ಕೋವಿ ಠೇವಣಾತಿ | ನ್ಯಾಯಾಲಯದ ಮೆಟ್ಟಿಲೇರಿದ 5 ರಿಟ್ ಅರ್ಜಿದಾರರಿಗೆ ಠೇವಣಾತಿಯಿಂದ ವಿನಾಯಿತಿ

April 3, 2024
12:32 PM

ಚುನಾವಣಾ ಸಮಯದಲ್ಲಿ ಕೃಷಿಕರ ಕೋವಿ ಠೇವಣಾತಿ ಪ್ರಕರಣದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದ ಬೆಳ್ಳಾರೆಯ ಜಯಪ್ರಸಾದ್ ಜೋಶಿ ಸಹಿತ ಐದು  ರಿಟ್ ಅರ್ಜಿದಾರರಿಗೆ ಠೇವಣಾತಿಯಿಂದ‌‌ ವಿನಾಯಿತಿ ಸಿಕ್ಕಿದೆ.

Advertisement

ಬೆಳ್ಳಾರೆ ಜಯಪ ಪ್ರಸಾದ್ ಜೋಶಿ ಮತ್ತಿ ಇತರ 4 ರಿಟ್ ಅರ್ಜಿದಾರರ ಪರ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮೂಲಕ ವಿನಾಯಿತಿ ಸಿಕ್ಕಿದೆ.

ಕಳೆದ ಕೆಲವು ವರ್ಷಗಳಿಂದ ನಡೆದು ಬಂದಂತೆ 2024 ರ ಸಾಲಿನ ಚುನಾವಣೆಗೂ ದೇಶದ ಎಲ್ಲೆಡೆ ಅಂತೆಯೇ
ದಕ್ಷಣಿ ಕನ್ನಡ ಜಿಲ್ಲೆಯ ಎಲ್ಲಾ ಪರವಾನಿಗೆ ಹೊಂದಿರುವ ಶಸ್ತ್ರಾಸ ಗಳನ್ನು ಇಡುವರೇ ಜಿಲ್ಲಾದಂಡಾಧಿಕಾರಿಗಳಿಂದ ಆದೇಶವಾಗಿತು ್ತ. ಅನಿವಾರ್ಯ ಇರುವ ಪರವಾನಿಗೆದಾರರು ವಿನಾಯಿತಿ ಕೋರಿ ಅರ್ಜಿಸಲ್ಲಿಸಬಹುದೆಂದು ಘೋಷಿಸಲ್ಪಟಿ ್ಟತ್ತು. ಆ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪರವಾನಿಗೆದಾರರು ಅರ್ಜಿಸಲ್ಲಿಸಿದ್ದರು. ಬೆರಳೆಣಿಕೆಯ ಅರ್ಜಿಗಳ ವಿನ: ಎಲ್ಲಾ ಅರ್ಜಿಗಳು ಒಂದು ಸಾಮಾನ್ಯ ಆದೇಶದಲ್ಲಿ ತಿರಸ್ಕರಿಸಲ್ಪಟ್ಟಿತು ್ತ.

ನಿರಾಕರಣ ಆದೇಶ ಮತು ್ತ ಪ್ರತಿ ಚುನಾವಣೆಗೆ ಠೇವಣಿ ಇಡುವ ವಿಚಾರ ಪರವಾನಿಗೆದಾರರ ಆಕ್ರೋಶಕ್ಕೆ ಗುರಿಯಾಗಿದೆ.
ಸದ್ರಿ ಆದೇಶವನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ದಿನಾಂಕ 01.04.2024 ರಂದು ರಿಟ್
ಪಿಟಿಶನ್ ಸಂಖ್ಯೆ 9959/2024 ರಂತೆ  ಜಯಪ ್ರಸಾದ್ ಜೋಶಿ ಬೆಳ್ಳಾರೆ ಮತ್ತು ಇತರ 4 ರಿಟ್ ಅರ್ಜಿ ಸಲ್ಲಿಕೆಯಾಗಿತ್ತು.

ಈ ಎಲ್ಲಾ 5 ರಿಟ್ ಅರ್ಜಿಗಳನ್ನು ಜಂಟಿಯಾಗಿ ವಿಚಾರಣೆಗೆ ಮಾನ್ಯ ಕರ್ನಾಟಕ ಉಚ ್ಚ ನ್ಯಾಯಾಲಯ
ಎತ್ತಿಕೊಂಡಿದ್ದು ಈ ಮಧ್ಯೆ ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿ ರಿಟ್ ಅರ್ಜಿ ಸಲ್ಲಿಸಿದವರಿಗೆ ವಿನಾಯಿತಿ ನೀಡಿದೆ.

ಬಂಟ್ವಾಳದ ಮಾಣಿಮೂಲೆ ಗೋವಿಂದ ಭಟ್, ಪುರುಷೋತ್ತಮ‌ ಮಲ್ಕಜೆ‌ ,‌ಸುದರ್ಶನ,‌ಗಿರಿಜಾ‌ಶಂಕರ್ ನ್ಯಾಯಾಲಯದ ಮೊರೆ ಹೋಗಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೀನುಗಾರಿಕಾ ದೋಣಿಯಲ್ಲಿ 450 ಚೀಲ ಅಡಿಕೆ ಪತ್ತೆ | 14 ಜನರ ಬಂಧನ |
April 11, 2025
9:11 PM
by: The Rural Mirror ಸುದ್ದಿಜಾಲ
ಪುತ್ತೂರು ಕ್ಯಾಂಪ್ಕೊ ಶಾಖೆಯಲ್ಲಿ ಮಣ್ಣಿನ ಪರೀಕ್ಷಾ ಯಂತ್ರಕ್ಕೆ ಚಾಲನೆ
April 11, 2025
8:32 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-04-2025 | ಕೆಲವು ಕಡೆ ಗುಡುಗು ಸಹಿತ ಮಳೆ ಸಾಧ್ಯತೆ | ಮುಂದಿನ 10 ದಿನಗಳವರೆಗೂ ಮಳೆ ಅಲ್ಲಲ್ಲಿ ಮಳೆಯ ಸಾಧ್ಯತೆ
April 11, 2025
12:06 PM
by: ಸಾಯಿಶೇಖರ್ ಕರಿಕಳ
2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು
April 11, 2025
7:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group