ಮುಂಗಾರು ಪ್ರವೇಶ ಆದರೂ ಕಳೆದ ಹತ್ತು ದಿನಗಳಿಂದ ವರುಣ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದಾನೆ. ನಿರೀಕ್ಷೆಯಂತೆ ರಾಜ್ಯದ ಬಹುತೇಕ ಕಡೆ ಮಳೆ ಸುರಿದಿಲ್ಲ. ಇದೀಗ ಹವಾಮಾನ ಇಲಾಖೆ ಮತ್ತೆ ಎಚ್ಚರಿಕೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಜೂನ್ 20ರಿಂದ ಭಾರಿ ಮಳೆ #RainAlert ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗಲಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ದೇಶದಲ್ಲಿ ಮುಂದಿನ 4 ವಾರ ಮುಂಗಾರು ದುರ್ಬಲಗೊಳ್ಳಬಹುದು ಎಂದು ಮೂರು ದಿನಗಳ ಹಿಂದಷ್ಟೇ ಸ್ಕೈಮೆಟ್ ಅಂದಾಜಿಸಿತ್ತು. ಆದರೆ ಭಾರತೀಯ ಹವಾಮಾನ ಇಲಾಖೆ (IMD) ಮಳೆಯ ಸೂಚನೆ ನೀಡಿದೆ. ಮುಂದಿನ ಮೂರು ದಿನಗಳಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿರಲಿದೆ. ಕರ್ನಾಟಕ ಸೇರಿ ದೇಶದ ಬಹುತೇಕ ಭಾಗಗಳಲ್ಲಿ ಭಾನುವಾರದಿಂದ ಭಾರೀ ಮಳೆಯಾಗಲಿದೆ ಎಂದು IMD ತಿಳಿಸಿದೆ.
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ, ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ ವೇಗದಲ್ಲಿರಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ.
ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ಇವರ ವತಿಯಿಂದ, ಮೂರು ದಿನಗಳ 'ಸುಸ್ಥಿರ ಕೃಷಿ…
ರೈತ(Farmer) ಎಷ್ಟೇ ಧೈರ್ಯ ಮಾಡಿ ಏನೇ ಮಾಡಿದರು ನಷ್ಟ ಅನ್ನೋದು ಒಂದು ಕಡೆಯಿಂದ…
ಈ ಬಾರಿ ಮುಂಗಾರು(Mansoon) ಬೇಗ ಆರಂಭವಾಗುವ ನಿರೀಕ್ಷೆಯಿದೆ. ಬಿರು ಬಿಸಿಲಿನಿಂದ ತತ್ತರಿಸಿದ ಜನತೆಗೆ…
ತಾನು ಸತ್ತರು ಪರವಾಗಿಲ್ಲ, ಇನ್ನೊಬ್ಬರು ಬದುಕಬಾರದು ಅನ್ನುವ ಜಾಯಮಾನದ ದೇಶ ಪಾಕಿಸ್ತಾನ(Pakistana). ತನ್ನ…
ಈ ಪ್ರಕೃತಿಯಲ್ಲಿ(Nature) ಮನುಷ್ಯರಿಗಿಂತಲೂ(Human Being) ಪ್ರಾಣಿಗಳಿಗೇ(Animal) ಹೆಚ್ಚು ಬದುಕುವ ಹಕ್ಕಿದೆ. ಅವುಗಳ ಉಳಿವಿವಿಗಾಗಿ…
ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…