ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾನುವಾರ ರಾತ್ರಿಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಹೊಳೆ, ನದಿಗಳು ತುಂಬಿ ಹರಿಯುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಹರಿಹರ ಕ್ಲಸ್ಟರ್ ನ ಬಹುತೇಕ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಸುಳ್ಯ ಬಿಇಒ ಪ್ರಕಟಣೆ ತಿಳಿಸಿದೆ.
ಮಳೆಯಿಂದ ಗ್ರಾಮೀಣ ಭಾಗದಲ್ಲೂ ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿದ್ದು , ಶಾಲಾ ಮಕ್ಕಳು ಹೊಳೆ ದಾಟುವುದು, ಕಿರುಸಂಕದ ಮೇಲೆ ನಡೆದಾಡುವುದು ಅಪಾಯಕಾರಿಯಾಗಿದೆ. ಬಹುತೇಕ ಗ್ರಾಮೀಣ ಭಾಗಗಳಲ್ಲಿ ಪಾಲ, ಕಿರು ಸಂಕ ದಾಟಿ ಮಕ್ಕಳು ಶಾಲೆಗೆ ಬರಬೇಕಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳು ಅಗತ್ಯವಾಗಿದೆ.ಇದಕ್ಕಾಗಿ ಭಾರೀ ಮಳೆಯ ಸಂದರ್ಭ ಶಾಲೆಗಳಿಗೆ ರಜೆ ಅನಿವಾರ್ಯವಾಗಿದೆ.(ಈಗಿನ ವಾತಾವರಣದ ಟ್ವೀಟ್ ವಿಡಿಯೋ ಇಲ್ಲಿದೆ..)
Weather condition Today Morning near #Kukkesubrahmanya #HeavyRains #Sulliarains #ಮಳೆ pic.twitter.com/KWIUAR5lMx
— theruralmirror (@ruralmirror) July 24, 2023
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel