Advertisement
ಸುದ್ದಿಗಳು

ಅಜೀರ್ಣ ಸಮಸ್ಯೆಗಳಿಗೆ ಕೆಲವು ಮನೆಮದ್ದು

Share

ಕಾರ್ಯಕ್ರಮಗಳ ಮೇಲೆ ಕಾರ್ಯಕ್ರಮವಾದರೆ ಹೊಟ್ಟೆಯ ಸಂಕಷ್ಟ ಹೇಳತೀರದು. ಆಹಾರದ ವ್ಯತ್ಯಾಸವಾದರೆ ಅಜೀರ್ಣವೂ ಗ್ಯಾರಂಟಿ. ಮನೆಯಲ್ಲೂ  ಊಟದ ಸಮಯ ತಪ್ಪಿ ತಿಂದರೆ ಸಾಕು ಅಜೀರ್ಣ. ಈ ಅಜೀರ್ಣಕ್ಕೆ ಏನು ಮದ್ದು.. ಮನೆಯಲ್ಲೇ ಏನು ಮಾಡಬಹುದು..?

  1. ಜೀರಿಗೆ ನೀರು ಕುಡಿಯುವುದು: ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆ ಹಾಕಿ ಕುದಿಸಿ. ತಣ್ಣಗಾದ ನಂತರ ನಿಧಾನವಾಗಿ ಕುಡಿಯಿರಿ.ಜೀರಿಗೆಯಲ್ಲಿರುವ ಥೈಮೋಲ್ ಕಿಣ್ವಗಳನ್ನು ಉತ್ತೇಜಿಸಿ ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದನ್ನು ವಾರದಲ್ಲಿ ಎರಡು ಸಲ ಕುಡಿಯುವುದು ಉತ್ತಮ.
  2. ಶುಂಠಿ ಮತ್ತು ಜೇನು : ಸಣ್ಣ ಶುಂಠಿ ತುಂಡನ್ನು ಜಜ್ಜಿ ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿ. ಶುಂಠಿಯು ಜಠರದ ಚಲನೆಯನ್ನು ಸುಧಾರಿಸಿ, ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರಿಂದ ಅಜೀರ್ಣವನ್ನು ತಡೆಯಲು ಸಾಧ್ಯ.
  3. ಓಮದ ಕಾಳು: ಓಮದ ಕಾಳು ಹೊಟ್ಟೆ ಸಂಬಂಧಿತ ಕಾಯಿಲೆಗಳಿಗೆ ಹೇಳಿ ಮಾಡಿಸಿದ ಮದ್ದು, ಅರ್ಧ ಚಮಚ ಓಮದ ಕಾಳುಗಳನ್ನು ಬಾಯಿಗೆ ಹಾಕಿ ಚೆನ್ನಾಗಿ ಅಗಿಯಿರಿ. ಅಥವಾ ಸ್ವಲ್ಪ ಉಪ್ಪಿನೊಂದಿಗೆ ಬೆರೆಸಿ ಬಿಸಿ ನೀರು ಕುಡಿಯಿರಿ. ಇದು ಥೈಮೋಲ್‍ನ ಹೆಚ್ಚಿ ಸಾಂದ್ರತೆಯಿಂದಾಗಿ ಗ್ಯಾಸ್‍ಗೆ ತ್ವರಿತ ಪರಿಹಾರ ನೀಡುತ್ತದೆ.
  4. ಮಜ್ಜಿಗೆ ಮತ್ತು ಕರಿಮೆಣಸು: ಸೆಕೆ ಇರುವ ಬಿಸಿಲಿನಿಂದ ಮನೆಗೆ ಬಂದಾಗ ಒಂದು ಲೋಟ ಮಜ್ಜಿಗೆ ಕುಡಿದರೆ ಸಾಖು ದೇಹ ತಂಪಾಗುತ್ತದೆ. ಇದು ಅಜೀರ್ಣಗೂ ಹೇಳಿ ಮಾಡಿದೆ ಮದ್ದು. ಒಂದು ಲೋಟ ಮಜ್ಜಿಗೆಗೆ ಚಿಟಿಕೆಯಷ್ಟು ಕರಿಮೆಣಸಿನ ಪುಡಿ ಸೇರಿಸಿದರೆ ಸಾಕು ಜೀರ್ಣಕ್ರಿಯೆ ಸುಧಾರಿಸುತ್ತದೆ.
  5. ಫೆನ್ನೆಲ್ ಬೀಜಗಳು: ಎಲ್ಲ ಹೋಟೆಲ್ ಗಳಲ್ಲಿ ಊಟ ಆದ ನಂತರ ಬಿಲ್ ನೊಂದಿಗೆ ಸೋಂಪನ್ನು ಕೊಡುತ್ತಾರೆ. ಏಕೆಂದರೆ ಇದು ಬಾಯಿಯ ದುರ್ಗಂಧವನ್ನು ಹೊಗಲಾಡಿಸುತ್ತದೆ ಮತ್ತು ಜೀರ್ಣಾಕ್ರಿಯೆಯನ್ನು ಸರಿಪಡಿಸುತ್ತದೆ. ಆದುದರಿಂದ ದಿನಲೂ ಮನೆಯಲ್ಲಿ ಊಟದ ನಂತರ ಸೋಪು ಸೇವನೆ ಉತ್ತಮ.
  6. ಬೆಲ್ಲ: ಊಟದ ನಂತರ ಸಣ್ಣ ತುಂಡು ಬೆಲ್ಲ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಯಾವಾಗಲೂ ಊಟ ಆದ ತಕ್ಷಣ ಮಲಗಬಾರದು. ಇದರಿಂದ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಆದುದರಿಂದ ಸ್ವಲ್ಪ ವಾಕಿಂಗ್ ಮಾಡುವುದು ಉತ್ತಮ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

2 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

11 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

15 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago