Advertisement
MIRROR FOCUS

ಕರ್ನಾಟಕದಲ್ಲಿ ಅಂತರ್ಜಲ ಬಳಕೆ ಹೆಚ್ಚಾಗಿದೆ | ದೇಶದಲ್ಲಿ ಕೃಷಿ ಬಳಕೆಗೆ ಹೆಚ್ಚು ಅಂತರ್ಜಲ ಬಳಕೆ | ನೀರಾಶ್ರಯ ಹೆಚ್ಚು ಬಯಸುವ ಅಡಿಕೆಯ ಭವಿಷ್ಯ ಹೇಗೆ ?

Share

2022 ರಲ್ಲಿ ಕರ್ನಾಟಕದಲ್ಲಿ ಅಂತರ್ಜಲ ಬಳಕೆ ಹೆಚ್ಚಾಗಿದೆ. ಕೊಳವೆ ಬಾವಿ ಮರುಪೂರಣವನ್ನು 17.74 ಬಿಸಿಎಂ ಮತ್ತು ವಾರ್ಷಿಕ ಹೊರತೆಗೆಯಬಹುದಾದ ಅಂತರ್ಜಲ ಸಂಪನ್ಮೂಲ 16.04 ಬಿಸಿಎಂ ಆಗಿದೆ ಎಂದು ಡೈನಾಮಿಕ್ ಗ್ರೌಂಡ್ ವಾಟರ್ ರಿಸೋರ್ಸಸ್ ಆಫ್ ಇಂಡಿಯಾ-2022 ವರದಿ ಹೇಳಿದೆ. ದೇಶದಲ್ಲಿ ಕರ್ನಾಟಕ ಕೂಡಾ ಅತೀ ಹೆಚ್ಚು ಕೊಳವೆಬಾವಿಯಿಂದ ಜಲ ಬಳಸುವ ರಾಜ್ಯಗಳಲ್ಲಿ ಒಂದಾಗಿದೆ. ಈಚೆಗೆ ಕೆಲವು ವರ್ಷಗಳಿಂದ ಈ ಬಳಕೆ ಹೆಚ್ಚುತ್ತಲೇ ಇರುವುದು  ಅಪಾಯದ ಸೂಚನೆಯನ್ನು ತಿಳಿಸುತ್ತದೆ. ದೇಶದಲ್ಲಿ ಕೃಷಿ ಕ್ಷೇತ್ರ ಅಧಿಕ ಪ್ರಮಾಣದಲ್ಲಿ ಕೊಳವೆಬಾವಿ ನೀರು ಬಳಕೆ ಮಾಡುತ್ತಿದೆ. ಹೀಗಾಗಿ ಈಗ ನೀರಾಶ್ರಯ ಹೆಚ್ಚಾಗಿ ಬಯಸುವ ಅಡಿಕೆ ವಿಸ್ತರಣೆ ಬಗ್ಗೆ ಗಂಭೀರವಾದ ಚಿಂತನೆ ಅಗತ್ಯ ಇದೆ.

ಕರ್ನಾಟಕದಲ್ಲಿ 2020 ರಲ್ಲಿ 10.63 ಬಿಸಿಎಂ (ಬಿಲಿಯನ್ ಕ್ಯೂಬಿಕ್ ಮೀಟರ್)  ಬಳಕೆ ಇದ್ದರೆ 2022 ರಲ್ಲಿ 11.22 ಬಿಸಿಎಂ ಗೆ  ಹೆಚ್ಚಳವಾಗಿದೆ. ಆದ್ದರಿಂದ, ಅಂತರ್ಜಲ ಹೊರತೆಗೆಯುವಿಕೆಯ ಹಂತವು 2020 ರಲ್ಲಿ 64.85 ಪ್ರತಿಶತದಿಂದ 2022 ರಲ್ಲಿ 69.93 ಪ್ರತಿಶತಕ್ಕೆ ಏರಿದೆ. ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಮಿತಿಮೀರಿದ ಬಳಕೆಯ ಜಿಲ್ಲೆ ಎಂದು ವರ್ಗೀಕರಿಸಲಾಗಿದೆ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳು ಕಡಿಮೆ ಬಳಕೆಯ ಜಿಲ್ಲೆಗಳಾಗಿವೆ.

ದೇಶದಲ್ಲಿ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳು ಅತಿಯಾದ ಕೊಳವೆಬಾವಿ ಬಳಕೆಯ ರಾಜ್ಯಗಳ   ವ್ಯಾಪ್ತಿಯಲ್ಲಿ ಬರುತ್ತವೆ.  ದೆಹಲಿಯು ನಿರ್ಣಾಯಕ ಮಟ್ಟದಲ್ಲಿದೆ. ಅತ್ಯಧಿಕ ಪ್ರಮಾಣದಲ್ಲಿ ಕೊಳವೆ ಬಾವಿಯಿಂದ ನೀರು ತೆಗೆಯಲಾಗುತ್ತಿದೆ.

ಡೈನಾಮಿಕ್ ಗ್ರೌಂಡ್‌ವಾಟರ್ ರಿಸೋರ್ಸಸ್ ಆಫ್ ಇಂಡಿಯಾ, ಇದರ ವರದಿಯ ಪ್ರಕಾರ ಅಂತರ್ಜಲ ಹೊರತೆಗೆಯುವಿಕೆಯ ಮಟ್ಟವು  ತುಂಬಾ ಹೆಚ್ಚಾಗಿದೆ. ಪಂಜಾಬ್‌ನಲ್ಲಿ ಅಂತರ್ಜಲ ಹೊರತೆಗೆಯುವಿಕೆಯ ಹಂತವು 165.99 ಪ್ರತಿಶತದಷ್ಟಿದ್ದರೆ, ರಾಜಸ್ಥಾನದಲ್ಲಿ , ಹರಿಯಾಣದಲ್ಲಿ ಕೂಡಾ ಅದೇ ಹಾದಿಯಲ್ಲಿದೆ. ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುನಲ್ಲಿ ಇದು 157.927 ಮತ್ತು ಶೇಕಡಾ 133.2 ರಷ್ಟಿದೆ.  ಇವೆಲ್ಲವೂ ಅತೀ ಹೆಚ್ಚು ಕೊಳವೆ ಬಾವಿ ಬಳಕೆಯ ವಿಭಾಗದಲ್ಲಿ ಬರುತ್ತದೆ.

ಒಟ್ಟಾರೆಯಾಗಿ, ಭಾರತದಲ್ಲಿ ಅಂತರ್ಜಲದ ಹೊರತೆಗೆಯುವಿಕೆ 2020 ರಲ್ಲಿ 244.92 ಬಿಸಿಎಂ (ಶತಕೋಟಿ ಘನ ಮೀಟರ್) ನಿಂದ 2022 ರಲ್ಲಿ 239.16 ಬಿಸಿಎಂ ಕಡಿಮೆಯಾಗಿದೆ ಎಂದು ವರದಿಯು ಕಂಡುಹಿಡಿದಿದೆ. ಅಂತರ್ಜಲ ಹೊರತೆಗೆಯುವಿಕೆಯ ಒಟ್ಟಾರೆ ಹಂತವು ಸಹ 61.6% ರಿಂದ 60.08 ಕ್ಕೆ ಸ್ವಲ್ಪ ಕಡಿಮೆಯಾಗಿದೆ.

2022 ರಲ್ಲಿ ದೇಶದಲ್ಲಿನ ಒಟ್ಟು ವಾರ್ಷಿಕ ಅಂತರ್ಜಲ ಮರುಪೂರಣವನ್ನು 437.60 ಬಿಸಿಎಂ ಎಂದು ನಿರ್ಣಯಿಸಲಾಗಿದೆ. ವರದಿಯ ಪ್ರಕಾರ, ಭಾರತದಲ್ಲಿ ಅಂತರ್ಜಲ ಸಂಪನ್ಮೂಲಗಳ ಅತಿದೊಡ್ಡ ಬಳಕೆದಾರ ಕೃಷಿ ಕ್ಷೇತ್ರವಾಗಿದೆ. ವರದಿಯ ಪ್ರಕಾರ, 2022 ರಲ್ಲಿ ದೇಶದಲ್ಲಿ ಒಟ್ಟು 239.16 ಬಿಸಿಎಂ ಅಂತರ್ಜಲ ಹೊರತೆಗೆಯುವಿಕೆಯಲ್ಲಿ ಸುಮಾರು 87 ಪ್ರತಿಶತ ನೀರಾವರಿ ಉದ್ದೇಶಗಳಿಗಾಗಿ. ಇದು ಸುಮಾರು 208.49 ಬಿಸಿಎಂ ಅಂತರ್ಜಲವಾಗಿದೆ. ಒಟ್ಟು ಅಂತರ್ಜಲ ಹೊರತೆಗೆಯುವಿಕೆಯ ಶೇಕಡಾ 13, ದೇಶೀಯ ಮತ್ತು ಕೈಗಾರಿಕಾ ಬಳಕೆಗಾಗಿ ಮಾತ್ರಾ ಎಂದು ವರದಿ ಹೇಳಿದೆ.

ಕರ್ನಾಟಕದಲ್ಲಿ ಮಲೆನಾಡು ಬಿಟ್ಟು ಈಗ ವಿಸ್ತರಣೆಯಾಗುತ್ತಿರುವ ಅಡಿಕೆ ಬೆಳೆಯ ಕಡೆಗೆ ಮತ್ತೆ ಕೃಷಿಕರು ಯೋಚನೆ ಮಾಡಬೇಕಿದೆ. ಅಡಿಕೆ ಅತೀ ಹೆಚ್ಚು ನೀರನ್ನು ಬಯಸುವ ಬೆಳೆಯಾಗಿದೆ. ಬಯಲುಸೀಮೆಯಲ್ಲೂ ನೀರಾಶ್ರಯ ಕಡಿಮೆ ಇರುವ ಪ್ರದೇಶಗಳಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಟ್ಯಾಂಕರ್‌ ಮೂಲಕ , ಕೊಳವೆ ಬಾವಿಯ ಮೂಲಕ 800-900 ಅಡಿಕೆ ಕೊರೆದು ತೋಟಕ್ಕೆ ನೀರುಣಿಸುವ ಕಾರ್ಯವೂ ಆರಂಭವಾಗುತ್ತಿದೆ. ಹೀಗಾಗಿ ಈಗಾಗಲೇ ಅಂತರ್ಜಲ ಮಟ್ಟ ಕುಸಿತದ ಭೀತಿಯ ಜೊತೆಗೆ ವ್ಯಾಪಕ ಪ್ರಮಾಣದಲ್ಲಿ ಅಡಿಕೆ ಬೆಳೆ ವಿಸ್ತರಣೆಯಾಗಿರುವ ಈ ಸಂದರ್ಭದಲ್ಲಿ ಮತ್ತೆ ಕೃಷಿಕರು ಯೋಚಿಸುವಂತೆ ಮಾಡಿದೆ ಈ ವರದಿ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ನೈಸರ್ಗಿಕ ಕೃಷಿಗೆ ರಾಜಸ್ಥಾನದ ದೊಡ್ಡ ಹೆಜ್ಜೆ : 32 ಸಂಸ್ಥೆಗಳೊಂದಿಗೆ ಒಪ್ಪಂದ, ರೈತರಿಗೆ ತಂತ್ರಜ್ಞಾನ – ಮಾರುಕಟ್ಟೆ ಬೆಂಬಲ

ನೈಸರ್ಗಿಕ ಕೃಷಿ ಮತ್ತು ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರ 32 ಸಂಸ್ಥೆಗಳೊಂದಿಗೆ…

4 hours ago

ಬಾಂಗ್ಲಾದೇಶದಲ್ಲಿ ಭೀಕರ ಪ್ರವಾಹ – ಭಾರಿ ಮಳೆಯಿಂದ 50 ಕ್ಕೂ ಅಧಿಕ ಮಂದಿ ಸಾವು ; 10 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ

ಬಾಂಗ್ಲಾದೇಶದಲ್ಲಿ ಭಾರೀ ಮಳೆಯಿಂದ 44 ಮಂದಿ ಮೃತಪಟ್ಟಿದ್ದು, 10 ಲಕ್ಷಕ್ಕೂ ಹೆಚ್ಚು ಜನರು…

5 hours ago

ಹವಾಮಾನ ವರದಿ |13-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಜೋರು ಮಳೆ ಇಲ್ಲ

ರಾಜ್ಯದಲ್ಲಿ ಮುಂದಿನ 10 ದಿನಗಳವರೆಗೆ ಜೋರು ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ. ಕರಾವಳಿಯಲ್ಲಿ ಜುಲೈ…

13 hours ago

ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?

ಅಮರನಾಥ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಹಿಮ ಶಿವಲಿಂಗವು 90%ಕ್ಕೂ ಹೆಚ್ಚು ಕರಗಿರುವುದಾಗಿ…

20 hours ago

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ – ಆಸ್ಟ್ರೇಲಿಯಾದ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ ವಿಧಿಸಿರುವ ಆಸ್ಟ್ರೇಲಿಯಾದ ಕ್ರಮವನ್ನು ಪ್ರಧಾನಿ…

1 day ago

ಎಲ್‌ ನಿನೊ ಎಫೆಕ್ಟ್‌ – ಮುಂದಿನ ವರ್ಷ ಮತ್ಸ್ಯೋದ್ಯಮಕ್ಕೆ ಸಂಕಷ್ಟ?

ಎಲ್‌ ನಿನೊ ಪರಿಣಾಮದಿಂದ 2027ರಲ್ಲಿ ಎಣ್ಣೆ ಸಾರ್ಡಿನ್ ಮೀನುಗಳ ಉತ್ಪಾದನೆ ಕುಸಿಯುವ ಸಾಧ್ಯತೆ…

1 day ago