ಕರಾವಳಿ ಜಿಲ್ಲೆಯಲ್ಲಿ ಮುಂದುವರಿದ ಮಳೆ | ಹಲವು ಕಡೆ 100mm+ ಮಳೆ | ಕೆಲವು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ | ಮಕ್ಕಳಿಗೆ ರಜೆ….ಪೋಷಕರೇ ಇರಲಿ ಎಚ್ಚರ |

July 4, 2024
10:41 AM
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೆಲವು ತಾಲೂಕುಗಳಲ್ಲಿ ಶಾಲೆಗೆ ರಜೆ ನೀಡಲಾಗಿದೆ.

ಕರಾವಳಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆಯಾಗಿದೆ. ಭಾರೀ ಮಳೆಯ ಕಾರಣದಿಂದ ಕೆಲವು ತಾಲೂಕುಗಳ ಶಾಲೆಗಳಿಗೆ ರಜೆ ನೀಡಲಾಗಿದೆ. ರಜೆ ನೀಡಿದ ಬಳಿಕ ಮಕ್ಕಳ ಜವಾಬ್ದಾರಿ ಪೋಷಕರಿಗೆ. ಪೋಷಕರೇ ಈಗ ಇರಲಿ ಎಚ್ಚರ.…….. ಮುಂದೆ ಓದಿ ……

Advertisement
Advertisement

ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಯಿಂದ ಹಲವು ಕಡೆ ಸಣ್ಣಪುಟ್ಟ ಕುಸಿತ, ಗಾಳಿಗೆ ಮರ ಬೀಳುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾಗಿದೆ. ಗುರುವಾರ ಕೂಡಾ ಬೆಳಗ್ಗೆ ಮಳೆಯಾದ ಹಿನ್ನೆಲೆಯಲ್ಲಿ ಕೆಲವು ತಾಲೂಕಿನಲ್ಲಿ ಶಾಲೆಗಳಿಗೆ ಮುಂಜಾಗ್ರತಾಕ್ರಮವಾಗಿ ರಜೆ ನೀಡಲಾಗಿದೆ. ಕಳೆದ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಯ ಹಲವು ಕಡೆ ಉತ್ತಮ ಮಳೆಯಾಗಿದೆ.

ಕೊಲ್ಲಮೊಗ್ರದಲ್ಲಿ 76 ಮಿಮೀ, ಬಾಳುಗೋಡು 104 ಮಿಮೀ, ಮಡಪ್ಪಾಡಿ 77 ಮಿಮೀ,  ಸುಬ್ರಹ್ಮಣ್ಯ 144 ಮಿಮೀ,  ಕಲ್ಲಾಜೆ 140 ಮಿಮೀ, ಬಳ್ಪ 112 ಮಿಮೀ,  ಬಾಳಿಲ 75 ಮಿಮೀ, ಬೆಳ್ಳಾರೆ 50 ಮಿಮೀ , ಐವರ್ನಾಡು 102 ಮಿಮೀ, ಸುಳ್ಯ 81 ಮಿಮೀ, ಚೆಂಬು 84 ಮಿಮೀ, , ಕೋಡಿಂಬಾಳ 42 ಮಿಮೀ, ನೆಲ್ಯಾಡಿ 82 ಮಿಮೀ, ಪಾಣಾಜೆ 66 ಮಿಮೀ, ಪುತ್ತೂರು 55 ಮಿಮೀ, ಬೆಳ್ತಂಗಡಿ 78 ಮಿಮೀ, ಬಜಗೋಳಿ 160 ಮಿಮೀ,  ಕಾರ್ಕಳ 120 ಮಿಮೀ,  ಮಂಗಳೂರು 43 ಮಿಮೀ,  ಉಡುಪಿ 93 ಮಿಮೀ ಹಾಗೂ ಕುಂಬಳೆಯಲ್ಲಿ 73 ಮಿಮೀ ಮಳೆಯಾಗಿದೆ.

ಭಾರೀ ಮಳೆಯ ಕಾರಣದಿಂದ ಶಾಲೆಗೆ ರಜೆ ನೀಡಿರುವುದರಿಂದ ಪೋಷಕರ ಎಚ್ಚರ ವಹಿಸಬೇಕಿದೆ. ಮಳೆ ಹಾಗೂ ಮಳೆಗಾಲದ ನೀರಿನ ಆಟಗಳು ಮಕ್ಕಳನ್ನು ಸೆಳೆಯುತ್ತದೆ. ಪೋಷಕರು ಕೆಲಸದ ನಿಮಿತ್ತ ತೆರಳುವ ವೇಳೆ ಮಕ್ಕಳ ಕಡೆಗೂ ಗಮನ ನೀಡಬೇಕಿದೆ. ಮಕ್ಕಳು ಮಳೆಗಾಲ ನದಿ, ಕೆರೆ, ಹೊಳೆಯ ಕಡೆಗೆ ತೆರಳದಂತೆ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಕಾಲ ಕಳೆಯುವ ಹಾಗೆ ಗಮನಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಶಾಲೆಗೆ ರಜೆ ನೀಡುವುದು ಪೋಷಕರಿಗೆ ಹೆಚ್ಚು ಜವಾಬ್ದಾರಿಯಿಂದ ಇರಬೇಕಾಗುತ್ತದೆ.

Advertisement

All the taluks in the coastal district are experiencing heavy rainfall. Some areas have received over 100 mm of rain. School holidays have been declared in some taluks due to the downpour. Parents are reminded to take responsibility for their children during this time off. Be cautious, parents.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರಿಗೆ ಮತ್ತೊಮ್ಮೆ ಅಂತರಾಷ್ಟ್ರೀಯ ಮನ್ನಣೆ
June 25, 2025
6:52 AM
by: ದ ರೂರಲ್ ಮಿರರ್.ಕಾಂ
ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ : ರಾಘವೇಶ್ವರ ಶ್ರೀ
June 25, 2025
6:32 AM
by: The Rural Mirror ಸುದ್ದಿಜಾಲ
ಗಜಲಕ್ಷ್ಮೀ ರಾಜಯೋಗ – ಕೆಲವು ರಾಶಿಯವರಿಗೆ ಅದೃಷ್ಟ- ಸಿಗುವುದು ಯಶಸ್ಸು
June 25, 2025
6:28 AM
by: ದ ರೂರಲ್ ಮಿರರ್.ಕಾಂ
ರಬ್ಬರ್‌ ಆಮದು | ರಬ್ಬರ್‌ ಬೆಳೆಗಾರರಿಗೆ ತರಲಿದೆ ಧಾರಣೆ ಸಂಕಷ್ಟ
June 24, 2025
9:02 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group