Advertisement
Opinion

ಭೂ ಅಂತರ್ಗತ ನೀರಿನ ಒರತೆಗಳು | ಮೇಲ್ಮೈ ಒರತೆ ಮತ್ತು ಶಿಲಾಸ್ತರದ ನಡುವಣ ನೀರು | ಸಮುದ್ರ ಸೇರುವ ನೀರು ವ್ಯರ್ಥವೇ ?

Share

ಭೂ ಅಂತರ್ಗತ ನೀರಿನ ಒರತೆಗಳು(Water spring). ಮುಖ್ಯವಾಗಿ ಎರಡು ವಿಧಗಳು. ಮೊದಲನೆಯದು ಮೇಲ್ಮೈ ಒರತೆಗಳಾದರೆ, ಎರಡನೆಯದು ಶಿಲಾಸ್ತರದ ನಡುವಣ… ಭೂಮಿಯ ಮೇಲ್ಮೈ ರಚನೆ, ಮೇಲ್ಭಾಗದಲ್ಲಿ ಸುಮಾರು ಒಂದಡಿಯಿಂದ ನೂರಾರು ಅಡಿಗಳ ತನಕ, ಕಲ್ಲು(Rock), ಮಣ್ಣು(Soil), ಶೇಡಿ, ಹೊಯ್ಗೆ(Sand) ಕಳಿತ/ ಕಳೆಯುತ್ತಿರುವ ಸಾವಯವ ವಸ್ತುಗಳು(Fossils) ಮತ್ತು ಇವುಗಳ ಮಿಶ್ರಣ.

ಅದರ ಕೆಳಭಾಗದಲ್ಲಿ ಎಲ್ಲಾ ಭೂ ಪ್ರದೇಶಗಳಲ್ಲಿ ಬಿರುಕುಗಳುಳ್ಳ ಶಿಲಾ ಸ್ತರಗಳು. ಆಡುಭಾಷೆಯಲ್ಲಿ ಹಾಸು ಪಾದೆ…ಈ ಹಾಸುಪಾದೆಗಳ ನಡುವೆ ಸುಮಾರು ಒಂದು ತೆಂಗಿನ ಕಾಯಿಯ ಗಾತ್ರದಿಂದ ಹಿಡಿದು ಒಂದೆರಡು ಗ್ರಾಮಗಳಷ್ಟು ದೊಡ್ಡ ಪೊಟರೆಗಳು…ಈ ಹಾಸುಪಾದೆಗಳ ನಡುವೆ ಮತ್ತು ಪೊಟರೆಗಳ ನಡುವೆ ವಿವಿಧ ಗಾತ್ರದ ಬಿರುಕುಗಳು…

ಮಳೆಗಾಲದಲ್ಲಿ ಸುರಿವ ಮಳೆ ನೀರು, ಮೇಲ್ಭಾಗದ ಪದರವನ್ನು ಪೂರ್ಣವಾಗಿ ತೋಯಿಸಿದ ನಂತರ, ಶಿಲಾ ಸ್ತರವನ್ನು ತಲುಪಿ ಅದರ ಕೆಳಗಿನ/ಒಳಗಿನ ಪೊಟರೆಗಳಲ್ಲಿ ಸಂಚಯವಾಗುತ್ತದೆ. ಒಂದು ಹಂತದ ನಂತರ, ಹೆಚ್ಚಿನ ನೀರು ನದಿಗಳ ಮುಖಾಂತರ ಸಮುದ್ರ ಸೇರುತ್ತದೆ.. ಹಾಗಿದ್ದರೆ ಸಮುದ್ರ ಸೇರುವ ನೀರು ವ್ಯರ್ಥವೇ ? ಖಂಡಿತ ಅಲ್ಲ. ಅಗಾಧ ಪ್ರಮಾಣದಲ್ಲಿ ಸಾವಯವ ವಸ್ತುಗಳನ್ನು ಸಮುದ್ರ ಜೀವಿಗಳಿಗೆ ಆಹಾರವಾಗಿ ಒದಗಿಸುವ ನೈಸರ್ಗಿಕ ವ್ಯವಸ್ಥೆ…

