MIRROR FOCUS

ಕಡಿಮೆಯಾಗದ ಮಳೆ…… ! | ಮುಂಗಾರು ಮಾದರಿಯಲ್ಲಿ ಮೋಡಗಳ ಚಲನೆ…! | ಕೃಷಿಕನ ಕತೆ ಏನು ? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನವೆಂಬರ್‌ ತಿಂಗಳು ಅಂತ್ಯವಾಗುವ ಹೊತ್ತು ಬಂದಿದೆ. ಹಾಗಿದ್ದರೂ ಮಳೆ ಕಡಿಮೆಯಾಗಲಿಲ್ಲ..! . ಈ ಚಿಂತೆ ಈಗ ರಾಜ್ಯದ ಎಲ್ಲಾ ಕೃಷಿಕರನ್ನೂ ಕಾಡುತ್ತಿದೆ. ಈ ಚಿಂತೆಯ ಕಡೆಗೆ ಸರ್ಕಾರ ಚಿಂತನೆ ನಡೆಸಬೇಕಾದ ದಿನ ಹತ್ತಿರ ಇದೆ.

Advertisement

ಮಳೆ ಕಳೆದು ಚಳಿ ಆರಂಭವಾಗಬೇಕಾದ ಹೊತ್ತು, ಹಸಿರಾದ ಗಿಡದಲ್ಲಿ  ಪೈರು ಬೆಳೆದು ಕಟಾವಿನ ಹೊತ್ತು, ಹೊಸ ಫಸಲು ಕೈಸೇರುವ ಹೊತ್ತಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಇಡೀ ಕೃಷಿ ಸಮೂಹ ಸಂಕಷ್ಟ ಅನುಭವಿಸುತ್ತಿದೆ. ಭತ್ತ, ರಾಗಿ, ಜೋಳ, ಅಡಿಕೆ, ರಬ್ಬರ್‌ ಸೇರಿದಂತೆ ಎಲ್ಲಾ ಬೆಳೆಯ ಮೇಲೂ ಈಗ ಮಳೆಯ ಪರಿಣಾಮ ಹೆಚ್ಚಾಗುತ್ತಿದೆ. ಈಗ ನೋಡಿದರೆ ಇನ್ನೂ ಮಳೆ ಹೆಚ್ಚಾಗುವ ಅಥವಾ ಇನ್ನೂ ಕೆಲವು ದಿನ ಮಳೆಯಾಗುವ ಸೂಚನೆ ಇದೆ. ಏಕೆಂದರೆ ಅರಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಕಾಣುತ್ತಿವೆ. ಇದರ ಪರಿಣಾಮ ಮುಂಗಾರು ಮಳೆಯ ಮಾದರಿಯಲ್ಲಿ ಗಾಳಿಯ ಹಾಗೂ ಮೋಡಗಳ ಚಲನೆ ಕಾಣುತ್ತಿದೆ. ಒಂದು ವೇಳೆ ಹವಾಮಾನದ ಈ ಬದಲಾವಣೆ ಸರಿಯಾಗದೇ ಇದ್ದರೆ ಈ ವರ್ಷ ಎಲ್ಲಾ ಕೃಷಿಕರೂ ಸಂಕಷ್ಟ ಪಡಬೇಕಾಗಬಹುದು. ಅದರಲ್ಲೂ ಆಹಾರ ಬೆಳೆ ಸಂಕಷ್ಟಕ್ಕೆ ಸಿಲುಕಿದರೆ ಆಹಾರ ದಾಸ್ತಾನು ಮೇಲೂ ಪರಿಣಾಮ ಬೀರಬಹುದು  ಎಂಬ ವಿಶ್ಲೇಷಣೆ ಇದೆ.

ಅಕಾಲಿಕ ಮಳೆ ಕಾರಣದಿಂದ ಭತ್ತದ ಬೆಳೆ ಕೊಯ್ಲು ಮಾಡಿ, ಕಟಾವು ಆದ ಬೆಳೆಗಳನ್ನು ಒಣಗಿಸಲೂ ಆಗದೆ, ಸಂಸ್ಕರಿಸಲು ಆಗದೆ, ಇತ್ತ ಹೊಲದಲ್ಲಿ ಬೆಳೆಯನ್ನು ಬಿಡಲೂ ಆಗದೆ ಹಾಳಾಗುವ ಪರಿಸ್ಥಿತಿ ರೈತನದ್ದಾಗಿದೆ. ಚೆನ್ನಾಗಿ ಬಂದ ಬೆಳೆಯನ್ನು ನೋಡಿದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಈ ಸಾಲಿನಲ್ಲಿ ಭತ್ತ,ಜೋಳ, ಬಾಳೆ, ಅಡಿಕೆ, ರಾಗಿ, ಬೇಳೆ-ಕಾಳುಗಳು, ಈರುಳ್ಳಿ, ತರಕಾರಿ, ಸೊಪ್ಪು ಇನ್ನಿತರ ಬೆಳೆಗಳು ಈ ಮಳೆಯ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿದೆ.

 

ಅಡಿಕೆ ಬೆಳೆಗಾರರದೂ ಇದೇ ಸಮಸ್ಯೆ. ನವೆಂಬರ್‌ ಅಂತ್ಯದ ವೇಳೆಗೆ ಅಡಿಕೆ ಕಟಾವು ಮಾಡಿ ಒಣಗಿಸುವ ಕಾಲ. ಆದರೆ ಈ ಬಾರಿ ಮಳೆಯೇ ಕಡಿಮೆಯಾಗಲಿಲ್ಲ. ಹೀಗಾಗಿ ವಾತಾವರಣದ ಕಾರಣದಿಂದ ಅಡಿಕೆ ಬೇಗನೆ ಹಣ್ಣಾಗಿ ಬೀಳುತ್ತಿದೆ, ಮಳೆಯ ಕಾರಣದಿಂದ ಅಡಿಕೆ ಒಣಗಿಸಲಾಗದ ಸ್ಥಿತಿಯಾಗಿದೆ. ಹೀಗಾಗಿ ಸಂಕಷ್ಟದಿಂದ ಅಡಿಕೆ ಬೆಳೆಗಾರರು ಒದ್ದಾಟ ಮಾಡುತ್ತಿದ್ದಾರೆ.

ರಬ್ಬರ್‌ ಬೆಳೆಗಾರರದೂ ಅದೇ ಸ್ಥಿತಿ. ಪ್ಲಾಸ್ಟಿಕ್‌ ಅಳವಡಿಕೆ ಮಾಡಿ ರಬ್ಬರ್‌ ಟ್ಯಾಪಿಂಗ್‌ ಮಾಡುತ್ತಿದ್ದರೂ ರಬ್ಬರ್‌ ಒಣಗಿಸಲು ಸಂಕಷ್ಟ ಹಾಗೂ ಭಾರೀ ಮಳೆಯಾದರೆ ಟ್ಯಾಪಿಂಗ್‌ ಸಮಸ್ಯೆಯೂ ಕಾಡುತ್ತಿದೆ. ಚಳಿ ಆರಂಭವಾಗಬೇಕಾದ ಕಾರಣ ಇಳುವರಿಯಲ್ಲೂ ಕೊರತೆ ಇದೆ. ಕೇರಳದಲ್ಲಿ ಭಾರೀ ಮಳೆಯ ಕಾರಣದಿಂದ ಟ್ಯಾಪಿಂಗ್‌ ಬಹುತೇಕ ಕಡೆ ನಿಲ್ಲಿಸಲಾಗಿದೆ.

 

Koo App

#rain #ಮಳೆ #ಕೃಷಿ #agricultute ಅಕಾಲಿಕ‌ ಮಳೆಯ ಕಾರಣದಿಂದ ರಾಜ್ಯದ ಎಲ್ಲಾ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

The Rural Mirror (@ruralmirror) 20 Nov 2021

ಈ ಎಲ್ಲಾ ಕಾರಣದಿಂದ ಸರಕಾರ ಬಹುಬೇಗನೆ ಕೃಷಿಕರ ಕಡೆಗೆ ಗಮನಿಸಬೇಕಾಗಿದೆ.  ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಬೇಕಾಗಿದೆ. ಪ್ರತೀ ತಾಲೂಕಿನಲ್ಲಿ ಗ್ರಾಮಮಟ್ಟದಲ್ಲಿ ಪರಿಶೀಲನೆ, ಸಮೀಕ್ಷೆ ನಡೆಸಿ  ರೈತರಿಗೆ ಆದ ನಷ್ಟದ ಬಗ್ಗೆ ಗಮನಿಸಬೇಕಾಗಿದೆ, ಅಗತ್ಯ ಇದ್ದರೆ ಸಂಕಷ್ಟದಲ್ಲಿರುವ ರೈತರ ಪರವಾಗಿ ಉಳಿದ ಬೆಳೆಗೆ ಸರಿಯಾದ ಬೆಲೆ ಸಿಗುವ ವ್ಯವಸ್ಥೆ ಮಾಡಬೇಕಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…

4 hours ago

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ

ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ.  ಏಕೆಂದರೆ ಈಗ ಕರ್ಕಾಟಕ…

5 hours ago

ಬದುಕು ಕಲಿಸುವ ಪಾಠಗಳು

ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…

5 hours ago

82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ

ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…

5 hours ago

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

13 hours ago