ತೆಂಗು ಉತ್ಪಾದಿಸುವ ಪ್ರಮುಖ ರಾಜ್ಯವಾಗಿ ಬದಲಾಗುತ್ತಿರುವ ಗುಜರಾತ್

December 13, 2025
9:50 PM

ಭಾರತದಲ್ಲಿ ಈಗ ತೆಂಗಿನಕಾಯಿ ರಾಜಧಾನಿ ಬದಲಾಗುತ್ತಿದೆ. ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯ ತೆಂಗಿನಕಾಯಿಯನ್ನು ಪೂರೈಸುವಲ್ಲಿ ಗುಜರಾತ್ ಮುಂದಾಗಿದೆ. ತೆಂಗಿನಕಾಯಿಗಳಿಂದ ತುಂಬಿದ ಟೆಂಪೋಗಳು ಹೆಚ್ಚಾಗಿ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಯುಪಿ ಗೆ ಹೋಗುವುದನ್ನು ಕಾಣಬಹುದು. ಸೋಮನಾಥ್, ಜುನಾಗಢ್, ವಲ್ಸಾದ್ ಮತ್ತು ಭಾವನಗರದ ಮೂಲಕ ಹಾದುಹೋಗುವ NH-51 ರ ಪ್ರದೇಶವನ್ನು ಈಗ ತೆಂಗಿನ ಹೆದ್ದಾರಿ ಎಂದು ಹೇಳಲಾಗುತ್ತಿದೆ.

ಕಳೆದ ಐದು ವರ್ಷಗಳಲ್ಲಿ ಗುಜರಾತ್‌ ನಲ್ಲಿ ಹೆಚ್ಚು ಹೆಕ್ಟೇರ್ ಪ್ರದೇಶಗಳಲ್ಲಿ ತೆಂಗು ಬೆಳೆ ಆರಂಭವಾಗಿದೆ.  ಸ್ವಲ್ಪ ಸಿಹಿಯಾಗಿರುವ ತೆಂಗಿನಕಾಯಿ ಈಗ ತಮ್ಮ ಕರಾವಳಿ ಪ್ರದೇಶದ ಪ್ರಮುಖ ಬೆಳೆ ಎಂದು ರೈತರು ಹೇಳುತ್ತಾರೆ. ಈಗ ತೆಂಗು ಆದಾಯದ ಬೆಳೆಯಾಗಿದ್ದು, ರೈತರಿಗೆ ಲಾಭವೂ ಉತ್ತಮವಾಗಿದೆ.

ಗುಜರಾತ್ ನಲ್ಲಿ ತೆಂಗು ದಿನಾಚರಣೆ:  ಸೆಪ್ಟೆಂಬರ್ 2ರಂದು ವಿಶ್ವ ತೆಂಗು ದಿನವಾಗಿ ಗುಜರಾತ್ ನಲ್ಲಿ ಸಂಭ್ರಮದ ದಿನವೂ ಆಗುತ್ತದೆ. ಈ ವರ್ಷ, ರಾಜ್ಯ ಕೃಷಿ ಸಚಿವ ರಾಘವ್ ಜಿ ಪಟೇಲ್ 2025ರಿಂದ ಗುಜರಾತ್ ನಲ್ಲಿ ತೆಂಗು ಕೃಷಿಯ ಪ್ರದೇಶವು ಸಮಾರು 26% ರಷ್ಟು ಹೆಚ್ಚಾಗಿದೆ ಎಂದು ಹೇಳಿದರು. ಪ್ರಸ್ತುತ ಗುಜರಾತ್ ಪ್ರತಿ ವರ್ಷ 260.09 ಮಿಲಿಯನ್ ತೆಂಗಿನಕಾಯಿಗಳನ್ನು ಉತ್ಪಾದಿಸುತ್ತದೆ. ಅವುಗಳಲ್ಲಿ ಇಪ್ಪತ್ತು ಪ್ರತಿಶತವನ್ನು ಕೊಯ್ದು ಮಾರಾಟ ಮಾಡಲಾಗುತ್ತದೆ. ಸುಮಾರು 40% ತೆಂಗಿನಕಾಯಿಗಳು ಉತ್ತರ ಭಾರತದ ಪ್ರದೇಶಗಳಲ್ಲಿ ಮಾರಾಟವಾಗುತ್ತವೆ. ಸಾರಿಗೆ ವೆಚ್ಚ ಅಗ್ಗವಾಗಿರುವುದರಿಂದ ಉತ್ತರ ಭಾರತದ ಖರೀದಿದಾರರು ಗುಜರಾತ್ ನಿಂದ ತೆಂಗಿನಕಾಯಿಯನ್ನು ಬಯಸುತ್ತಾರೆ.

ಇದು ಹೀಗೆ ಮುಂದುವರಿದರೆ, ಗುಜರಾತ್ ತೆಂಗಿನಕಾಯಿ ಉತ್ಪಾದನೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಪ್ರತಿಸ್ಪರ್ಧಿಯಾಗಬಹುದು. ಎಳನೀರು ಉತ್ಪಾದಿಸುವ ರಾಜ್ಯಗಳು ಅಷ್ಟಾಗಿ ಇಲ್ಲ, ಮತ್ತು ಗುಜರಾತ್ ಈ ಅವಕಾಶವನ್ನು ಪಡೆದುಕೊಂಡು ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿದೆ ಎಂದು ಮಾಹಿತಿ ತಿಳಿಸಿದೆ.

ಕೋವಿಡ್ ಬಂದಾಗ , ದೇಶಾದ್ಯಂತ ಅನೇಕ ವೈದ್ಯರು ರೋಗಿಗಳಿಗೆ ತಂಪು ಪಾನೀಯಗಳ ಬದಲಿಗೆ ತೆಂಗಿನ ನೀರನ್ನು ಕುಡಿಯಲು ಸೂಚಿಸಲು ಪ್ರಾರಂಭಿಸಿದರು. ಈಗ ಆ ಅಭ್ಯಾಸವು ಹಾಗೆಯೇ ಉಳಿಯಿತು. ತೆಂಗಿನ ನೀರು ಅನೇಕರಿಗೆ ನೆಚ್ಚಿನ ಪಾನೀಯವಾಯಿತು ಮತ್ತು ಬೇಡಿಕೆ ಹೆಚ್ಚಾಯಿತು. ಇದರಿಂದ ಕರವಾಳಿಯಲ್ಲಿ ತೆಂಗಿನ ಕೃಷಿಯನ್ನು ಮಾಡಲು ಗುಜರಾತ್‌ನಲ್ಲಿ ಮುಂದಾದರು.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಪಿಎಂ ಯಶಸ್ವಿನಿ ಯೋಜನೆ | ಪರೀಕ್ಷೆ ಇಲ್ಲದೆ ಉಚಿತ ಲ್ಯಾಪ್ ಟಾಪ್ ಹಾಗೂ 3 ಲಕ್ಷ ನೆರವು
December 14, 2025
7:28 AM
by: ರೂರಲ್‌ ಮಿರರ್ ಸುದ್ದಿಜಾಲ
ರಾಜ್ಯದಲ್ಲಿ ಕೋಳಿಗಳಿಗೆ ಹಾರ್ಮೋನ್ ಚುಚ್ಚು ಮದ್ದು ಬಳಸುವಂತಿಲ್ಲ
December 13, 2025
9:36 PM
by: ರೂರಲ್‌ ಮಿರರ್ ಸುದ್ದಿಜಾಲ
ತೆಂಗಿಗೆ ಬೆಂಬಲ ಬೆಲೆ | ಕ್ವಿಂಟಾಲ್ ಗೆ 445 ರೂ ವರೆಗೆ ಹೆಚ್ಚಳ
December 13, 2025
8:47 PM
by: ರೂರಲ್‌ ಮಿರರ್ ಸುದ್ದಿಜಾಲ
ಹವಾಮಾನ ವರದಿ | 13-12-2025 | ತುಂತುರು ಮಳೆಯ ಸಾಧ್ಯತೆ ಇದೆ..! ಕಾರಣ ಏನು..?
December 13, 2025
8:27 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror