ಬೇರೆ ಬೇರೆ ದೇಶಗಳಿಗೆ ಇರುವಂತೆ ಸ್ವರ್ಗಕ್ಕೂ ಇದೆ ವಿಶೇಷ ಕರೆನ್ಸಿ..! | ಯಾವುದು ಅದು..?

December 14, 2023
11:56 AM

ಒಬ್ಬ ಅತಿಯಾದ ಶ್ರಿಮಂತ(Rich man) ಇದ್ದ. ಅವನು ಧರ್ಮದ(Dharma) ಮೇಲೆ ನಂಬಿಕೆಯನ್ನೂ ಇಟ್ಟಿದ್ದ. ಅವನಿಗೆ 10-15 ಕಂಪೆನಿ(Company)ಹಾಗೂ ಬೇರೆ ಬೇರೆ ವ್ಯವಹಾರ(Business) ಇತ್ತು. ಸಾವಿರಾರು ಜನರು, ಅವನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಕಾರಿನಲ್ಲಿ ಹೋಗುವಾಗ, ರೇಡಿಯೋದಲ್ಲಿ(Radio) ಯಾರೋ ಸ್ವಾಮಿಗಳು, “ಸತ್ತಾಗ, ಮೇಲೆ ಹೋಗುವಾಗ, ಮನುಷ್ಯ(Human), ಅವನ ಸಂಪತ್ತನ್ನು(Wealth) ಮೇಲೆ ಕೊಂಡು ಹೋಗಲು ಸಾಧ್ಯ ಇಲ್ಲ” ಹೇಳುವುದನ್ನು ಕೇಳಿದ. ಹಾಗೆ, ಅವನ ಕಚೇರಿ(Office) ತಲುಪುತ್ತಲೇ, ಅವನಿಗೆ ಒಂದು ಉಪಾಯ ಹೊಳೆಯಿತು.

Advertisement
Advertisement

ತನ್ನ ಎಲ್ಲಾ ಕಂಪೆನಿಯ ನೋಟೀಸ್ ಬೋರ್ಡ್ ನಲ್ಲಿ, ಹೀಗೆ ಬರೆದು ಹಾಕಿದ “ನನಗೆ ಯಾರಾದರೂ, ನನ್ನ ಸಂಪತ್ತನ್ನು, ಸತ್ತಾಗ, ಮೇಲೆ ಸ್ವರ್ಗಕ್ಕೆ ಕೊಂಡು ಹೋಗುವ ಉಪಾಯ ತಿಳಿಸಿದರೆ, ಅವರಿಗೆ 5 ಕೋಟಿ ರುಪಾಯಿ ಬಹುಮಾನ ಕೊಡುವೆನು.” ತಿಂಗಳು ಕಳೆದರೂ, ಯಾರೂ ಉಪಾಯ ಹೇಳಲು ಬರಲಿಲ್ಲ. ಶ್ರೀಮಂತನಿಗೆ ನಿರಾಶೆ ಆಯಿತು. ಆದರೆ, ಒಂದು ದಿನ, ಒಬ್ಬ ಭಿಕ್ಷುಕ(Bugger), ಅವನ ಕಚೇರಿಗೆ ಬಂದು, ತಾನು ಉಪಾಯ ತಿಳಿಸುತ್ತೇನೆ ಎಂದು ಹೇಳಿದ. ಶ್ರೀಮಂತನಿಗೆ ತುಂಬಾ ಆತುರ ಆಯಿತು. ಭಿಕ್ಷುಕ, ಶ್ರೀಮಂತನಿಗೆ ಕೇಳಿದ, ಒಡೆಯಾ, ನೀವು ಅಮೇರಿಕಾ, ಇಂಗ್ಲೆಂಡ್ ಅಥವಾ ಜಪಾನಿಗೆ ಹೋದಾಗ, ಅಲ್ಲಿ, ಭಾರತದ ರುಪಾಯಿ ಉಪಯೋಗಿಸುವಿರಾ ? ಶ್ರಿಮಂತ ಉತ್ತರಿಸಿದ, ಇಲ್ಲ. ಅಮೇರಿಕಾದಲ್ಲಿ ಡಾಲರ್, ಇಂಗ್ಲೆಂಡ್ನಲ್ಲಿ ಪೌಂಡ್, ಜಪಾನಿನಲ್ಲಿ ಯೆನ್ನ್ ಉಪಯೋಗ ಮಾಡ ಬೇಕಾಗುವುದು. ಅಲ್ಲಿಯ ಹಣ(ಕರೆನ್ಸಿ) ಬೇರೆ.

