ತಲೆಬೆಶಿ

October 19, 2020
11:18 AM
ದಿನ ಉದಿಯಾದರೆ ಎನಗದು ತಲೆಬೆಶಿ
ಮಧ್ಯಾಹ್ನದ ಊಟಕೆ‌ ಎಂತಕ್ಕು
ತರಕಾರಿ ತಂದದು ಮುಗುದು ಹೋಗಿದ್ದರೆ
ಖಾರದ ಚಟ್ನಿಯ ಮಾಡ್ಳಕ್ಕು…. ||
ದಿನ ಇರುಳಾದರೆ ಮತ್ತದೇ ತಲೆಬೆಶಿ
ನಾಳಂಗೆ ಕಾಪಿಗೆ ಎಂತಕ್ಕು
ಅಕ್ಕಿಯ ನೀರಿಂಗೆ ಹಾಕುಲೆ ಮರದರೆ
ಹೆಜ್ಜೆಯ ಊಟವೆ ಲಾಯ್ಕಕ್ಕು…..||
ಸಜ್ಜಿಗೆ ಮಾಡಿರೆ ಹೊಟ್ಟೆಗೆ ಆವುತ್ತಿಲ್ಲೆ
ಅವಲಕ್ಕಿಯಂತೂ ಗಾಸ್ಟ್ರಿಕ್ಕು
ಇಡ್ಲಿಯ ಕಂಡರೆ ಮನೆಯವಕ್ಕಾವುತ್ತಿಲ್ಲೆ
ಹುಳಿದೋಸೆ ತಿಂದರೆ ಜಡ ಅಕ್ಕು… ||
ಸೇಮಗೆ ಮಾಡಿರೆ ಕಾಯಿಹಾಲು ಆಯೆಕ್ಕು
ಮೆಂತೆ ಸಾಂಬಾರು ಒಟ್ಟಿಂಗಿರೆಕ್ಕು 
ಉಂಡೆಯ ಮಾಡಿರೆ ಮೋರೆ ಬೀಗುತ್ತು
ಮನೆದೇವರು ತೆಳ್ಳವು ಎಲ್ಲೋರಿಂಗಕ್ಕು… ||
ಮನೆಯವಕ್ಕೆ ಬೇಕಾದ್ದು ಮಾಡಿ ಕೊಟ್ಟರೆ
ಚಪ್ಪರ್ಸಿ ತಿಂಬಲೆ ಖುಷಿ ಅಕ್ಕು
ಮನೆಯಾಕೆಗೆ ಚೂರು ಸಹಕಾರ ನೀಡಿರೆ
ಸೊಂಟ ಸೋಬಾನ ಆಗದ್ದೆ ಇಕ್ಕು…||
# ರೂಪಾಪ್ರಸಾದ ಕೋಡಿಂಬಳ

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕುಂಭಸ್ನಾನ ಮತ್ತು ವಿಜ್ಞಾನ
February 27, 2025
9:25 PM
by: ಡಾ.ಚಂದ್ರಶೇಖರ ದಾಮ್ಲೆ
“ನದಿ ಮತ್ತು ಪರಿಸರ” ಶುದ್ಧತೆ ಉಳಿಸಿಕೊಳ್ಳಬೇಕಾದರೆ ಭಾವನಾತ್ಮಕವಾಗಿ ಅಷ್ಟೇ ಕನೆಕ್ಟ್‌ ಆಗಬೇಕಾದ್ದಲ್ಲ…
February 26, 2025
8:21 AM
by: ಮಹೇಶ್ ಪುಚ್ಚಪ್ಪಾಡಿ
ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?
February 24, 2025
9:25 PM
by: ರಮೇಶ್‌ ದೇಲಂಪಾಡಿ
ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror