Opinion

ಭೂ ಅಂತರ್ಗತ ನೀರಿನ ಒರತೆಗಳು | ಮೇಲ್ಮೈ ಒರತೆ ಮತ್ತು ಶಿಲಾಸ್ತರದ ನಡುವಣ ನೀರು | ಸಮುದ್ರ ಸೇರುವ ನೀರು ವ್ಯರ್ಥವೇ ?

Share

ಭೂ ಅಂತರ್ಗತ ನೀರಿನ ಒರತೆಗಳು(Water spring). ಮುಖ್ಯವಾಗಿ ಎರಡು ವಿಧಗಳು. ಮೊದಲನೆಯದು ಮೇಲ್ಮೈ ಒರತೆಗಳಾದರೆ, ಎರಡನೆಯದು ಶಿಲಾಸ್ತರದ ನಡುವಣ… ಭೂಮಿಯ ಮೇಲ್ಮೈ ರಚನೆ, ಮೇಲ್ಭಾಗದಲ್ಲಿ ಸುಮಾರು ಒಂದಡಿಯಿಂದ ನೂರಾರು ಅಡಿಗಳ ತನಕ, ಕಲ್ಲು(Rock), ಮಣ್ಣು(Soil), ಶೇಡಿ, ಹೊಯ್ಗೆ(Sand) ಕಳಿತ/ ಕಳೆಯುತ್ತಿರುವ ಸಾವಯವ ವಸ್ತುಗಳು(Fossils) ಮತ್ತು ಇವುಗಳ ಮಿಶ್ರಣ.

Advertisement

ಅದರ ಕೆಳಭಾಗದಲ್ಲಿ ಎಲ್ಲಾ ಭೂ ಪ್ರದೇಶಗಳಲ್ಲಿ ಬಿರುಕುಗಳುಳ್ಳ ಶಿಲಾ ಸ್ತರಗಳು. ಆಡುಭಾಷೆಯಲ್ಲಿ ಹಾಸು ಪಾದೆ…ಈ ಹಾಸುಪಾದೆಗಳ ನಡುವೆ ಸುಮಾರು ಒಂದು ತೆಂಗಿನ ಕಾಯಿಯ ಗಾತ್ರದಿಂದ ಹಿಡಿದು ಒಂದೆರಡು ಗ್ರಾಮಗಳಷ್ಟು ದೊಡ್ಡ ಪೊಟರೆಗಳು…ಈ ಹಾಸುಪಾದೆಗಳ ನಡುವೆ ಮತ್ತು ಪೊಟರೆಗಳ ನಡುವೆ ವಿವಿಧ ಗಾತ್ರದ ಬಿರುಕುಗಳು…

ಮಳೆಗಾಲದಲ್ಲಿ ಸುರಿವ ಮಳೆ ನೀರು, ಮೇಲ್ಭಾಗದ ಪದರವನ್ನು ಪೂರ್ಣವಾಗಿ ತೋಯಿಸಿದ ನಂತರ, ಶಿಲಾ ಸ್ತರವನ್ನು ತಲುಪಿ ಅದರ ಕೆಳಗಿನ/ಒಳಗಿನ ಪೊಟರೆಗಳಲ್ಲಿ ಸಂಚಯವಾಗುತ್ತದೆ. ಒಂದು ಹಂತದ ನಂತರ, ಹೆಚ್ಚಿನ ನೀರು ನದಿಗಳ ಮುಖಾಂತರ ಸಮುದ್ರ ಸೇರುತ್ತದೆ.. ಹಾಗಿದ್ದರೆ ಸಮುದ್ರ ಸೇರುವ ನೀರು ವ್ಯರ್ಥವೇ ? ಖಂಡಿತ ಅಲ್ಲ. ಅಗಾಧ ಪ್ರಮಾಣದಲ್ಲಿ ಸಾವಯವ ವಸ್ತುಗಳನ್ನು ಸಮುದ್ರ ಜೀವಿಗಳಿಗೆ ಆಹಾರವಾಗಿ ಒದಗಿಸುವ ನೈಸರ್ಗಿಕ ವ್ಯವಸ್ಥೆ…