ಭಿಕ್ಷುಕ ಹೇಳಿದ, ಹಾಗಾದರೆ, ಭಾರತದಲ್ಲಿ ಉಪಯೋಗಿಸಿದ ರೂಪಾಯಿಯನ್ನು , ಸ್ವರ್ಗ ಲೋಕದಲ್ಲಿ ಉಪಯೋಗಿಸಲು ಸಾಧ್ಯವೇ ? ಅದು ಕೂಡಾ, ಬೇರೆಯೇ ಲೋಕ. ಸ್ವರ್ಗದ ಕರೆನ್ಸಿಯೇ ಬೇರೆ. ನಿಮ್ಮ ಸಂಪತ್ತನ್ನು, ಆ ಕರೆನ್ಸಿಯಲ್ಲಿ ಬದಲಾವಣೆ ಮಾಡಿ, ಸಾಯುವಾಗ, ತೆಗೆದು ಕೊಂಡು ಹೋಗ ಬೇಕಲ್ಲವೇ ? ಶ್ರೀಮಂತನಿಗೆ, ಕುತೂಹಲ ಇನ್ನೂ ಹೆಚ್ಚಾಯಿತು. ಅವನು ಭಿಕ್ಷುಕನಿಗೆ ಹೇಳಿದ, ಸುಮ್ಮನೆ ಸಮಯ ವ್ಯರ್ಥ ಮಾಡಬೇಡ, ಬೇಗ, ಸ್ವರ್ಗದ ಕರೆನ್ಸಿ ಏನು ಎಂದು ಹೇಳು.

ಭಿಕ್ಷುಕ ಹೇಳಿದ, ಸ್ವರ್ಗದಲ್ಲಿ, “ಪುಣ್ಯ” ಎಂಬ ಕರೆನ್ಸಿ ನಡೆಯುವುದು. ಭೂಮಿಯಲ್ಲಿ, ನಿನ್ನ ಸಂಪತ್ತಿನಿಂದ ಪುಣ್ಯವನ್ನು ಸಂಪಾದಿಸು, ಅದರಿಂದ ನೀನು ಸ್ವರ್ಗದಲ್ಲಿ ಸಂತೋಷವಾಗಿ ವ್ಯವಹರಿಸಬಹುದು. ನಿನ್ನ ಸಂಪತ್ತನ್ನು “ಪುಣ್ಯ” ಆಗಿ ಬದಲಾವಣೆ ಮಾಡಿಕೊಳ್ಳು. ಶ್ರೀಮಂತನ ಮನಸ್ಸು ಹಾಗು ಆತ್ಮ ಎರಡೂ ಬಾಗಿಲು ತೆಗೆಯಿತು. ಭೀಕ್ಷುಕನಿಗೆ ಹೇಳಿದ ಬಹುಮಾನ ಕೊಟ್ಟು ಕಳುಹಿಸಿದ. ಆ ದಿನದಿಂದಲೇ, ತನ್ನ ಸಂಪತ್ತನ್ನು ಬಡವರಿಗೆ, ಕಷ್ಟದಲ್ಲಿರುವವರಿಗೆ ಧಾನ ಮಾಡಲು ಪ್ರಾರಂಭ ಮಾಡಿದ. ಅವನ ಸಂಪತ್ತು “ಪುಣ್ಯ”ಎಂಬ ಕರೆನ್ಸಿ ಗೆ ಬದಲಾವಣೆ ಆಗಲು ಪ್ರಾರಂಭ ಆಯಿತು.

ಪುಣ್ಯವೇ ಸ್ವರ್ಗದ ಕರೆನ್ಸಿ…

Advertisement

(ಸಂಗ್ರಹ : ಡಿಜಿಟಲ್‌ ಮೀಡಿಯಾ )

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಬ್ಬರ್‌ ಆಮದು | ರಬ್ಬರ್‌ ಬೆಳೆಗಾರರಿಗೆ ತರಲಿದೆ ಧಾರಣೆ ಸಂಕಷ್ಟ
June 24, 2025
9:02 PM
by: ದ ರೂರಲ್ ಮಿರರ್.ಕಾಂ
ಅಕ್ರಮವಾಗಿ ಅಡಿಕೆ ಸಾಗಣೆ ಪ್ರಕರಣ | ಪಶ್ಚಿಮ ಬಂಗಾಳದಲ್ಲಿ ಅಡಿಕೆ ವ್ಯಾಪಾರಿಯ ಬಂಧನ
June 24, 2025
8:41 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 24-06-2025 | ಬದಲಾಯ್ತು ಹವಾಮಾನ ಲಕ್ಷಣಗಳು | ಜೂ.28 ವರೆಗೂ ಉತ್ತಮ ಮಳೆ ನಿರೀಕ್ಷೆ |
June 24, 2025
11:51 AM
by: ಸಾಯಿಶೇಖರ್ ಕರಿಕಳ
ದಾಖಲೆ ಧಾರಣೆಯತ್ತ ಕೊಬ್ಬರಿ | ತಿಪಟೂರಿನಲ್ಲಿ ಕ್ವಿಂಟಾಲ್‌ ಗೆ ಗರಿಷ್ಠ ದರ 26,167 ರೂಪಾಯಿಗೆ ಮಾರಾಟ
June 24, 2025
11:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group