ಅಡಿಕೆ ಆಮದು ಪ್ರಕರಣ | ತೆರಿಗೆ ವಂಚನೆಗೆ ನಕಲಿ ಬಿಲ್ ಸೃಷ್ಟಿಸಿದ ಆರೋಪ | ಐವರು ಉದ್ಯಮಿಗಳ ವಿರುದ್ಧ ಪ್ರಕರಣ ದಾಖಲು |

October 28, 2023
9:50 PM
ಬೇರೆ ದೇಶಗಳಿಂದ ಅಡಿಕೆ ಆಮದು ಮಾಡಿಕೊಂಡು , ಸರಕನ್ನು ಅಡಿಕೆಯ ಬದಲಾಗಿ ಸುಳ್ಳು  ಘೋಷಿಸುವ ಮೂಲಕ ಕಸ್ಟಮ್ಸ್ ಸುಂಕವನ್ನು ತಪ್ಪಿಸುತ್ತಿದ್ದರು. ಇದೀಗ  21.48 ಕೋಟಿ ರೂಪಾಯಿ ಮೌಲ್ಯದ ಆಮದು ಮಾಡಿದ ಅಡಿಕೆಯ ಮೇಲಿನ ಕಸ್ಟಮ್ಸ್ ಸುಂಕವನ್ನು ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಮುಂದ್ರಾ ಬಂದರು ಮೂಲಕ ತೆರಿಗೆ ತಪ್ಪಿಸಿ, ನಕಲಿ ಬಿಲ್‌ ಸೃಷ್ಟಿಸಿ ಅಡಿಕೆ ಆಮದು ಮಾಡುತ್ತಿದ್ದ ಪ್ರಕರಣವನ್ನು ಡಿಆರ್‌ಐ  ಪತ್ತೆಮಾಡಿತ್ತು. ಇದೀಗ ನಕಲಿ ಬಿಲ್‌ ಸೃಷ್ಟಿಸಿದ ಐವರು ಉದ್ಯಮಿಗಳ ವಿರುದ್ಧ ಗುಜರಾತ್‌ನ ಕಚ್ ವೆಸ್ಟ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಬೈ ಮೂಲದ ಉದ್ಯಮಿ ಅನಿಲ್ ಪಂಡಿತ್ ಮತ್ತು ಇತರ ಐವರ ವಿರುದ್ಧ  21.48 ಕೋಟಿ ರೂಪಾಯಿ ಮೌಲ್ಯದ ಆಮದು ಮಾಡಿದ ಅಡಿಕೆಯ ಮೇಲಿನ ಕಸ್ಟಮ್ಸ್ ಸುಂಕವನ್ನು ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಆರೋಪಿಗಳು ಅಡಿಕೆಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಂಡು , ಸರಕನ್ನು ಅಡಿಕೆಯ ಬದಲಾಗಿ ಸುಳ್ಳು  ಘೋಷಿಸುವ ಮೂಲಕ ಕಸ್ಟಮ್ಸ್ ಸುಂಕವನ್ನು ತಪ್ಪಿಸುತ್ತಿದ್ದರು. ಇದೀಗ  21.48 ಕೋಟಿ ರೂಪಾಯಿ ಮೌಲ್ಯದ ಆಮದು ಮಾಡಿದ ಅಡಿಕೆಯ ಮೇಲಿನ ಕಸ್ಟಮ್ಸ್ ಸುಂಕವನ್ನು ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇದರ ಜೊತೆಗೆ  ಸರಿಯಾದ ದಾಖಲೆಗಳಿಲ್ಲದೆ ಗೋಡೌನ್‌ನಲ್ಲಿ ಸರಕುಗಳನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿದ್ದರು. ಇದೀಗ ಮುಂದ್ರಾದಲ್ಲಿರುವ  ಗೋಡೌನ್‌ಗೆ ಸೀಲ್‌ ಪೊಲೀಸರು ಸೀಲ್‌ ಮಾಡಿದ್ದಾರೆ.

ಮುಂಬೈ ಮೂಲದ ಉದ್ಯಮಿ ಅನಿಲ್ ಪಂಡಿತ್ ಹಾಗೂ ವ್ಯಾಪಾರ ಪಾಲುದಾರರಾದ ದಿನೇಶ್  ಮತ್ತು ಸುರೇಖಾ ಶೇಠ್  ಮೋಹಿತ್ ಎಂಟರ್‌ಪ್ರೈಸ್‌ನ ಮಾಲಕ ನಾಗಪುರದ ಉದ್ಯಮಿ ಮೋಹಿತ್ , ನಾಗ್ಪುರದ ಹಿಮಾಂಶು ಭಾನುಶಾಲಿ ಮತ್ತು ಮೋಹಿತ್ ಎಂಟರ್‌ಪ್ರೈಸಸ್‌ನ ಮುಂಬೈನ ಮೆಹುಲ್ ಭಾನುಶಾಲಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಫೆಬ್ರವರಿ 2023 ಮತ್ತು ಸೆಪ್ಟೆಂಬರ್ 2023 ರ ನಡುವೆ ಮೋಹಿತ್ ಎಂಟರ್‌ಪ್ರೈಸ್ ತೆರಿಗೆ ಮತ್ತು ಇ-ವೇ ಬಿಲ್‌ಗಳನ್ನು ನಕಲಿ ಮಾಡುವ ಮೂಲಕ ರೂ 21.48 ಕೋಟಿ ಮೌಲ್ಯದ ಅಡಿಕೆಗಳನ್ನು ಮಾರಾಟ ಮಾಡಿದೆ ಎಂದು ಉಲ್ಲೇಖಿಸಲಾಗಿದೆ. ಇತರ ದೇಶಗಳಿಂದ ಅಡಿಕೆಯನ್ನು ಆಮದು ಮಾಡಿ ನಂತರ ಅದನ್ನು ಅನಿಲ್ ಪಂಡಿತ್ ಅವರ ಮುಂದ್ರಾ ಗೋಡೌನ್‌ನಲ್ಲಿ ಸಂಗ್ರಹಿಸುತ್ತಿದ್ದರು. ಹಣವನ್ನು ಗಳಿಸುವ ಉದ್ದೇಶದಿಂದ, ಅವರು ಅದನ್ನು ದೆಹಲಿ, ನಾಗ್ಪುರ ಇತ್ಯಾದಿಗಳಿಗೆ ಕಳುಹಿಸಿ ಮಾರಾಟ ಮಾಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ಇದೀಗ ತನಿಖೆ ನಡೆಯುತ್ತಿದೆ. ಬೃಹತ್‌ ಪ್ರಮಾಣದಲ್ಲಿ ಅಡಿಕೆ ಆಮದು ತಡೆಗೆ ಇದೀಗ ಕ್ರಮವಾಗುತ್ತಿದೆ.

DRI had detected a case of importing arecanuts through Mundra port by evading taxes and creating fake bills. Now the Kutch West Police of Gujarat have registered a case against five businessmen who created fake bills.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ
August 12, 2026
6:58 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ
August 11, 2026
10:31 PM
by: ದ ರೂರಲ್ ಮಿರರ್.ಕಾಂ
ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ
August 11, 2026
9:56 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?
August 11, 2026
9:12 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror