Advertisement
ಅನುಕ್ರಮ

ಚಿಲಿಪಿಲಿ | ಹಸಿರು ಜೇನ್ನೊಣ ಬಾಕ

Share
ಕಾಶದಲ್ಲಿ ಹಾರೋ ಹಕ್ಕಿಗಳು ನಮ್ಮ ಕನಸುಗಳಿಗೆ ಸ್ಪೂರ್ತಿಗಳು. ಪ್ರತಿಯೊಂದು ಹಕ್ಕಿಗೂ ಅದರದೇ ಆದ ವಿಶೇಷಗಳಿವೆ. ಕೆಲವು ಬಣ್ಣಕ್ಕೆ ಹೆಸರಾದರೆ, ಇನ್ನೂ ಕೆಲವು ಬಲಿಷ್ಠ ತೆಗೆ, ಮತ್ತೆ ಕೆಲವು ಆಕ್ರಮಣಕಾರಿ ಹಾರಾಟಕ್ಕೆ, ಚಾಕಚಕ್ಯತೆಗೆ, ಚತುರತೆಗೆ, ಚೆಂದಕ್ಕೆ.

ಇಂದು ನಾವು ತಿಳಿದು ಕೊಳ್ಳಲಿರುವ ಹಕ್ಕಿ ಜೇನ್ನೊಣ ಬಾಕ( Green Bee Eater) ದ ಕುರಿತು. ಕನ್ನಡದಲ್ಲಿ ಕಳ್ಳಿಪೀರ , ಸಂಸ್ಕೃತ ಭಾಷೆಯಲ್ಲಿ ಸಾರಂಗ, ತುಳುವಿನಲ್ಲಿ ತುಂಬೆ ಪಕ್ಕಿ ಎಂತಲೂ ಕರೆಯಲಾಗುತ್ತದೆ.

ಈ ಹಕ್ಕಿ ತನ್ನ ಸೌಂದರ್ಯಕ್ಕೆ ಬುದ್ಧಿವಂತಿಕೆಗೆ, ನಿಖರ ಗುರಿಗೆ ಪ್ರಸಿದ್ಧವಾಗಿದೆ. ಜೇನುನೊಣ ಬಾಕ ಹಕ್ಕಿಗಳಲ್ಲಿ ಸುಮಾರು ೨೦ ಕ್ಕೂ ಹೆಚ್ಚಿನ ಜಾತಿಗಳಿವೆ.ಅದರಲ್ಲಿ ಮೂರು ರೀತಿಯ ಜೇನ್ನೊಣ ಬಾಕಗಳನ್ನು ನಮ್ಮ ಬಾಳಿಲ ಪರಿಸರದಲ್ಲಿ ವನ್ಯಜೀವಿ ಛಾಯಾಚಿತ್ರಗಾರರಾದ ರಾಧಾಕೃಷ್ಣ ರಾವ್ ಯು ಬಾಳಿಲ ರವರು ಗುರುತಿಸಿದ್ದಾರೆ. ಈ Green Bee eater ಗಳು ಆಫ್ರಿಕಾದ ಉತ್ತರ ಭಾಗ ಪಶ್ಚಿಮ ಅರೇಬಿಯಾ, ಭಾರತದಿಂದ ವಿಯೆಟ್ನಾಮ್ ವರೆಗೆ, ಪರ್ಷಿಯಾದ ಭಾಗಗಳಲ್ಲಿ ಕಂಡು ಬರುತ್ತವೆ.
ಮೈ ಭಾಗ ಹಸಿರು, ನೆತ್ತಿಯ ಭಾಗ ಕಂದು ಬಣ್ಣ, ಮೊನಚಾಗಿರುವ ಬಾಗಿದ ಕೊಕ್ಕುಗಳು, ಬಾಲದ ಮಧ್ಯದಿಂದ ಸೂಜಿಯಂತೆ ಹೊರಟ ನೀಳವಾದ ಗರಿಗಳು ಈ ಹಕ್ಕಿಯ ವಿಶೇಷತೆ.

 

 

ಎತ್ತರದ ಪ್ರದೇಶಗಳಲ್ಲಿ , ಮರದ ಗೆಲ್ಲುಗಳಲ್ಲಿ, ವಿದ್ಯುತ್ ತಂತಿಗಳ ಮೇಲೆ ಬೇಟೆಗಾಗಿ ಕಾಯುತ್ತವೆ. ಬೇಟೆಯನ್ನು ನಿಖರವಾಗಿ ಗುರುತಿಸಿ ಹಿಡಿಯುತ್ತವೆ. ಗುರಿ ತಪ್ಪುವ ಮಾತೇ ಇಲ್ಲ. ಆಕಾಶದಲ್ಲಿ ಹಾರುವಾಗ ಜೇನ್ನೋಣಗಳನ್ನು , ಮಿಡತೆ, ಜೀರುಂಡೆಗಳು ಹಿಡಿದು ತಿನ್ನುತ್ತವೆ. ನಿಖರವಾದ ಬೇಟೆಯನ್ನು ಕುಳಿತ ಜಾಗದಿಂದಲೇ ಗುರುತಿಸಿ ಹಿಡಿಯುತ್ತವೆ ಮತ್ತು ಪುನಃ ಅದೇ ಸುರಕ್ಷಿತ ಜಾಗದಲ್ಲಿ ಬಂದು ಬೇಟೆಯನ್ನು ತಿನ್ನುತ್ತವೆ. ಈ ಹಕ್ಕಿಗಳು ಗುಂಪಾಗಿರುತ್ತವೆ.

(ಛಾಯಾಗ್ರಹಣ – ರಾಧಾಕೃಷ್ಣ ರಾವ್ ಯು ಬಾಳಿಲ)

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

8 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

8 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

10 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

13 hours ago