Advertisement
ಸುದ್ದಿಗಳು

ಎಲೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಲಾಭ | ಮಲೆನಾಡಿನ ಮನೆಯ ಸಂಪ್ರದಾಯ

Share

ಹಳ್ಳಿಯ ಜನರು ಎಲೆ ಅಡಿಕೆ ಸವಿಯುವುದು ಸಾಮಾನ್ಯ. ಅದರಲ್ಲಿ ಮುಖ್ಯವಾಗಿ ಭಾರತದಲ್ಲಿ ಶುಭ ಸಮಾರಂಭಗಳಲ್ಲಿ ಊಟದ ನಂತರ ಎಲೆ ಅಡಿಕೆ ನೀಡುತ್ತಾರೆ. ಅದಾಗ್ಯೂ ಈ ಎಲೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ದೌರ್ಬಲ್ಯ, ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆ ನಿವಾರಣೆಗೆ ಎಲೆ ಅಡಿಕೆ ಸೇವನೆ ತುಂಬಾ ಪ್ರಯೋಜಕಾರಿ.

ಅಡಿಕೆಯಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು ಎಂದು ಸಾಬೀತಾಗಿದೆ.ಗಾಯ ಗುಣ ಮಾಡಲು ಹಲ್ಲು ಗಟ್ಟಿ ಮಾಡಲು ಜೀರ್ಣಶಕ್ತಿ ಹೆಚ್ಚಿಸಲು ಅದೇ ಏಕೆ ಕ್ಯಾನ್ಸರ್ ರೋಗ ನಿರೋಧಕಕ್ಕೆ ಮತ್ತು ಕ್ಯಾನ್ಸರ್ ಗುಣ ಮಾಡಲು ಸಹ ಹೊರಗೆ ಹಚ್ಚಲು ಮತ್ತೆ ಹೊಟ್ಟೆಗೆ ತೆಗೆದುಕೊಳ್ಳಲು, ಉಪಯೋಗಿಸುವುದಕ್ಕೆ ಬರುತ್ತದೆ. ಎಲೆ ಕ್ಯಾಲ್ಸಿಯಂ ದೇಹಕ್ಕೆ ಬೇಕಾಗುವಷ್ಟು ಒದಗಿಸುತ್ತದೆ ಜೊತೆಯಲ್ಲಿ ಕಫ ನೀರಾಗುತ್ತದೆ. ವೀಳ್ಯದೆಲೆ ಜೀರ್ಣಕಾರಿ. ನಮ್ಮಲ್ಲಿ ದೃಷ್ಟಿ ತೆಗೆಯಲು ಕಫನಿರಾಗಿಸಲು ಅರಿಶಿಣ ಕುಂಕುಮದ ಜೊತೆಯಲ್ಲಿ ಹೀಗೆ ಹತ್ತು ಹಲವರು ಶುಭಕಾರ್ಯಗಳಲ್ಲಿ ಎಲೆ ಅಡಿಕೆ ಸಂಪ್ರದಾಯ ಇದ್ದೇ ಇರುತ್ತದೆ. ಹಿಂದಿನ ನಾರನ್ನು ತೆಗೆದು ಉಪಯೋಗಿಸುವುದು ಒಳ್ಳೆಯದು ತೊಟ್ಟು ಅಥವಾ ಡೇಟು ಮತ್ತು ಎಲೆಯ ತುದಿಯ ಭಾಗವನ್ನು ತೆಗೆದು ಸಾಧಾರಣವಾಗಿ ಉಪಯೋಗಿಸುತ್ತಾರೆ.

ಹೊಟ್ಟೆ ಸಂಬಂಧಿತ ಸಮಸ್ಯೆ ನಿವಾರಣೆಗೆ ಎಲೆ, ಅಡಿಕೆ ಸೇವನೆ ತುಂಬಾ ಪ್ರಯೋಜನಕಾರಿ. ವೀಳ್ಯದೆಲೆ ಜತೆಗೆ ಅಡಿಕೆ ಸೇವಿನೆಯಿಂದ ಕರುಳು ಸಂಬಂಧಿತ ರೋಗಗಳನ್ನು ತಡೆಗಟ್ಟಬಹುದು. ಹಾಗೆಯೇ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೆ, ವೀಳ್ಯದೆಲೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅರ್ಧ ಗಂಟೆ ಕುದಿಸಿ. ನಂತರ ಆ ನೀರನ್ನು ಕುಡಿಯಿರಿ. ಕೆಲವೇ ಗಂಟೆಗಳಲ್ಲಿ ಇದು ನಿಮ್ಮ ಹೊಟ್ಟೆ ನೋವಿನ ಸಮಸ್ಯೆಯನ್ನು ನಿವಾರಿಸುತ್ತದೆ.

ನಿಮಗೆ ಮಲಬದ್ಧತೆಯ ಸಮಸ್ಯೆ ಇದ್ದರೆ, ನೀವು ವೀಳ್ಯದೆಲೆಯನ್ನು ಸೇವಿಸಬೇಕು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅನೇಕ ಜನರಿಗೆ ಅಲ್ಸರ್ ಸಮಸ್ಯೆ ಬಹಳ ಕಾಡುತ್ತಿರುತ್ತದೆ. ಹಾಗಿರುವಾಗ ವೀಳ್ಯದೆಲೆ ಸೇವನೆಯಿಂದ ಹುಣ್ಣುಗಳ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ವೀಳ್ಯದೆಲೆ ಹಲ್ಲುಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವೀಳ್ಯದೆಲೆಯಿಂದ ಪುಡಿ ತಯಾರಿಸಿ ಅದರಿಂದ ಹಲ್ಲುಗಳಿಗೆ ಮಸಾಜ್ ಮಾಡಿ ಇದರಿಂದ ನಿಮ್ಮ ಹಲ್ಲುನೋವು ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ವೀಳ್ಯದೆಲೆ ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಚರ್ಮದ ಮೇಲೆ ಯಾವುದೇ ಗಾಯವಾಗಿದ್ದರೆ, ಗಾಯವನ್ನು ಗುಣಪಡಿಸಲು ವೀಳ್ಯದೆಲೆ ಸಹಾಯಕ.

ನೀವು ಬೆನ್ನು ನೋವು, ತಲೆ ನೋವು, ಕೀಲು ನೋವಿನಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ವೀಳ್ಯದೆಲೆ ಸೇವಿಸಬಹುದು. ವೀಳ್ಯದೆಲೆ ಔಷಧೀಯ ಗುಣಗಳನ್ನು ಹೊಂದಿದೆ. ಇದು ನಿಮ್ಮ ಸ್ನಾಯುವಿನ ಬಲವನ್ನು ಹೆಚ್ಚಿಸುತ್ತದೆ.

ಮಲೆನಾಡಿನ ಮನೆಗಳಲ್ಲಿ ಕವಳದ ಬಟ್ಟಲು ಇರಲೇಬೇಕು. ಇದು ಸಾಮರಸ್ಯದ ಸಂಕೇತ. ಕವಳ ಮೆಲ್ಲುತ್ತಾ ಮಾತನಾಡುವುದು ಮಲೆನಾಡಿನ ಸಂಪ್ರದಾಯ. ಆದರೆ ಇದರ ಜೊತೆಯಲ್ಲಿ ಸ್ವಲ್ಪ ಸುಣ್ಣವನ್ನು ಉಪಯೋಗಿಸಬೇಕು. ಸುಣ್ಣವಿಲ್ಲದೆ ಎಲೆ ಅಡಿಕೆ ಹಾಕುವುದರಿಂದ ಬಾಯಿ ಮತ್ತು ತುಟಿ ಬಿಳಿಚಿ ಹೋಗುತ್ತದೆ. ಹೆಚ್ಚಾದರೆ ಕಾಮಾಲೆ ಬರುತ್ತದೆ. ಸುಣ್ಣವಿಲ್ಲದ ವೀಳ್ಯ ಬಣ್ಣವಿಲ್ಲದ ಮದುವೆ ಹೆಣ್ಣಿಲ್ಲದವನ ಮನೆವಾರ್ತೆ, ಮರಳೊಳಗೆ ಎಣ್ಣೆ ಹೊಯ್ದಂತಕ್ಕೂ ಸರ್ವಜ್ಞ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

7 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

15 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

20 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago