದುಕಿಗೆ ಪ್ರೇರೇಪಣೆ ನೀಡುವ ಕೆಲಸ ಆರಂಭಿಸಿದರು. ರಾತ್ರಿ ಶಾಲೆ ನಡೆಸಿ ಕಾಲನಿ ನಿವಾಸಿಗಳಿಗೆ, ಅಕ್ಷರ ಬಾರದೇ ಇರುವವರಿಗೆ ಅಕ್ಷರ ಬರೆಯಲು, ಸಹಿ ಹಾಕಲು ಕಲಿಸಿದರು.  2010 ರ ವರೆಗೆ ಪ್ರೇರಕರಾಗಿ ಕೆಲಸ ಮಾಡಿ ನಂತರ  2015  ರ ವರೆಗೆ ನವಸಾಕ್ಷರರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಿದರು. ಅಷ್ಟವರೆಗೂ ನವಸಾಕ್ಷರರ ಸಂಘಟನೆ ಮಾಡುತ್ತಾ ಬಂದಿರುವ ಜಿನ್ನಪ್ಪ ಅವರು ನವಸಾಕ್ಷರರ ಬದುಕಿಗೆ ಪ್ರೇರಣಾದಾಯಿಯಾಗಿದ್ದರು. ಪುರುಷೋತ್ತಮ ಮುಡೂರು ಅವರಂತಹವರೂ ಮಾರ್ಗದರ್ಶನ ನೀಡಿದರು.

 

Advertisement

 

ನವಸಾಕ್ಷರರ ಸಂಘಟನೆಯ ಸಮಯದಲ್ಲಿ  ಪಂಜದ ಪ್ರದೇಶದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು  ಮಾಡಿದರು. ಅದರಲ್ಲಿ  ನವಸಾಕ್ಷರರ ಭೂಮಿ ಸಮಸ್ಯೆ ನಿವಾರಣೆ,  ಮನೆ ನಿರ್ಮಾಣ ಸೇರಿದಂತೆ ವಿವಿಧ ಕೆಲಸ ಮಾಡಿದ್ದರು. ಈಗ ಹಲವು ನವಸಾಕ್ಷರರು ಸ್ವತಂತ್ರವಾಗಿ ಯೋಚಿಸುವ ಹಂತಕ್ಕೆ ಬಂದಿದ್ದಾರೆ ಎಂದು ಜಿನ್ನಪ್ಪ ಹೇಳುತ್ತಾರೆ. ಆದರೆ ಅನೇಕ ಮೂಲಭೂತ ಸಮಸ್ಯೆಗಳು ಇದೆ. ಈ ಕಾರಣಕ್ಕೆ ಪಂಚಾಯತ್‌ ಗ್ರಾಮ ಸಭೆಯಲ್ಲಿ ಧ್ವನಿ ಎತ್ತುವ ಕಾರ್ಯ ಮಾಡಲಾಗಿತ್ತು. ಈ ಸಮಯದಲ್ಲಿ  ಕೆಲವು ವಿರೋಧಗಳು ಬಂದಾಗ ನವಸಾಕ್ಷರರೆಲ್ಲರೂ ಒಂದಾಗಿ ಗ್ರಾಮ ಪಂಚಾಯತ್‌ ಚುನಾವಣೆಗೆ ಸ್ಫರ್ಧೆ ಮಾಡಲು ನಿರ್ಧರಿಸುತ್ತಾರೆ. ಇಲ್ಲಿಂದ ಬಳಿಕ ಸಾಮಾಜಿಕವಾಗಿ ನವಸಾಕ್ಷರರ ಚಟುವಟಿಕೆ ತೆರೆದುಕೊಳ್ಳುತ್ತದೆ. ಪಂಚಾಯತ್‌ ಗಳು ಜನರ ಪಂಚಾಯತ್‌ ಆಗಬೇಕೆಂದು ಹೆಜ್ಜೆ ಇಡುತ್ತಾರೆ ಚುನಾವಣಾ ಕಣಕ್ಕೆ ಧುಮುಕುತ್ತಾರೆ. ಪಂಜ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಪಂಜದ 5  ವಾರ್ಡ್‌ ಗಳಲ್ಲಿ ಗ್ರಾಮ ಸ್ವರಾಜ್‌ ಎಂಬ ತಂಡದ ಮೂಲಕ ಸ್ಫರ್ಧೆ ಮಾಡುತ್ತಾರೆ. ಚುನಾವಣೆಗೆ ಸ್ಫರ್ಧೆ ಮಾಡಿದವರಲ್ಲಿ  ಇಬ್ಬರು ನವಸಾಕ್ಷರರು ಉಳಿದೆಲ್ಲರೂ ವಿಧ್ಯಾಭ್ಯಾಸ ಮಾಡಿದರು.

ಚುನಾವಣಾ ಸಮಯದಲ್ಲಿ  ಅಳ್ಪೆ ಚಿಂಗಾಣಿ ಗುಡ್ಡೆಯಲ್ಲಿ  ಕುಡಿಯುವ ನೀರಿನ ಟ್ಯಾಂಕ್‌  ರಚನೆ, ವಿದ್ಯುತ್‌ ಸಮಸ್ಯೆ ನಿವಾರಣೆ ಹೀಗೇ ವಿವಿಧ ಯೋಜನೆ ಹಾಗೂ ಗುರಿ ಇರಿಸಿ ಸ್ಫರ್ಧೆ ಮಾಡಿದ್ದರು. ಸೋತರೂ ತಾವು ಕೆಲಸ ಮಡುವುದಾಗಿ ಜನರಿಗೆ ತಿಳಿಸಿದ್ದರು. ಈಗ ಕೆಲಸ ಮಾಡುತ್ತಿದ್ದಾರೆ.

 

ಧ್ವಜ ಸ್ತಂಭದ ಬಗ್ಗೆ ಧ್ವನಿ
ನವಸಾಕ್ಷರರು ಹಣ ಹಾಕಿಸಿ ನಿರ್ಮಿಸಿದ ಧ್ವಜಸ್ತಂಭವನ್ನು  ಗ್ರಾಮ ಪಂಚಾಯತ್‌ ಕಟ್ಟದ ನಿರ್ಮಾಣದ ವೇಳೆ ಒಡೆದು ಹಾಕಿದೆ. ಅಮೃತ ಮಹೋತ್ಸವ ಕಾರಣ ಈ ಬಾರಿಯ ಸ್ವಾತಂತ್ರ್ಯ ಉತ್ಸವ ಮಹತ್ವ ಪಡೆದಿದೆ. ನವಸಾಕ್ಷರರಿಗೆ ಇದೀಗ ಆ.15  ರ ಒಳಗಾಗಿ ಮತ್ತೆ ಧ್ವಜ ಸ್ತಂಭ ನಿರ್ಮಿಸಿ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.
Advertisement

ನವಸಾಕ್ಷರರು  1990  ರಲ್ಲಿ  50 ಪೈಸೆ, ಒಂದು ರೂಪಾಯಿ ಹಣ ಸಂಗ್ರಹಿಸಿ, ನವ ಸಾಕ್ಷರರು ಪ್ರತಿಯೊಬ್ಬರೂ ಎರಡು ರೂಪಾಯಿ ಸಂಗ್ರಹಿಸಿ ಕಟ್ಟಿದ ಧ್ವಜ ಸ್ಥಂಭ ತೆಗೆದಿದ್ದಾರೆ, ಆಗ ನೀಡಿದ ಭರವಸೆಯಂತೆ ಪುನರ್‌ ನಿರ್ಮಾಣ ಮಾಡಬೇಕು ಎಂಬುದು ಒತ್ತಾಯವಾಗಿದೆ.

ಮೂಲಭೂತ ಸೌಕರ್ಯ ಪಡೆಯಲು ಗಾಂಧಿತತ್ತ್ವದ ಮೂಲಕ ನಡೆಯಲಾಗುತ್ತಿದೆ ಎನ್ನುವ ಜಿನ್ನಪ್ಪ ಅಳ್ಪೆ,  ಗ್ರಾಮ ಪಂಚಾಯತ್‌ ಗಳು ಯಾವತ್ತೂ ಜನರ ಪಂಚಾಯತ್ ಆಗಬೇಕು  ಪಕ್ಷಗಳ ಪಂಚಾಯತ್‌ ಆಗಬಾರದು ಎನ್ನುತ್ತಾರೆ  ಜಿನ್ನಪ್ಪ

 

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮಳೆ ಹಿನ್ನೆಲೆ | ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ

ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…

4 hours ago

ಶನಿ ಬುಧರಿಂದ ನವಪಂಚಮ ರಾಜಯೋಗ

2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…

4 hours ago

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…

13 hours ago

ಗೆದ್ದದ್ದು ಬೆಂಗಳೂರು ಅಲ್ಲ, ಇಂಗ್ಲೇಂಡಿನ ಡಿಯಾಜಿಯೋ ಕಂಪೆನಿ…!!! ಗೊತ್ತಾ..?

ಎಲ್ಲಿ  ಉಚಿತವೆಂಬ ಆಮಿಶ ಇದೆಯೋ  ಅಲ್ಲಿ ತಳ್ಳಾಟವೂ  ಇರುತ್ತದೆ. ಸರಕಾರಿ ಬಸ್ ಗಳಲ್ಲಿ…

13 hours ago

ಭಾರೀ ಮಳೆ ಸಾಧ್ಯತೆ | ಕೊಡಗು-ಉಡುಪಿ ಜಿಲ್ಲೆಯಲ್ಲಿ ಎಚ್ಚರಿಕೆ | ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಜೆ | ಉಡುಪಿಯಲ್ಲಿ ಶಾಲೆಗಳಿಗೆ ರಜೆ |

ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ  ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಗಾಳಿ-ಮಳೆ…

14 hours ago

ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ…? ಕೇಳಲು ಶುರು ಮಾಡಿದ್ದಾರೆ ಅಡಿಕೆ ಬೆಳೆಗಾರರು..!

ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.‌10 ಕಳೆಯುವ ಹೊತ್ತಿಗೆ ವಾತಾವರಣ…

19 hours ago