ಈಗ, ಮೈಲ್ಮೈ ಕಲ್ಲು ಮಣ್ಣು ಸ್ತರದಲ್ಲಿ ಸಂಚಯವಾಗುವ ನೀರು ಒಂದು ಬಹು ಮುಖ್ಯ ಧಾರಕವನ್ನು ಅವಲಂಬಿಸಿದೆ. ಅದುವೇ ಸಾವಯವ ಇಂಗಾಲ. ಇದು ಮುಖ್ಯವಾಗಿ ಸಸ್ಯಗಳ ಕಾಂಡ ಬೇರು, ತರಗೆಲೆ ಅಥವಾ ಇನ್ನಾವುದೇ ಶರೀರ ಭಾಗ ಆಗಿರಬಹುದು ಅಥವಾ ಪ್ರಾಣಿಜನ್ಯವೂ ಆಗಬಹುದು. ಈ ಸಾವಯವ ಇಂಗಾಲದ ಸಾಂದ್ರತೆಯನ್ನು ಅವಲಂಬಿಸಿ ಆ ಭೂ ಪ್ರದೇಶ ಮಳೆ ನೀರನ್ನು ಹಿಡಿದಿಟ್ಟುಕೊಂಡು ಬೇಸಿಗೆಯಲ್ಲಿ ಒರತೆಗಳ ರೂಪದಲ್ಲಿ ಹರಿಯುತ್ತದೆ..

ಮೇಲ್ಭಾಗದಿಂದ ಕೆಳಗಿಳಿದ ನೀರು ಶಿಲಾಸ್ತರದ ಬಿರುಕುಗಳ ಮೂಲಕ ಕೆಳಗಿನ ಪೊಟರೆಗಳಲ್ಲಿ ಸಂಚಯವಾಗುತ್ತದೆ. ಪೊಟರೆಗಳ ನಡುವೆ ಸೆಲೆಗಳ ಸಂಪರ್ಕ ಇದ್ದರೆ, ನೂರಾರು ಮೈಲು ದೂರವೂ ಸಾಗೀತು…. ಆದ್ದರಿಂದ ನೀವು ಒಂದೊಮ್ಮೆ ಬೋರ್ವೆಲ್ ಮರುಪೂರಣ ಮಾಡಿದರೂ ಆ ನೀರು ಪಕ್ಕದ ಜಿಲ್ಲೆಗೂ ಹರಿದೀತು…ಅಥವಾ ಪೊಟರೆ ಚಿಕ್ಕದಿದ್ದರೆ, ಉಕ್ಕಿ ಹರಿದೀತು. ಓವರ್ ಫ್ಲೋ…..

ಎಲ್ಲರೂ ತಿಳಿದಿರುವಂತೆ ನೀರು, ಆಮ್ಲ ಜನಕ ಮತ್ತು ಜಲಜನಕದ ರಾಸಾಯನಿಕ ಬಂಧ. ಇದರಲ್ಲಿ ಜಲಜನಕ ಅತೃಪ್ತ. ಹಾಗಾಗಿ ಅದು “ಇನ್ನೂ ಹೆಚ್ಚಿನದನ್ನು” ಹುಡುಕುತ್ತಿರುತ್ತದೆ.ಆದ್ದರಿಂದ ನೀರು ನೀರನ್ನು ಹುಡುಕುತ್ತದೆ ಮತ್ತು ಹೆಚ್ಚಿನ ಸಾಧ್ಯತೆಗಳಲ್ಲಿ ಪರಸ್ಪರ ಸಂಪರ್ಕ ಸಾಧಿಸುತ್ತದೆ.

ಮೂಲ : ಡಿಜಿಟಲ್ ಮೀಡಿಯಾ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ

ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…

4 hours ago

ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ

ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…

5 hours ago

ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ

ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…

5 hours ago

ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು, ಶಿವಮೊಗ್ಗ, ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ…

12 hours ago

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ

ಅಕ್ರಮವಾಗಿ ಸುಮಾರು 68 ಟನ್‌ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…

1 day ago