Advertisement
ಅನುಕ್ರಮ

ಚಿಲಿಪಿಲಿ | ಹಸಿರು ಜೇನ್ನೊಣ ಬಾಕ

Share
ಕಾಶದಲ್ಲಿ ಹಾರೋ ಹಕ್ಕಿಗಳು ನಮ್ಮ ಕನಸುಗಳಿಗೆ ಸ್ಪೂರ್ತಿಗಳು. ಪ್ರತಿಯೊಂದು ಹಕ್ಕಿಗೂ ಅದರದೇ ಆದ ವಿಶೇಷಗಳಿವೆ. ಕೆಲವು ಬಣ್ಣಕ್ಕೆ ಹೆಸರಾದರೆ, ಇನ್ನೂ ಕೆಲವು ಬಲಿಷ್ಠ ತೆಗೆ, ಮತ್ತೆ ಕೆಲವು ಆಕ್ರಮಣಕಾರಿ ಹಾರಾಟಕ್ಕೆ, ಚಾಕಚಕ್ಯತೆಗೆ, ಚತುರತೆಗೆ, ಚೆಂದಕ್ಕೆ.

ಇಂದು ನಾವು ತಿಳಿದು ಕೊಳ್ಳಲಿರುವ ಹಕ್ಕಿ ಜೇನ್ನೊಣ ಬಾಕ( Green Bee Eater) ದ ಕುರಿತು. ಕನ್ನಡದಲ್ಲಿ ಕಳ್ಳಿಪೀರ , ಸಂಸ್ಕೃತ ಭಾಷೆಯಲ್ಲಿ ಸಾರಂಗ, ತುಳುವಿನಲ್ಲಿ ತುಂಬೆ ಪಕ್ಕಿ ಎಂತಲೂ ಕರೆಯಲಾಗುತ್ತದೆ.

ಈ ಹಕ್ಕಿ ತನ್ನ ಸೌಂದರ್ಯಕ್ಕೆ ಬುದ್ಧಿವಂತಿಕೆಗೆ, ನಿಖರ ಗುರಿಗೆ ಪ್ರಸಿದ್ಧವಾಗಿದೆ. ಜೇನುನೊಣ ಬಾಕ ಹಕ್ಕಿಗಳಲ್ಲಿ ಸುಮಾರು ೨೦ ಕ್ಕೂ ಹೆಚ್ಚಿನ ಜಾತಿಗಳಿವೆ.ಅದರಲ್ಲಿ ಮೂರು ರೀತಿಯ ಜೇನ್ನೊಣ ಬಾಕಗಳನ್ನು ನಮ್ಮ ಬಾಳಿಲ ಪರಿಸರದಲ್ಲಿ ವನ್ಯಜೀವಿ ಛಾಯಾಚಿತ್ರಗಾರರಾದ ರಾಧಾಕೃಷ್ಣ ರಾವ್ ಯು ಬಾಳಿಲ ರವರು ಗುರುತಿಸಿದ್ದಾರೆ. ಈ Green Bee eater ಗಳು ಆಫ್ರಿಕಾದ ಉತ್ತರ ಭಾಗ ಪಶ್ಚಿಮ ಅರೇಬಿಯಾ, ಭಾರತದಿಂದ ವಿಯೆಟ್ನಾಮ್ ವರೆಗೆ, ಪರ್ಷಿಯಾದ ಭಾಗಗಳಲ್ಲಿ ಕಂಡು ಬರುತ್ತವೆ.
ಮೈ ಭಾಗ ಹಸಿರು, ನೆತ್ತಿಯ ಭಾಗ ಕಂದು ಬಣ್ಣ, ಮೊನಚಾಗಿರುವ ಬಾಗಿದ ಕೊಕ್ಕುಗಳು, ಬಾಲದ ಮಧ್ಯದಿಂದ ಸೂಜಿಯಂತೆ ಹೊರಟ ನೀಳವಾದ ಗರಿಗಳು ಈ ಹಕ್ಕಿಯ ವಿಶೇಷತೆ.

 

 

ಎತ್ತರದ ಪ್ರದೇಶಗಳಲ್ಲಿ , ಮರದ ಗೆಲ್ಲುಗಳಲ್ಲಿ, ವಿದ್ಯುತ್ ತಂತಿಗಳ ಮೇಲೆ ಬೇಟೆಗಾಗಿ ಕಾಯುತ್ತವೆ. ಬೇಟೆಯನ್ನು ನಿಖರವಾಗಿ ಗುರುತಿಸಿ ಹಿಡಿಯುತ್ತವೆ. ಗುರಿ ತಪ್ಪುವ ಮಾತೇ ಇಲ್ಲ. ಆಕಾಶದಲ್ಲಿ ಹಾರುವಾಗ ಜೇನ್ನೋಣಗಳನ್ನು , ಮಿಡತೆ, ಜೀರುಂಡೆಗಳು ಹಿಡಿದು ತಿನ್ನುತ್ತವೆ. ನಿಖರವಾದ ಬೇಟೆಯನ್ನು ಕುಳಿತ ಜಾಗದಿಂದಲೇ ಗುರುತಿಸಿ ಹಿಡಿಯುತ್ತವೆ ಮತ್ತು ಪುನಃ ಅದೇ ಸುರಕ್ಷಿತ ಜಾಗದಲ್ಲಿ ಬಂದು ಬೇಟೆಯನ್ನು ತಿನ್ನುತ್ತವೆ. ಈ ಹಕ್ಕಿಗಳು ಗುಂಪಾಗಿರುತ್ತವೆ.

(ಛಾಯಾಗ್ರಹಣ – ರಾಧಾಕೃಷ್ಣ ರಾವ್ ಯು ಬಾಳಿಲ)

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 14-03-2026 | ಇಂದು ಕರಾವಳಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ – ರಾಜ್ಯದ ಹಲವೆಡೆ ಗುಡುಗು ಮಳೆ ಮುನ್ಸೂಚನೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಗುಡುಗು…

8 minutes ago

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ ಭಾರತೀಯ ರೈತರಿಗೆ ಬೆಲೆ ಬೆಂಬಲದ ಸೂಚನೆ ನೀಡುತ್ತಿದೆ.…

7 hours ago

ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಗಣಪತಿ ಮೃತಪಟ್ಟಿದ್ದಾರೆ. ಕಾಡಾನೆ ಹಾವಳಿ…

8 hours ago

ಹಾಲಿನಲ್ಲಿ ಕಲಬೆರಕೆ ಪತ್ತೆಗೆ ವಿಶೇಷ ಕಿಟ್‌

ಹಾಲಿನ ಗುಣಮಟ್ಟ ಕಾಪಾಡಲು ಸಹಕಾರ ಸಂಘಗಳಿಗೆ ವಿಶೇಷ ಕಲಬೆರಕೆ ಪತ್ತೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.

8 hours ago

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…

16 hours ago

ಕೃಷಿ ಗುರಿ ಕೇವಲ ‘ಆಹಾರ ಭದ್ರತೆ’ ಅಲ್ಲ, ಅದನ್ನೂ ಮೀರಿದ ಕೃಷಿ ಚಿಂತನೆ ಅಗತ್ಯ

ಕೃಷಿಯ ಮೂಲಕ ಕೇವಲ ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕಿಂತ ಸಮಾನ ವಿತರಣೆ, ಪರಿಸರ ಸಂರಕ್ಷಣೆ…

17 hours ago