ಈಗ, ಮೈಲ್ಮೈ ಕಲ್ಲು ಮಣ್ಣು ಸ್ತರದಲ್ಲಿ ಸಂಚಯವಾಗುವ ನೀರು ಒಂದು ಬಹು ಮುಖ್ಯ ಧಾರಕವನ್ನು ಅವಲಂಬಿಸಿದೆ. ಅದುವೇ ಸಾವಯವ ಇಂಗಾಲ. ಇದು ಮುಖ್ಯವಾಗಿ ಸಸ್ಯಗಳ ಕಾಂಡ ಬೇರು, ತರಗೆಲೆ ಅಥವಾ ಇನ್ನಾವುದೇ ಶರೀರ ಭಾಗ ಆಗಿರಬಹುದು ಅಥವಾ ಪ್ರಾಣಿಜನ್ಯವೂ ಆಗಬಹುದು. ಈ ಸಾವಯವ ಇಂಗಾಲದ ಸಾಂದ್ರತೆಯನ್ನು ಅವಲಂಬಿಸಿ ಆ ಭೂ ಪ್ರದೇಶ ಮಳೆ ನೀರನ್ನು ಹಿಡಿದಿಟ್ಟುಕೊಂಡು ಬೇಸಿಗೆಯಲ್ಲಿ ಒರತೆಗಳ ರೂಪದಲ್ಲಿ ಹರಿಯುತ್ತದೆ..

ಮೇಲ್ಭಾಗದಿಂದ ಕೆಳಗಿಳಿದ ನೀರು ಶಿಲಾಸ್ತರದ ಬಿರುಕುಗಳ ಮೂಲಕ ಕೆಳಗಿನ ಪೊಟರೆಗಳಲ್ಲಿ ಸಂಚಯವಾಗುತ್ತದೆ. ಪೊಟರೆಗಳ ನಡುವೆ ಸೆಲೆಗಳ ಸಂಪರ್ಕ ಇದ್ದರೆ, ನೂರಾರು ಮೈಲು ದೂರವೂ ಸಾಗೀತು…. ಆದ್ದರಿಂದ ನೀವು ಒಂದೊಮ್ಮೆ ಬೋರ್ವೆಲ್ ಮರುಪೂರಣ ಮಾಡಿದರೂ ಆ ನೀರು ಪಕ್ಕದ ಜಿಲ್ಲೆಗೂ ಹರಿದೀತು…ಅಥವಾ ಪೊಟರೆ ಚಿಕ್ಕದಿದ್ದರೆ, ಉಕ್ಕಿ ಹರಿದೀತು. ಓವರ್ ಫ್ಲೋ…..

ಎಲ್ಲರೂ ತಿಳಿದಿರುವಂತೆ ನೀರು, ಆಮ್ಲ ಜನಕ ಮತ್ತು ಜಲಜನಕದ ರಾಸಾಯನಿಕ ಬಂಧ. ಇದರಲ್ಲಿ ಜಲಜನಕ ಅತೃಪ್ತ. ಹಾಗಾಗಿ ಅದು “ಇನ್ನೂ ಹೆಚ್ಚಿನದನ್ನು” ಹುಡುಕುತ್ತಿರುತ್ತದೆ.ಆದ್ದರಿಂದ ನೀರು ನೀರನ್ನು ಹುಡುಕುತ್ತದೆ ಮತ್ತು ಹೆಚ್ಚಿನ ಸಾಧ್ಯತೆಗಳಲ್ಲಿ ಪರಸ್ಪರ ಸಂಪರ್ಕ ಸಾಧಿಸುತ್ತದೆ.

ಮೂಲ : ಡಿಜಿಟಲ್ ಮೀಡಿಯಾ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

9 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

10 hours ago

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…

10 hours ago

ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ

ಶಿರಾಡಿ ಘಾಟ್‌ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…

10 hours ago

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…

21 hours ago

ಭಾರೀ ಮಳೆಯ ಎಚ್ಚರಿಕೆ | ಕರಾವಳಿ ಕರ್ನಾಟಕದಲ್ಲಿ ಅತಿ ಭಾರೀ ಮಳೆ – ಪ್ರವಾಹ- ಭೂಕುಸಿತದ ಎಚ್ಚರಿಕೆ

ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಕೇರಳದಲ್ಲಿ ಇಂದು ಭಾರೀ ಮಳೆಯ…

1 day ago