ಮಳೆಗಾಲದ ಖಾದ್ಯ ಮರಕೆಸು | ಮನೆಯಂಗಳದಲ್ಲಿ ಬೆಳೆದ “ಮರಕೆಸು” | ನಗರದಲ್ಲೂ ಕೆಸುವಿನ ಬೆಳೆಯ “ವಿಶ್ವಾಸ” |

July 21, 2024
11:42 PM
ಮನೆಯ ಅಂಗಳದಲ್ಲಿ ಮರ ಕೆಸು ಅಥವಾ ಕಾಡು ಕೆಸುವನ್ನು ಬೆಳೆಸಿ ಯಶಸ್ವಿಯಾದವರು ಕೆಲವರು. ಅಂತಹ ಪ್ರಯೋಗದಲ್ಲಿ ಯಶಸ್ವಿಯಾದ ವಿಶ್ವಾಸ್‌ ಸುಬ್ರಹ್ಮಣ್ಯ ಕುಕ್ಕುಪುಣಿ ಅವರ 2018 ರಿಂದ ಮನೆಯಂಗಳದಲ್ಲಿ ಕೆಸು ಬೆಳೆಸುತ್ತಿದ್ದಾರೆ.

ಮಳೆಗಾಲದಲ್ಲಿ ಅದರಲ್ಲೂ ವಿಶೇಷವಾಗಿ ಆಟಿ ತಿಂಗಳು ಅಥವಾ ಆಷಾಡ ಮಾಸದಲ್ಲಿ ಮರಕೆಸು ಅಥವಾ ಕಾಡುಕೆಸುವನ್ನು ಆಹಾರವಾಗಿ ಸೇವಿಸಿದರೆ ಉತ್ತಮ ಎನ್ನುವುದು ಹಿಂದಿನಿಂದಲೂ ಬಂದಿರುವ ಮಾತುಗಳು. ಆದರೆ ಈಚೆಗೆ ಮರದಿಂದ ಈ ಕೆಸುವನ್ನು ತೆಗೆಯುವುದೇ ಸಾಹಸ. ಅಂದಕ್ಕೊಂದು ಉಪಾಯ, ಈಗ ಮರಕೆಸು ನೆಲಕ್ಕೆ ಬಂದಿದೆ,  ಮನೆಯಂಗಳಲ್ಲಿ ಈ ಕೆಸುವನ್ನು ಬೆಳೆಯುವುದು ಸಾಧ್ಯವಾಗಿದೆ. ಈ ಪ್ರಯೋಗದಲ್ಲಿ ಯಶಸ್ಸು ಕಂಡವರು ಕೆಲವರು ಇದ್ದಾರೆ. ಅದರಲ್ಲಿ ಬ್ಯಾಂಕ್‌ ಉದ್ಯೋಗಿ ವಿಶ್ವಾಸ್‌ ಸುಬ್ರಹ್ಮಣ್ಯ ಕೂಡಾ ಒಬ್ಬರು.………ಮುಂದೆ ಓದಿ……..

ಮರಕೆಸುವಿನ ಗಿಡದೊಂದಿಗೆ ವಿಶ್ವಾಸ್‌ ಸುಬ್ರಹ್ಮಣ್ಯ ಕುಕ್ಕುಪುಣಿ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಾಸವಾಗಿರುವ ಬ್ಯಾಂಕ್‌ ಉದ್ಯೋಗಿಯಾಗಿರುವ ವಿಶ್ವಾಸ್‌ ಸುಬ್ರಹ್ಮಣ್ಯ ಕುಕ್ಕುಪುಣಿ ಅವರು ಮರಕೆಸುವನ್ನು ತಮ್ಮ ಮನೆಯಂಗಳದಲ್ಲಿ ಬೆಳೆದಿದ್ದಾರೆ. ಮರ ಕೆಸು ಮಳೆಗಾಲದಲ್ಲಿ ಅದರಲ್ಲೂ ಆಷಾಢ ಮಾಸದಲ್ಲಿ ಅಂದರೆ ಆಟಿ ತಿಂಗಳಲ್ಲಿ ವಿಪರೀತ ಬೆಳೆಯುತ್ತದೆ. ಮರದ ಪೊಟರೆಗಳಲ್ಲಿ ಬೇಸಗೆಯ ಕಾಲದಲ್ಲಿ ಇದ್ದು, ಮಳೆ ಬೀಳುತ್ತಲೇ ಚಿಗುರೊಡೆಯುತ್ತದೆ. ಇದನ್ನು ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಮರದಿಂದ ಕೀಳಲಾಗುತ್ತದೆ. ಇದನ್ನು ಕೀಳುವುದೇ ಒಂದು ಸರ್ಕಸ್.‌ ಮರ ಕೆಸು ಬೇಕೆಂದರೂ ಅದನ್ನು ಕೀಳುವ ಕೆಲಸ ಕಠಿಣವಾದ್ದು. ಹೀಗಾಗಿ ಇದು ಮನೆಯಂಗಳದಲ್ಲಿ ಏಕೆ ಬೆಳೆಯಬಾರದು ಎನ್ನುವುದು ಅನೇಕ ಸಮಯದ ಪ್ರಶ್ನೆಯಾಗಿತ್ತು.ಇಂತಹ ಪ್ರಯತ್ನ ಕೆಲವು ಮಾಡಿದ್ದಾರೆ, ಕೆಲವರು ಯಶಸ್ಸು ಕಾಣಲಿಲ್ಲ.

ಮರ ಕೆಸು ಮನೆಯಂಗಳದಲ್ಲಿ ಬೆಳೆಯುವುದು ಅಷ್ಟೊಂದು ಸುಲಭವಲ್ಲ‌, ಆದರೆ ಕೆಲವೊಂದು ಐಡಿಯಾ ಅಳವಡಿಸಿಕೊಂಡರೆ ಸುಲಭವೂ ಹೌದು. ಅದಕ್ಕೊಂದು  ಉಪಾಯಗಳನ್ನು ಅಳವಡಿಸಿಕೊಳ್ಳಬೇಕು. ಈ ಕೆಲಸವನ್ನು ವಿಶ್ವಾಸ್‌ ಸುಬ್ರಹ್ಮಣ್ಯ ಅವರು ಮಾಡಿಕೊಂಡು 2018 ರಿಂದ  ಮನೆಯಂಗಳದಲ್ಲಿ ಬೆಳೆಯುತ್ತಿದ್ದಾರೆ, ಬೆಳೆದು ಯಶಸ್ವಿಯಾಗಿದ್ದಾರೆ.  ಸತತವಾಗಿ ಮರ ಕೆಸವು ಬೆಳೆಯುವ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಕಂಡಿರಲಿಲ್ಲ, 2018 ರ ನಂತರ ಈ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ನಾಟಿಗೆ ಸಿದ್ಧವಾಗಿರುವ ಮರಕೆಸು

ಇದನ್ನು ಬೆಳೆಯಲು ಕೋಕೋ ಪೀಟ್‌ ಅಥವಾ ಮರದ ತುಂಡುಗಳನ್ನು ಬಳಕೆ ಮಾಡಿದ್ದಾರೆ. ಒಂದು ವರ್ಷಗಳ ಕಾಲ ಮಳೆ-ಬಿಸಿಲಿಗೆ ಒಡ್ಡಿಕೊಂಡಿದ್ದ ಮರದ ತುಂಡುಗಳು ಅಥವಾ ಮರದ ಹುಡಿಯನ್ನು ಬಳಕೆ ಮಾಡಬಹುದು ಅಥವಾ ತೆಂಗಿನ ನಾರನ್ನೂ ಬಳಕೆ ಮಾಡಿ ಮರ ಕೆಸುವಿನ ಗೆಡ್ಡೆಗಳ ಜೊತೆ ಹೂಕುಂಡದಲ್ಲಿ ಹಾಕಿ ಇರಿಸಬೇಕು. ಬೇಸಗೆ ಕಳೆದು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕೆಸುವು ಚಿಗುರೊಡೆದು ಬೆಳೆಯಲು ಆರಂಭವಾಗುತ್ತದೆ. ಸಾಮಾನ್ಯ ಸೆಪ್ಟಂಬರ್‌ -ಅಕ್ಟೋಬರ್‌ವರೆಗೂ ಎಲೆಗಳು ಇದ್ದು ನಂತರ ಕೋಡು ಬಂದು ಎಲೆಗಳು ಸಾಯುತ್ತವೆ, ಮುಂದಿನ ಮಳೆಗಾಲಕ್ಕೆ ಸಜ್ಜಾಗುತ್ತದೆ. ಪುನಃ ಸೃಷ್ಟಿಯಾಗುವ ಗೆಡ್ಡೆಗಳನ್ನು ಇನ್ನೊಂದು ಕುಂಡದಲ್ಲಿ ಹಾಕಿ ಗಿಡಗಳನ್ನು ಬೇಕಾದಷ್ಟು ವೃದ್ಧಿಸಿಕೊಳ್ಳಬಹುದು ಎನ್ನುತ್ತಾರೆ ವಿಶ್ವಾಸ ಸುಬ್ರಹ್ಮಣ್ಯ.

ಹೂಕುಂಡದಲ್ಲಿ ಬೆಳೆದಿರುವ ಮರಕೆಸು

ಹೀಗೆ ನಾಟಿ ಮಾಡಿದ ಕೆಸುವು ಜೂನ್‌ ಆರಂಭದಿಂದ ಅಂದರೆ ಮಳೆ ಆರಂಭವಾದ ಬಳಿಕ ಬೆಳೆಯಲು ಆರಂಭವಾಗುತ್ತದೆ, ಸೆಪ್ಟಂಬರ್‌ವರೆಗೆ ಸುಮಾರು 4-5 ಬಾರಿ ಆಹಾರಕ್ಕಾಗಿ ಬಳಕೆ ಮಾಡಬಹುದು. ಮಳೆ ಹೆಚ್ಚಾದಾಗ ಮಳೆಯಿಂದ ತಪ್ಪಿಸಿ ಛಾವಣಿ ಅಡಿಯಲ್ಲಿ ಇರಿಸಬೇಕು, ಆರಂಭದ ಮಳೆ ಈ ಕುಂಡದ ಮೇಲೆ ಬೀಳಬೇಕು, ಒಣಗಿದ ಸೆಗಣಿ ಗೊಬ್ಬರ ಸೇರಿದಂತೆ ಮರದ ಹುಡಿಯನ್ನೇ ಹೆಚ್ಚಾಗಿ ಬಳಕೆ ಮಾಡಬೇಕು ಇತ್ಯಾದಿ ಕೆಲವು ಸೂಕ್ಷ್ಮ ಸಂಗತಿಗಳು ಇಲ್ಲಿ ಗಮನಿಸಬೇಕಾದ ಅಂಶಗಳು ಎಂದು ಎಚ್ಚರಿಸುತ್ತಾರೆ ವಿಶ್ವಾಸ್‌. ಕೀಟ ಬಾಧೆಗಳು ತುಂಬಾ ಕಡಿಮೆಯಾಗಿದೆ, ಹೀಗಾಗಿ ಗಮನ ಇರಬೇಕಾದ್ದು ಮಳೆಯದ್ದು ಮಾತ್ರಾ.………ಮುಂದೆ ಓದಿ……..

Advertisement

ಈ ಕೆಸುವು ಆಯುರ್ವೇದದ ಪ್ರಕಾರ ಆರೋಗ್ಯ ಬಹಳ ಉತ್ತಮ ಎಂದು ಹೇಳಲಾಗುತ್ತಿದೆ. ಇದು ಮಳೆ ಬಂದ ನಂತರ ಹುಟ್ಟಿಕೊಂಡು ಬೆಳೆದು ಮಳೆ ಮುಗಿಯುವಾಗ ಮರೆಯಾಗುತ್ತದೆ. ಈ ಅವಧಿಯಲ್ಲಿ ಎಲೆಗಳು ದೊಡ್ಡದಾಗಿ ಬೆಳೆಯುವ ಆಷಾಢ ಮಾಸದಲ್ಲಿ ಇದರ ಖಾದ್ಯ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ.

ಉತ್ತಮವಾದ ಎಲೆಗಳೊಂದಿಗೆ ಬೆಳೆ

ಮರ ಕೆಸು, ಕಾಡುಕೆಸು  ಇತ್ಯಾದಿ ಹೆಸರಿನಿಂದ ಇದನ್ನು ಕರೆಯಲಾಗುತ್ತದೆ. ಇದು ಕಾಡಿನಲ್ಲಿ ಮರಗಳನ್ನು ಆಶ್ರಯಿಸಿ ಬೆಳೆಯುವ ಕಾರಣ ಇದಕ್ಕೆ ಈ ಹೆಸರು.  ಮರದ ಪೊಟರೆ, ಸಂದುಗಳಲ್ಲಿ ಅಂಟಿಕೊಂಡು ಇದು ಬೆಳೆಯುತ್ತದೆ. ಅಲ್ಲೇ ಬೆಳೆದು, ಅಲ್ಲೇ ಬೀಜ ಪಸರಿಸಿ ವಂಶಾಭಿವೃದ್ಧಿಯಾಗುತ್ತದೆ. ಇದನ್ನೇ ಅಂದರೆ ಇದೇ ವಾತಾವರಣವನ್ನು ಮನೆಯಂಗಳದಲ್ಲಿ ಸೃಷ್ಟಿಸುವ ಮೂಲಕ ಮನೆಯಂಗಳದಲ್ಲಿ ಕೂಡಾ ಈ ಕೆಸುವು ಬೆಳೆಯುವ ಪ್ರಯೋಗ ಈಗ ಯಶಸ್ಸಾಗಿದೆ.

 

Advertisement

The mara kesu plant thrives during the rainy season, particularly in the month of Ashadha, also known as Aati. It is typically kept in wooden pots during the summer and starts to sprout when it rains. In rural areas, it is usually harvested from trees, which can be a challenging task. As a result, many people wonder why it is not commonly grown at home.

Growing mara kesu indoors can be challenging, but with the right strategies, it can be done successfully. Vishwas Subrahmanya has been growing mara kesu at home since 2018, achieving success in this endeavor. Although previous attempts to grow tree dung were not entirely successful, he has now been successful in growing it since 2018.

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ
ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror